ಆ್ಯಪ್ನಗರ

ಮಕರ ಸಂಕ್ರಾಂತಿ: ಶ್ರೀಕೃಷ್ಣ ಮಠದಲ್ಲಿ ವೈಭವದ ತ್ರಿರಥೋತ್ಸವ

ಮಕರ ಸಂಕ್ರಾಂತಿ ಅಂಗವಾಗಿ ಉಡುಪಿ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ಶ್ರೀಕೃಷ್ಣ ಮಠದಲ್ಲಿ ಬ್ರಹ್ಮರಥ ಸಹಿತ ತ್ರಿರಥೋತ್ಸವ ಸೋಮವಾರ ಸಡಗರದಿಂದ ನಡೆಯಿತು.

Vijaya Karnataka 15 Jan 2019, 5:00 am
ಉಡುಪಿ: ಮಕರ ಸಂಕ್ರಾಂತಿ ಅಂಗವಾಗಿ ಉಡುಪಿ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ಶ್ರೀಕೃಷ್ಣ ಮಠದಲ್ಲಿ ಬ್ರಹ್ಮರಥ ಸಹಿತ ತ್ರಿರಥೋತ್ಸವ ಸೋಮವಾರ ಸಡಗರದಿಂದ ನಡೆಯಿತು.
Vijaya Karnataka Web 11


ಶ್ರೀಕೃಷ್ಣ, ಮುಖ್ಯಪ್ರಾಣ, ಅನಂತೇಶ್ವರ, ಚಂದ್ರಮೌಳೀಶ್ವರ ದೇವರ ಉತ್ಸವ ಮೂರ್ತಿಗಳನ್ನು ಮೂರು ರಥಗಳಲ್ಲಿ ಇರಿಸಿ ವೈಭವದಿಂದ ಪೂಜೆ ಸಲ್ಲಿಸಿ ಉತ್ಸವ ಹಮ್ಮಿಕೊಳ್ಳಲಾಯಿತು. ಸಾವಿರಾರು ಸಂಖ್ಯೆಯ ಭಕ್ತಾದಿಗಳು ದೇವರ ದರ್ಶನ ಪಡೆದರು. ತೆಪ್ಪೋತ್ಸವ ನಡೆದ ಬಳಿಕ ರಥೋತ್ಸವ ನಡೆಯಿತು. ರಥಬೀದಿಯಲ್ಲಿ ಭಕ್ತರು ಸೇರಿದ್ದರು. ವಿದ್ಯುತ್‌ ಅಲಂಕಾರಗಳಿಂದ ಶೃಂಗಾರ ಮಾಡಲಾಗಿತ್ತು. ಆಕರ್ಷಕ ಸುಡುಮದ್ದು, ನಾಸಿಕ್‌ ಬ್ಯಾಂಡ್‌ ರಥೋತ್ಸವ ಸೊಬಗನ್ನು ಇಮ್ಮಡಿಗೊಳಿಸಿತು.

ರಥಬೀದಿಗೆ ಅರ್ಧ ಸುತ್ತು ಬಂದಾಗ ಪಕ್ಕದಲ್ಲೇ ನಿರ್ಮಿಸಿದ್ದ ವೇದಿಕೆಯಲ್ಲಿ ಪಲಿಮಾರು ಮಠದ ತತ್ತ್ವಸಂಶೋಧನ ಸಂಸತ್‌ನ ಬೃಹತ್‌ ಯೋಜನೆಯಾದ ಅಷ್ಟಮಠ ಮತ್ತು ಸುಬ್ರಹ್ಮಣ್ಯ ಮಠದ ಪ್ರಾಚೀನ ತಾಳೆಪತ್ರ ಗ್ರಂಥಗಳನ್ನು ಆಧರಿಸಿ ಸಂಶೋಧಿಸಿ ಹೊರತಂದ ಮಹಾಭಾರತದ 24 ಬೃಹತ್‌ ಸಂಪುಟಗಳನ್ನು, ಗ್ರಂಥದ ಎಲೆಕ್ಟ್ರಾನಿಕ್‌ ಬುಕ್‌(ಇ-ಬುಕ್‌) ನಮೂನೆ, ಮಹಾಭಾರತದ ಕರ್ಣ ಪರ್ವ, ಶಲ್ಯ ಪರ್ವ, ಸ್ತ್ರೀಪರ್ವ, ಸೌಪ್ತಿಕ ಪರ್ವಗಳ ಕನ್ನಡ ಅವತರಣಿಕೆಯ ಸಂಪುಟಗಳನ್ನು ಲೋಕಾರ್ಪಣೆಗೊಳಿಸಲಾಯಿತು.

ಪೇಜಾವರ ಹಿರಿಯ ಶ್ರೀವಿಶ್ವೇಶ ತೀರ್ಥ ಶ್ರೀಪಾದರು, ಕಿರಿಯ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಕೃಷ್ಣಾಪುರ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು, ಅದಮಾರು ವಿಶ್ವಪ್ರಿಯತೀರ್ಥ ಶ್ರೀಪಾದರು, ಕಿರಿಯ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು, ಕಾಣಿಯೂರು ಶ್ರೀವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಸೋದೆ ಶ್ರೀವಿಶ್ವವಲ್ಲಭ ತೀರ್ಥ ಭಂಡಾರಕೇರಿ, ಶ್ರೀವಿದ್ಯಾಧೇಶ ತೀರ್ಥ ಶ್ರೀಪಾದರು, ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು, ಬನ್ನಂಜೆ ರಾಘವೇಂದ್ರ ತೀರ್ಥರು, ಸಂಶೋಧನ ಸಂಸತ್‌ ನಿರ್ದೇಶಕ ಡಾ. ವಂಶಿ ಕೃಷ್ಣಾಚಾರ್ಯ ಪುರೋಹಿತ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ