ಆ್ಯಪ್ನಗರ

ರಾಜ್ಯ ಮಟ್ಟದ ಜೈ ಭೀಮ್‌ ಕ್ರಿಕೆಟ್‌: ಉಡುಪಿ ಸ್ಟ್ರೈಕರ್ಸ್‌ಗೆ ಪ್ರಶಸ್ತಿ

ಇಲ್ಲಿನ ಬೋರ್ಡ್‌ ಶಾಲಾ ಮೈದಾನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪಡುಬಿದ್ರಿ(ಅಂಬೇಡ್ಕರ್‌ ವಾದ) ಘಟಕ ಆಶ್ರಯದಲ್ಲಿ ಶನಿವಾರ, ಭಾನುವಾರ ಎಸ್‌ಟಿ-ಎಸ್‌ಟಿಗಳಿಗಾಗಿ ನಡೆದ ರಾಜ್ಯಮಟ್ಟದ ಟೆನ್ನಿಸ್‌ಬಾಲ್‌ ಕ್ರಿಕೆಟ್‌ ಪಂದ್ಯಾಟದಲ್ಲಿ ಉಡುಪಿ ಸ್ಟ್ರೈಕರ್ಸ್‌ ತಂಡ ಜೈ ಭೀಮ್‌ ಟ್ರೋಫಿ-2018ರೊಂದಿಗೆ 44,444 ರೂ. ಗೆದ್ದುಕೊಂಡಿದೆ.

Vijaya Karnataka 3 Dec 2018, 5:00 am
ಪಡುಬಿದ್ರಿ: ಇಲ್ಲಿನ ಬೋರ್ಡ್‌ ಶಾಲಾ ಮೈದಾನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪಡುಬಿದ್ರಿ(ಅಂಬೇಡ್ಕರ್‌ ವಾದ) ಘಟಕ ಆಶ್ರಯದಲ್ಲಿ ಶನಿವಾರ, ಭಾನುವಾರ ಎಸ್‌ಟಿ-ಎಸ್‌ಟಿಗಳಿಗಾಗಿ ನಡೆದ ರಾಜ್ಯಮಟ್ಟದ ಟೆನ್ನಿಸ್‌ಬಾಲ್‌ ಕ್ರಿಕೆಟ್‌ ಪಂದ್ಯಾಟದಲ್ಲಿ ಉಡುಪಿ ಸ್ಟ್ರೈಕರ್ಸ್‌ ತಂಡ ಜೈ ಭೀಮ್‌ ಟ್ರೋಫಿ-2018ರೊಂದಿಗೆ 44,444 ರೂ. ಗೆದ್ದುಕೊಂಡಿದೆ.
Vijaya Karnataka Web 4


ಭಾನುವಾರ ಸಂಜೆ ನಡೆದ ಫೈನಲ್‌ನಲ್ಲಿ ಪಾಂಗಾಳ ಮಾಣಿಕ್ಯ ಕ್ರಿಕೆಟರ್ಸ್‌ ತಂಡವನ್ನು 14 ರನ್‌ಗಳಿಂದ ಸೋಲಿಸಿ ಸ್ಟ್ರೈಕರ್ಸ್‌ ಪ್ರಶಸ್ತಿ ಪಡೆಯಿತು. ಮಾಣಿಕ್ಯ ಕ್ರಿಕೆಟರ್ಸ್‌ ದ್ವಿತೀಯ ಪ್ರಶಸ್ತಿಯೊಂದಿಗೆ ನಗದು 22,222 ರೂ. ಪಡೆಯಿತು.

ವೈಯಕ್ತಿಕ ಪ್ರಶಸ್ತಿ: ಸ್ಟ್ರೈಕರ್ಸ್‌ ತಂಡದ ಉಮೇಶ್‌ ಫೈನಲ್‌ನ ಪಂದ್ಯಶ್ರೇಷ್ಠ ಪ್ರಶಸ್ತಿಯೊಂದಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಅತ್ಯುತ್ತಮ ಬ್ಯಾಟ್ಸ್‌ಮನ್‌ ಮತ್ತು ಅತ್ಯುತ್ತಮ ಬೌಲರ್‌ ಆಗಿ ಪಾಂಗಾಳ ಮಾಣಿಕ್ಯ ಕ್ರಿಕೆಟರ್ಸ್‌ನ ಸಂದೀಪ್‌ ಮತ್ತು ಅರುಣ್‌ ಪ್ರಶಸ್ತಿ ಪಡೆದರು.

ಬಹುಮಾನ ವಿತರಣೆ: ದಸಂಸ ರಾಜ್ಯ ಸಂಘಟನೆ ಸಂಚಾಲಕ ಸುಂದರ ಮಾಸ್ಟರ್‌ ಅಧ್ಯಕ್ಷ ತೆಯಲ್ಲಿ ನಡೆದ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ, ಅದಾನಿ-ಯುಪಿಸಿಎಲ್‌ ಜಂಟಿ ಅಧ್ಯಕ್ಷ ಕಿಶೋರ್‌ ಆಳ್ವ, ಜಿಪಂ ಸದಸ್ಯ ಶಶಿಕಾಂತ್‌ ಪಡುಬಿದ್ರಿ, ಕಾಪು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನವೀನ್‌ಚಂದ್ರ ಜೆ.ಶೆಟ್ಟಿ, ಹೋಟೆಲ್‌ ಅಮರ್‌ ಕಂಫರ್ಟ್ಸ್ ಮಾಲೀಕ ಮಿಥುನ್‌ ಆರ್‌.ಹೆಗ್ಡೆ, ಕಾಪು ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು, ದಸಂಸ ರಾಜ್ಯ ಸಂಘಟನೆ ಸಂಚಾಲಕ ಸುಂದರ ಗುಜ್ಜರಬೆಟ್ಟು, ಜಿಲ್ಲಾ ಟೆನ್ನಿಸ್‌ಬಾಲ್‌ ಕ್ರಿಕೆಟ್‌ ಅಸೋಸಿಯೇಶನ್‌ ಅಧ್ಯಕ್ಷ ಶರತ್‌ ಶೆಟ್ಟಿ, ದಸಂಸ ಅಂಬೇಡ್ಕರ್‌ ವಾದ ಅಧ್ಯಕ್ಷ ಲೋಕೇಶ್‌ ಅಂಚನ್‌, ದಲಿತ ದಮನಿತರ ಹೋರಾಟ ಸಮಿತಿ ಅಧ್ಯಕ್ಷ ಶ್ಯಾಮರಾಜ್‌ ಬಿರ್ತಿ, ದಸಂಸ ಜಿಲ್ಲಾ ಕಾನೂನು ಸಲಹೆಗಾರ ಎಸ್‌.ವಿಜಯ್‌, ಸುಧಾಕರ ಗುಜ್ಜರಬೆಟ್ಟು, ಪಂದ್ಯಾವಳಿ ನಿರ್ಣಾಯಕರಾದ ರಾಜೇಶ್‌ ಮತ್ತು ದೀಪಕ್‌ ಮುಖ್ಯಅತಿಥಿಗಳಾಗಿದ್ದರು.

ಸನ್ಮಾನ: ಈ ಸಂದರ್ಭ ರಾಜ್ಯ ಶ್ರೇಷ್ಠ ಶಿಕ್ಷ ಕ ಪ್ರಶಸ್ತಿ ವಿಜೇತರಾದ ಶಂಕರ ನಂಬಿಯಾರ್‌ ಮತ್ತು ಬೇಬಿ ಟೀಚರ್‌ ಅವರನ್ನು ಸಂಘಟಕರ ಪರವಾಗಿ ಸನ್ಮಾನಿಸಲಾಯಿತು.

ಧನ ಸಹಾಯ: ಅನಾರೋಗ್ಯ ಪೀಡಿತರಾದ 7 ಮಂದಿಗೆ ಸಂಸ್ಥೆಯ ವತಿಯಿಂದ ಧನ ಸಹಾಯ ವಿತರಿಸಲಾಯಿತು.

ವಸಂತಿ ಕಲ್ಲಟ್ಟೆ ಸ್ವಾಗತಿಸಿದರು. ವಿಠಲ ಮಾಸ್ಟರ್‌ ಕಾರ್ಯಕ್ರಮ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ