ಆ್ಯಪ್ನಗರ

ಬತ್ತಿದ ರಾಮಸಮುದ್ರ, ತಾವರೆಕೆರೆ: ಮೀನುಗಳ ಸಾವು

ಕಡುಬೇಸಿಗೆಯ ಪರಿಣಾಮ ಕಾರ್ಕಳ ಪುರಸಭೆ ವ್ಯಾಪ್ತಿಯ ರಾಮ ಸಮುದ್ರ ಹಾಗೂ ತಾವರೆ ಕೆರೆಗಳು ಬತ್ತಿ ಹೋಗಿದ್ದು, ಮೀನುಗಳು ಮೃತಪಟ್ಟಿದೆ.

Vijaya Karnataka 23 May 2019, 5:00 am
ಕಾರ್ಕಳ: ಕಡುಬೇಸಿಗೆಯ ಪರಿಣಾಮ ಕಾರ್ಕಳ ಪುರಸಭೆ ವ್ಯಾಪ್ತಿಯ ರಾಮ ಸಮುದ್ರ ಹಾಗೂ ತಾವರೆ ಕೆರೆಗಳು ಬತ್ತಿ ಹೋಗಿದ್ದು, ಮೀನುಗಳು ಮೃತಪಟ್ಟಿದೆ.
Vijaya Karnataka Web tavare


ಕಳೆದ ಒಂದು ವಾರದಿಂದ ಕೆರೆಗಳ ನೀರು ತಳ ಸೇರಿದ್ದು, ಎಲ್ಲಿ ಕಂಡರೂ ಹೂಳುಗಳೇ ತುಂಬಿರುವ ದೃಶ್ಯ ಕಾಣಸಿಗುತ್ತದೆ. ಕೆರೆಗಳಲ್ಲಿ ಪ್ರಾಣಿ- ಪಕ್ಷಿಗಳಿಗೂ ಕುಡಿಯಲೂ ನೀರಿಲ್ಲದ ದುಸ್ಥಿತಿ ನಿರ್ಮಾಣಗೊಂಡಿದೆ.

ನಾಶವಾಗುತ್ತಿರುವ ಮತ್ಸ್ಯ ಸಂತತಿ: ಕೆರೆಗಳಲ್ಲಿ ಈ ಮೊದಲು ಮೀನುಗಳು ಯಥೇಚ್ಚವಾಗಿದ್ದು, ಈ ಬಾರಿ ನೀರಿನ ಕೊರತೆಯಿಂದ ಮೀನುಗಳೆಲ್ಲ ಸಾವನ್ನಪ್ಪಿದೆ. ತಳ ಭಾಗದಲ್ಲಿರುವ ನೀರು ಬಿಸಿಲಿನ ಝಳಕ್ಕೆ ಬಿಸಿಯಾಗುತ್ತಿರುವ ಪರಿಣಾಮವಾಘಿ ಜಲಚರ ಜೀವಿಗಳು ಕೂಡ ಮೃತಪಟ್ಟು, ಇದ್ದ ನೀರಿನಲ್ಲಿ ತೇಲುತ್ತಿರುವುದು ಕಂಡು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ