ಆ್ಯಪ್ನಗರ

29ರಂದು ಸ್ಮತಿ ದಿನ, ವಸ್ತು ಪ್ರದರ್ಶನ

ಭಾರತೀಯ ವಿಕಾಸ ಟ್ರಸ್ಟ್‌, ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌ನ ಆಶ್ರಯದಲ್ಲಿ ಮತ್ತು ಮಣಿಪಾಲ ಸಿಂಡಿಕೇಟ್‌ ಬ್ಯಾಂಕ್‌ ಸಹಯೋಗದೊಂದಿಗೆ ಮಣಿಪಾಲದ ಮಹಾ ಚೇತನಗಳಾದ ಡಾ.ಟಿ.ಎಂ.ಎ. ಪೈ ಹಾಗೂ ಟಿ.ಎ. ಪೈ ಅವರ ಸ್ಮತಿ ದಿನ ಆಚರಣೆ ಮೇ 29ರಂದು ಬೆಳಗ್ಗೆ 10 ಗಂಟೆಗೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.

Vijaya Karnataka 19 May 2019, 5:00 am
ಉಡುಪಿ: ಭಾರತೀಯ ವಿಕಾಸ ಟ್ರಸ್ಟ್‌, ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌ನ ಆಶ್ರಯದಲ್ಲಿ ಮತ್ತು ಮಣಿಪಾಲ ಸಿಂಡಿಕೇಟ್‌ ಬ್ಯಾಂಕ್‌ ಸಹಯೋಗದೊಂದಿಗೆ ಮಣಿಪಾಲದ ಮಹಾ ಚೇತನಗಳಾದ ಡಾ.ಟಿ.ಎಂ.ಎ. ಪೈ ಹಾಗೂ ಟಿ.ಎ. ಪೈ ಅವರ ಸ್ಮತಿ ದಿನ ಆಚರಣೆ ಮೇ 29ರಂದು ಬೆಳಗ್ಗೆ 10 ಗಂಟೆಗೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
Vijaya Karnataka Web smati dina
29ರಂದು ಸ್ಮತಿ ದಿನ, ವಸ್ತು ಪ್ರದರ್ಶನ


ಮಣಿಪಾಲ ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್‌.ಶಾಂತಾರಾಮ್‌ ಮಣಿಪಾಲ ಮಹಾನ್‌ ಚೇತನಗಳ ಸಂಸ್ಮರಣೆಗೈಯಲಿದ್ದಾರೆ. ಸಿಂಡಿಕೇಟ್‌ ಬ್ಯಾಂಕ್‌ನ ಮಣಿಪಾಲ ವಲಯ ಕಚೇರಿ ಮಹಾಪ್ರಬಂಧಕ ಭಾಸ್ಕರ ಹಂದೆ ತರಕಾರಿ ಬೀಜಗಳನ್ನು ಬಿಡುಗಡೆಗೊಳಿಸಲಿದ್ದಾರೆ.

ಮಹಿಳಾ ಸಬಲೀಕರಣದ ಸವಾಲುಗಳು ವಿಷಯದಲ್ಲಿ ಡಾ.ಟಿ.ಎಂ.ಎ. ಪೈ ಶಿಕ್ಷ ಣ ಮಹಾವಿದ್ಯಾಲಯದ ಸಮನ್ವಯಾಧಿಕಾರಿ ಡಾ.ಮಹಾಬಲೇಶ್ವರ ರಾವ್‌ ದಿಕ್ಸೂಚಿ ಭಾಷಣಗೈಯಲಿದ್ದಾರೆ. ಪವರ್‌ ಸಂಸ್ಥೆ ಸ್ಥಾಪಕಾಧ್ಯಕ್ಷೆ ರೇಜು ಜಯರಾಮ್‌ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಿಂಡಿಕೇಟ್‌ ಬ್ಯಾಂಕ್‌ ಮತ್ತು ಭಾರತೀಯ ವಿಕಾಸ ಟ್ರಸ್ಟ್‌ ಪ್ರಾಯೋಜಕತ್ವದಲ್ಲಿ ಸಮಾರಂಭದಲ್ಲಿ ಭಾಗವಹಿಸುವವರಿಗೆಲ್ಲತರಕಾರಿ ಬೀಜಗಳನ್ನು ಉಚಿತ ವಿತರಿಸಲಾಗುವುದು.

ಬಿವಿಟಿಯಲ್ಲಿ ಹೊಲಿಗೆ, ಕಸೂತಿ, ಕರಕುಶಲತೆ ಮತ್ತು ಗೃಹ ಉತ್ಪನ್ನಗಳ ತರಬೇತಿ ಪಡೆದುಕೊಂಡಿರುವ ಮಹಿಳೆಯರು ತಾವೇ ತಯಾರಿಸಿದ ವಸ್ತುಗಳ ಪ್ರದರ್ಶನ ನೂತನ ರವೀಂದ್ರ ಮಂಟಪದ ಆವರಣದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ನಡೆಯಲಿದೆ ಎಂದು ಭಾರತೀಯ ವಿಕಾಸ ಟ್ರಸ್ಟ್‌ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ