ಆ್ಯಪ್ನಗರ

ದೇಶಭಕ್ತಿಯುಳ್ಳವರೇ ದೇಶದ ಪ್ರಧಾನಿಯಾಗಲಿ: ಪಲಿಮಾರು ಶ್ರೀ

ಭಾರತಾಂಬೆಯನ್ನು ಪ್ರತಿಯೊಬ್ಬರೂ ಪೂಜಿಸಬೇಕಿದೆ. ಶ್ರೀರಾಮ ದೇವರು ಕೂಡಾ ಪೂಜಿಸಿದ್ದರು. ಪ್ರಧಾನಿ ಮೋದಿಗೆ ಸಂಸತ್ತಿನ ಮೇಲೆ ಅಪಾರ ಗೌರವವಿದ್ದು, ಉತ್ತಮ ಆಳ್ವಿಕೆ ನೀಡಿದ್ದಾರೆ. ಇಂತಹ ನಾಯಕರೇ ನಮ್ಮನ್ನು ಆಳಬೇಕಿದೆ ಎಂದು ಪರ್ಯಾಯ ಫಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ನುಡಿದರು. ಅವರು ಟೀಮ್ ಮೋದಿ ಕರ್ನಾಟಕದ ವತಿಯಿಂದ ಮೋದಿ ಸಾಧನೆಗಳನ್ನು ಜನರಿಗೆ ಮುಟ್ಟಿಸುವ ಸಲುವಾಗಿ ಹಮ್ಮಿಕೊಂಡಿರುವ ಮೋದಿ ರಥಯಾತ್ರೆಗೆ ಶ್ರೀಕೃಷ್ಣ ಮಠದ ರಾಜಾಂಗಣದ ಮುಂಭಾಗ ಶನಿವಾರ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

Vijaya Karnataka Web 15 Feb 2019, 10:38 am
ಉಡುಪಿ: ದೇಶದ ಬಗ್ಗೆ ಅಭಿಮಾನ, ಗೌರವ, ದೇಶಭಕ್ತಿ ಇರುವವರೇ ಈ ದೇಶವನ್ನು ಆಳಬೇಕು. ಪ್ರಧಾನಿ ಮೋದಿ ಅವರಲ್ಲಿ ಇಂತಹ ಆದರ್ಶ ಗುಣವಿದೆ ಎಂದು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.
Vijaya Karnataka Web Modi Rath Yatra in Udupi


ಅವರು ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಟೀಮ್ ಮೋದಿ ಕರ್ನಾಟಕದ ವತಿಯಿಂದ ಮೋದಿ ಸಾಧನೆಗಳನ್ನು ಜನರಿಗೆ ಮುಟ್ಟಿಸುವ ಸಲುವಾಗಿ ಹಮ್ಮಿಕೊಂಡಿರುವ ಮೋದಿ ರಥಯಾತ್ರೆಗೆ ಶ್ರೀಕೃಷ್ಣ ಮಠದ ರಾಜಾಂಗಣದ ಮುಂಭಾಗ ಶನಿವಾರ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಭಾರತಾಂಬೆಯನ್ನು ಪ್ರತಿಯೊಬ್ಬರೂ ಪೂಜಿಸಬೇಕಿದೆ. ಶ್ರೀರಾಮ ದೇವರು ಕೂಡಾ ಪೂಜಿಸಿದ್ದರು. ಪ್ರಧಾನಿ ಮೋದಿಗೆ ಸಂಸತ್ತಿನ ಮೇಲೆ ಅಪಾರ ಗೌರವವಿದ್ದು, ಉತ್ತಮ ಆಳ್ವಿಕೆ ನೀಡಿದ್ದಾರೆ. ಇಂತಹ ನಾಯಕರೇ ನಮ್ಮನ್ನು ಆಳಬೇಕಿದೆ ಎಂದರು.

ಮೋದಿಗೆ ಸೇನೆಯ ಬಗ್ಗೆ ಅಪಾರ ಗೌರವವಿದೆ. ತಮ್ಮ ಹುಟ್ಟುಹಬ್ಬವನ್ನು ಅನೇಕ ಬಾರಿ ಸೈನಿಕರೊಂದಿಗೆ ಆಚರಿಸಿಕೊಂಡು ಧೈರ್ಯ ತುಂಬುವ ಕೆಲಸ ಮಾಡಿದ್ದರು. ವಿರೋಧಿಗಳ ಹೇಯಕೃತ್ಯಕ್ಕೆ ತಕ್ಕ ಉತ್ತರವೂ ಕೊಟ್ಟಿದ್ದರು. ಇವರ ಆಳ್ವಿಕೆಯಲ್ಲಿ ಸೈನಿಕರ ಆತ್ಮ ಸ್ಥೈರ್ಯ ತುಂಬುವ ಕೆಲಸವೂ ಆಗಿದೆ ಎಂದರು.

ಜಮ್ಮು ಕಾಶ್ಮೀರದಲ್ಲಿ ವಿರೋಧಿಗಳನ್ನು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದು, ಇದೊಂದು ಹೇಯ ಕೃತ್ಯ. ಸೈನಿಕರು ಸಾಹಸ ಮರೆಯಬೇಕೇ ಹೊರತು ಹೇಡಿಗಳಂತೆ ವರ್ತಿಸಬಾರದು. ಇದು ಖಂಡನೀಯ. ಹುತಾತ್ಮರ ಕುಟುಂಬಿಕರಿಗೆ ಸಾಂತ್ವನ ಹಾಗೂ ಸೈ‌ನಿಕರಿಗೆ ಧೈರ್ಯ ತುಂಬಿಸುವ ಕೆಲಸವಾಗಬೇಕಿದೆ. ಈ ಹುತಾತ್ಮ‌ ಹಾಗೂ ಯೋಧರಿಗೆ ದೇವರು ಒಳಿತು‌ ಮಾಡಲಿ ಎಂದು ಹಾರೈಸಿದರು.

ಈ ಸಂದರ್ಭ ಒಂದು ನಿಮಿಷದ ಮೌನ ಪ್ರಾರ್ಥಿಸಿ ಸಲ್ಲಿಸಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಾಯಿತು.

ಜ. 26 ರಂದು ಬೆಂಗಳೂರಿನಲ್ಲಿ ಎರಡು ಮೋದಿ ರಥಯಾತ್ರೆಗೆ ಚಾಲನೆ ಸಿಕ್ಕಿದ್ದು, ಈ ಪೈಕಿ ಒಂದು ರಥ ರಾಮನಗರ, ಮಂಡ್ಯ, ಮೈಸೂರು, ಮಡಿಕೇರಿ, ಚಿಕ್ಕಮಗಳೂರು, ಚಾಮರಾಜನಗರ, ಹಾಸನ, ದ.ಕ. ಜಿಲ್ಲೆ ಮುಗಿಸಿ ಉಡುಪಿಗೆ ಆಗಮಿಸಿದೆ. ಮುಂದೆ ಉತ್ತರ ಕನ್ನಡ, ಬೆಳಗಾಂ, ಧಾರವಾಡ, ಗದಗ ಮೂಲಕ ಶಿವಮೊಗ್ಗಕ್ಕೆ ತೆರಳಲಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ತನಕವೂ ಈ ರಥಯಾತ್ರೆ ರಾಜ್ಯದಾದ್ಯಂತ ಸಂಚರಿಸಿ ಮೋದಿ ಸಾಧನೆ ಬಿತ್ತರಿಸಲಿದೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು. ಕನಿಷ್ಠ 300 ಸೀಟ್ ಗೆಲ್ಲಬೇಕೆಂಬ ಗುರಿಯೊಂದಿಗೆ ಈ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಟೀಮ್ ಮೋದಿ ಉಡುಪಿ ತಂಡದ ಶಶಿಧರ್ ತಲ್ಲೂರಂಗಡಿ ತಿಳಿಸಿದ್ದಾರೆ.

ಅರುಣ್, ಬಸವ, ಸುಬ್ರಹ್ಮಣ್ಯ ಭಟ್, ಪ್ರಮೋದ್ ರಥಯಾತ್ರೆಯೊಂದಿಗೆ ಆಗಮಿಸಿದ್ದು, ಅಜಿತ್, ರವಿ ಹೇರೂರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ