ಆ್ಯಪ್ನಗರ

13ರಿಂದ ಸೌಕೂರು ಅಷ್ಟಬಂಧ ಬ್ರಹ್ಮಕಲಶಾಭಿಷೇಕ

ಸೌಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶಾಬಿಷೇಕ ಫೆ.13ರಿಂದ ಫೆ.15ರ ವರೆಗೆ ನಡೆಯಲಿದೆ.

Vijaya Karnataka 10 Feb 2019, 5:00 am
ವಂಡ್ಸೆ: ಸೌಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶಾಬಿಷೇಕ ಫೆ.13ರಿಂದ ಫೆ.15ರ ವರೆಗೆ ನಡೆಯಲಿದೆ.
Vijaya Karnataka Web 2


ಫೆ.13ರಂದು ಬೆಳಗ್ಗೆ 8ರಿಂದ ಗುರು ಗಣಪತಿ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ನಾಂದಿ ಮೊದಲಾದ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ, 12.30ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ. ಫೆ.14 ರಂದು ಬೆಳಗ್ಗೆ 6ರಿಂದ ಧಾರ್ಮಿಕ ಕಾರ್ಯಕ್ರಮ, 7.20ಕ್ಕೆ ಕುಂಭ ಲಗ್ನ ಸುಮುಹೂರ್ತದಲ್ಲಿ ರತ್ನಾನ್ಯಾಸಪೂರ್ವಕ ಶ್ರೀ ದುರ್ಗಾಪರಮೇಶ್ವರಿ ದೇವರ ಅಷ್ಟಬಂಧ ಪ್ರತಿಷ್ಠೆ, ಜೀವಕುಂಭ ಸೇಚನ, ಪ್ರಾಣ ಪ್ರತಿಷ್ಠಾ ಪೂಜೆ, ಪ್ರಸಾದ ವಿತರಣೆ, ಕಲಾತತ್ವ ಹೋಮ, ಪ್ರಾಯಶ್ಚಿತ ಹೋಮ, ಶಾಂತಿ ಹೋಮ, ಕಲಶಾಭಿಷೇಕ ಪೂರ್ವಕ ಮಹಾಪೂಜೆ , ಮೂಲಸ್ಥಾನಕ್ಕೆ ಬ್ರಹ್ಮ ಕಲಶ ಸ್ಥಾಪನೆ, ಗಣಪತಿ ದೇವರಿಗೆ ಬ್ರಹ್ಮಕಲಶ ಸ್ಥಾಪನೆ, ಈಶ್ವರ ದೇವರಿಗೆ ಬ್ರಹ್ಮಕಲಶ ಸ್ಥಾಪನೆ, ವೀರಭದ್ರ ದೇವರಿಗೆ ಬ್ರಹ್ಮ ಕಲಶ ಸ್ಥಾಪನೆ, ನಾಗದೇವರಿಗೆ ಬ್ರಹ್ಮಕಲಶ ಸ್ಥಾಪನೆ ತೀರ್ಥಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 4 ಕ್ಕೆ ಸಹಸ್ರ ಕುಂಭ ಸ್ಥಾಪನೆ, ಪಂಚಕುಂಡದಲ್ಲಿ ಅಧಿವಾಸ ಹೋಮ ನಡೆಯಲಿದೆ. ಫೆ.15ರಂದು ಬೆಳಗ್ಗೆ 7ರಿಂದ ಪೂರ್ಣಾಹುತಿ ಹೋಮ, ಸಹಸ್ರ ಕುಂಭಾಭಿಷೇಕ ಪ್ರಾರಂಭ, ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ, ಋುತ್ವಿಕ್‌ ಸಂಭಾವನೆ, ಫಲ ಮಂತ್ರಾಕ್ಷ ತೆ. ಮಧ್ಯಾಹ್ನ 12.30ಕ್ಕೆ ಶ್ರೀ ದೇವರಿಗೆ ಸಮರ್ಪಿಸಿದ ವಿಶೇಷ ಹಾಲು ಪರಮಾನ್ನದೊಂದಿಗೆ ಮಹಾ ಅನ್ನ ಸಂತರ್ಪಣೆ ಜರುಗಲಿದೆ.

ಫೆ.16ರಂದು ಶ್ರೀ ವೀರಭದ್ರ ದೇವರಿಗೆ ಢಕ್ಕೆ ಬಲಿ ಸೇವೆ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ