ಆ್ಯಪ್ನಗರ

ಸರಕಾರೀ ಜಾಗದಲ್ಲಿ ಮನೆ ಕಟ್ಟಿ ಕುಳಿತವರನ್ನು ಒಕ್ಕಲೆಬ್ಬಿಸುವುದಿಲ್ಲ

ಹೆಬ್ರಿ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ ಶನಿವಾರ ನಡೆಯಿತು. ಶಾಸಕ ವಿ. ಸುನಿಲ್‌ ಕುಮಾರ್‌ ಅಹವಾಲು ಸ್ವೀಕರಿಸಿ ಮಾತನಾಡಿ 94ಸಿ ಮತ್ತು ಡೀಮ್ಡ್‌ ಫಾರೆಸ್ಟ್‌ ಕಾಯ್ದೆಯಡಿ ಸರಕಾರಿ ಜಾಗದಲ್ಲಿ ಮನೆ ಕಟ್ಟಿ ಕುಳಿತವರನ್ನು ಒಕ್ಕಲೆಬ್ಬಿಸುತ್ತಾರೆಂಬ ಅಪಪ್ರಚಾರ ಮಾಧ್ಯಮಗಳಲ್ಲಿ ಕೇಳಿ ಬರುತ್ತಿದೆ. ಯಾವುದೇ ಕಾರಣಕ್ಕೂ ಸರಕಾರಿ ಜಾಗದಲ್ಲಿ ಮನೆ ಕಟ್ಟಿ ಕುಳಿತವರನ್ನು ದಾಖಲೆಗಳಿಲ್ಲ ಎಂದು ತೆರವುಗೊಳಿಸಲಾಗುವುದಿಲ್ಲ. ದಾಖಲೆಗಳನ್ನು ಮಾಡಿ ಕೊಡಲು ಯತ್ನಿಸಲಾಗುವುದು ಎಂದರು.

Vijaya Karnataka 3 Mar 2019, 5:00 am
ಹೆಬ್ರಿ: ಹೆಬ್ರಿ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ ಶನಿವಾರ ನಡೆಯಿತು. ಶಾಸಕ ವಿ. ಸುನಿಲ್‌ ಕುಮಾರ್‌ ಅಹವಾಲು ಸ್ವೀಕರಿಸಿ ಮಾತನಾಡಿ 94ಸಿ ಮತ್ತು ಡೀಮ್ಡ್‌ ಫಾರೆಸ್ಟ್‌ ಕಾಯ್ದೆಯಡಿ ಸರಕಾರಿ ಜಾಗದಲ್ಲಿ ಮನೆ ಕಟ್ಟಿ ಕುಳಿತವರನ್ನು ಒಕ್ಕಲೆಬ್ಬಿಸುತ್ತಾರೆಂಬ ಅಪಪ್ರಚಾರ ಮಾಧ್ಯಮಗಳಲ್ಲಿ ಕೇಳಿ ಬರುತ್ತಿದೆ. ಯಾವುದೇ ಕಾರಣಕ್ಕೂ ಸರಕಾರಿ ಜಾಗದಲ್ಲಿ ಮನೆ ಕಟ್ಟಿ ಕುಳಿತವರನ್ನು ದಾಖಲೆಗಳಿಲ್ಲ ಎಂದು ತೆರವುಗೊಳಿಸಲಾಗುವುದಿಲ್ಲ. ದಾಖಲೆಗಳನ್ನು ಮಾಡಿ ಕೊಡಲು ಯತ್ನಿಸಲಾಗುವುದು ಎಂದರು.
Vijaya Karnataka Web sunil


ಪ್ರಧಾನ ಮಂತ್ರಿಗಳ ಕೃಷಿ ಸಮ್ಮಾನ್‌ ಯೋಜನೆಯಲ್ಲಿ 5 ಎಕರೆವರೆಗೆ ಕೃಷಿಯನ್ನು ಹೊಂದಿದವರಿಗೆ 6 ಸಾವಿರ ಹಣವನ್ನು ಕೃಷಿಕರ ಖಾತೆಗೆ ವರ್ಗಾಯಿಸಲಾಗುವುದು. ಅರ್ಜಿಯನ್ನು ಪಂಚಾಯಿತಿಗಳಲ್ಲಿ ಸ್ವೀಕರಿಸಲಾಗುವುದು. ಹೆಬ್ರಿಯಲ್ಲಿ ಕಂದಾಯ ಇಲಾಖೆ ಮತ್ತು ತಹಸೀಲ್ದಾರ್‌ ಕಚೇರಿಯ ನಿರ್ವಹಣೆಯಾಗುತ್ತಿದೆ ಎಂಬುದನ್ನು ಸಾರ್ವಜನಿಕರ ಗಮನಕ್ಕೆ ತರಲು ಸಮಸ್ಯೆಗಳ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯುತ್ತಿವೆ. ಎರಡು ಜಿಲ್ಲೆಗಳಲ್ಲಿ ಅಸ್ಥಿತ್ವಕ್ಕೆ ಬಂದ ಹೊಸ ತಾಲೂಕುಗಳ ಪೈಕಿ ಮಿನಿ ವಿಧಾನ ಸೌಧ ನಿರ್ಮಣಕ್ಕೆ ಹೆಬ್ರಿಗೆ ಮೊಟ್ಟಮೊದಲ ಬಾರಿಗೆ 10 ಕೋಟಿ ಅನುದಾನ ಬಿಡುಗಡೆಯಾಗಿದೆ. ಒಂದೂವರೆ ವರ್ಷದೊಳಗೆ ಹೊಸ ತಾಲೂಕು ಕಚೇರಿ ನಿರ್ಮಾಣವಾಗಲಿದೆ ಎಂದರು.

ಹೆಬ್ರಿಯನ್ನು ಅಜೆಕಾರು ಹೋಬಳಿಯಿಂದ ಬೇರ್ಪಡಿಸಲು ಕ್ರಮ, ಹೆಬ್ರಿ ತಾಲೂಕು ಕಚೇರಿಯ ನಿರ್ವಹಣೆ, ಸಿಬ್ಬಂದಿಗಳ ಕೊರತೆ ಮೊದಲಾದ ಸಮಸ್ಯೆಗಳ ಪರಿಹಾರ ಕ್ರಮಕ್ಕೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಕಂದಾಯ ಇಲಾಖೆಗೆ ಆಡಳಿತ ನಿರ್ವಹಿಸಲು ಅನುಕೂಲ ಮಾಡಿಕೊಡಲಾಗುವುದು ಎಂದರು.

94ಸಿ ಹಕ್ಕುಪತ್ರ ವಿತರಣೆ, ಇಲಾಖೆಯಿಂದ ನಾನಾ ಪಿಂಚಣಿಗಳ ವಿತರಣೆ, ಅಹವಾಲು ಸ್ವೀಕಾರ ನಡೆಯಿತು.

ಹೆಬ್ರಿ ತಹಸೀಲ್ದಾರ್‌ ಕೆ. ಮಹೇಶ್ಚಂದ್ರ, ಜಿ.ಪಂ. ಸದಸ್ಯೆ ಜ್ಯೋತಿ ಹರೀಶ್‌, ಗ್ರಾ.ಪಂ. ಅಧ್ಯಕ್ಷ ರಾದ ಸುಗಂಧಿ ನಾಯ್ಕ ಶಿವಪುರ, ಜಲಜಾ ಪೂಜಾರ್ತಿ ನಾಡ್ಪಾಲು, ಎಚ್‌.ಕೆ. ಸುಧಾಕರ ಹೆಬ್ರಿ, ಉದ್ಯಮಿಗಳಾದ ಸತೀಶ್‌ ಪೈ, ಭಾಸ್ಕರ ಜೋಯಿಸ್‌, ತಾ.ಪಂ. ಸದಸ್ಯರಾದ ರಮೇಶ್‌ ಪೂಜಾರಿ, ಚಂದ್ರಶೇಖರ ಶೆಟ್ಟಿ, ಅಮೃತ್‌ ಕುಮಾರ್‌ ಶೆಟ್ಟಿ, ವಿವಿಧ ಪಂಚಾಯಿತಿ ಅಧಿಕಾರಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ