ಆ್ಯಪ್ನಗರ

ವಿದ್ಯಾರ್ಥಿಗಳಲ್ಲಿ ಗುರಿ ಸಾಧಿಸುವ ಛಲವಿರಬೇಕು: ವೀರೇಶಾನಂದಜೀ

ಕಲಿಕೆಗೆ ಏಕಾಗ್ರತೆ ಮುಖ್ಯ. ವಿದ್ಯಾರ್ಥಿ ಜೀವನದಲ್ಲಿ ಆಲಸ್ಯವಿರಬಾರದು. ವಿಶ್ವಾಸ, ಸತ್ಯನಿಷ್ಠೆ, ಸಮಾಧಾನಚಿತ್ತ, ಗುರಿ ಸಾಧಿಸುವ ಛಲವಿರಬೇಕೆಂದು ತುಮಕೂರು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದಜೀ ಹೇಳಿದ್ದಾರೆ.

Vijaya Karnataka 7 Jun 2019, 5:00 am
ಕಾರ್ಕಳ: ಕಲಿಕೆಗೆ ಏಕಾಗ್ರತೆ ಮುಖ್ಯ. ವಿದ್ಯಾರ್ಥಿ ಜೀವನದಲ್ಲಿ ಆಲಸ್ಯವಿರಬಾರದು. ವಿಶ್ವಾಸ, ಸತ್ಯನಿಷ್ಠೆ, ಸಮಾಧಾನಚಿತ್ತ, ಗುರಿ ಸಾಧಿಸುವ ಛಲವಿರಬೇಕೆಂದು ತುಮಕೂರು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದಜೀ ಹೇಳಿದ್ದಾರೆ.
Vijaya Karnataka Web KRL-6KV-BND


ಶ್ರೀಮದ್‌ ಭುವನೇಂದ್ರ ಪ್ರೌಢಶಾಲೆ ಶ್ರೀ ಭುವನೇಂದ್ರ ಸಾಹಿತ್ಯ ಸಂಘ ಹಾಗೂ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು.

ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದು ರಾಜ್ಯಮಟ್ಟದಲ್ಲಿ 5ನೇ ಸ್ಥಾನ ಗಳಿಸಿದ ಬಿ. ವಿಭಾ ಶೆಣೈ ಅವರನ್ನು ಸನ್ಮಾನಿಸಲಾಯಿತು,

ಶಾಲಾ ಪ್ರಶಾಸನ ಮಂಡಳಿ ಅಧ್ಯಕ್ಷ ಕೆ. ವಾಮನ ಕಾಮತ್‌, ಶಾಲಾ ಸಂಚಾಲಕ ಎಸ್‌. ನಿತ್ಯಾನಂದ ಪೈ., ಶಾಲಾ ಪ್ರಧಾನಾಚಾರ್ಯ ಪಿ. ಶ್ರೀಧರ ಆಚಾರ್‌, ಭುವನೇಂದ್ರ ವಿದ್ಯಾಶಾಲಾ ಮುಖ್ಯ ಶಿಕ್ಷ ಕಿ ವಿದ್ಯಾ ವಿ ಕಿಣಿ, ಬೆಂಗಳೂರು ರಾಮಕೃಷ್ಣ ಆಶ್ರಮದ ಕಾರ್ಯಕರ್ತ ಸುರೇಶ್‌ ಉಪಸ್ಥಿತರಿದ್ದರು.

ಪಿ. ಶ್ರೀಧರ ಆಚಾರ್‌ ಸ್ವಾಗತಿಸಿದರು. ಶಿಕ್ಷ ಕ ಗಣೇಶ್‌ ಜಾಲ್ಸೂರ್‌ ನಿರೂಪಿಸಿದರು. ಶಿಕ್ಷ ಕ ಸಂಜಯ ಕುಮಾರ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ