ಆ್ಯಪ್ನಗರ

ಲಯನ್ಸ್‌ ಗವರ್ನರ್‌ ಡಾ.ತಲ್ಲೂರು ಶಿವರಾಮ ಶೆಟ್ಟಿಗೆ ಅಂತಾರಾಷ್ಟ್ರೀಯ ಗೌರವ

ಉಡುಪಿ: ಲಯನ್ಸ್‌ ಜಿಲ್ಲೆ 317ಸಿ ಗವರ್ನರ್‌ ಡಾ.ತಲ್ಲೂರು ಶಿವರಾಮ ಶೆಟ್ಟಿ ಯವರಿಗೆ ಉಡುಪಿ, ದಾವಣಗೆರೆ, ಶಿವಮೊಗ್ಗ ಹಾಗೂ ಚಿತ್ರದುರ್ಗಗಳನ್ನೊಳಗೊಂಡ ಲಯನ್ಸ್‌ ಜಿಲ್ಲೆ 317ಸಿ ಯಲ್ಲಿ ಸದಸ್ಯತ್ವ ಮತ್ತು ಕ್ಲಬ್‌ಗಳ ವಿಸ್ತರಣೆಯನ್ನು ಪರಿಗಣಿಸಿ ಅಂತರರಾಷ್ಟ್ರೀಯ ಗೌರವ ಲಭಿಸಿದೆ.

Vijaya Karnataka 13 Dec 2018, 5:00 am
ಉಡುಪಿ: ಲಯನ್ಸ್‌ ಜಿಲ್ಲೆ 317ಸಿ ಗವರ್ನರ್‌ ಡಾ.ತಲ್ಲೂರು ಶಿವರಾಮ ಶೆಟ್ಟಿ ಯವರಿಗೆ ಉಡುಪಿ, ದಾವಣಗೆರೆ, ಶಿವಮೊಗ್ಗ ಹಾಗೂ ಚಿತ್ರದುರ್ಗಗಳನ್ನೊಳಗೊಂಡ ಲಯನ್ಸ್‌ ಜಿಲ್ಲೆ 317ಸಿ ಯಲ್ಲಿ ಸದಸ್ಯತ್ವ ಮತ್ತು ಕ್ಲಬ್‌ಗಳ ವಿಸ್ತರಣೆಯನ್ನು ಪರಿಗಣಿಸಿ ಅಂತರರಾಷ್ಟ್ರೀಯ ಗೌರವ ಲಭಿಸಿದೆ.
Vijaya Karnataka Web TALLUR


ದುಬಾಯಿನಲ್ಲಿ ನಡೆದ 65 ರಾಷ್ಟ್ರಗಳ ಲಯನ್ಸ್‌ ಸಮ್ಮೇಳನದಲ್ಲಿ ಹಲವಾರು ಅಂತರರಾಷ್ಟ್ರೀಯ ನಾಯಕರು ಹಾÜಗೂ ಮಾಜಿ ಅಂತರರಾಷ್ಟ್ರೀಯ ಅಧ್ಯಕ್ಷ ರ ಸಮ್ಮುಖದಲ್ಲಿ ಪ್ರಸ್ತುತ ಅಂತರರಾಷ್ಟ್ರೀಯ ಲಯನ್ಸ್‌ ಅಧ್ಯಕ್ಷೆ ಗುಡ್ರೂನ್‌ ಯಂಗ್ವಾಡೋಟೇರಾ ಅವರು ಈ ಪ್ರತಿಷ್ಠಿತ 'ಇಂಟರ್‌ನ್ಯಾಶನಲ್‌ ಪ್ರೆಸಿಡೆಂಟ್ಸ್‌ ಅಪ್ರಿಸಿಯೇಶನ್‌ ಅವಾರ್ಡ್‌'ನ್ನು ಪ್ರದಾನ ಮಾಡಿ ಗೌರವಿಸಿದರು.

ಈ ಹಿಂದೆ ಕಳೆದ ಜುಲೈ 3ರಂದು ಅಮೇರಿಕಾದ ಲಾಸ್‌ವೆಗಾಸ್‌ನಲ್ಲಿ ಜರುಗಿದ 102ನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿಯೂ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ವಿಶೇಷ ಗೌರವ ಪ್ರಶಸ್ತಿ ಲಭಿಸಿದೆ.

ಫೋಟೊ 12ಯುಕೆ ತಲ್ಲೂರು :ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ಅಂತರರಾಷ್ಟ್ರೀಯ ಲಯನ್ಸ್‌ ಅಧ್ಯಕ್ಷೆ ಗುಡ್ರೂನ್‌ ಯಂಗ್ವಾಡೋಟೇರಾ ಅವರು 'ಇಂಟರ್‌ನ್ಯಾಶನಲ್‌ ಪ್ರೆಸಿಡೆಂಟ್ಸ್‌ ಅಪ್ರಿಸಿಯೇಶನ್‌ ಅವಾರ್ಡ್‌'ನ್ನು ಪ್ರದಾನ ಮಾಡಿ ಗೌರವಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ