ಆ್ಯಪ್ನಗರ

ಬೋಟ್‌ ನಾಪತ್ತೆ : ವಾರದೊಳಗೆ ಸ್ಪಷ್ಟ ಚಿತ್ರಣ ಕೊಡಿ, ತಪ್ಪಿದರೆ ಉಗ್ರ ಹೋರಾಟ

ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ಬೋಟ್‌ ಸಹಿತ 7 ಮೀನುಗಾರರು ಕಣ್ಮರೆಯಾಗಿ 57 ದಿನಗಳೇ ಕಳೆದಿವೆ. ಪ್ರಕರಣಕ್ಕೆ ಸಂಬಂಧಿಸಿ ಮಹತ್ತರ ಸುಳಿವು ಸಿಗದೆ ಕಂಗೆಟ್ಟಿರುವ ಮೀನುಗಾರರು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ವಾರದೊಳಗೆ ಸ್ಪಷ್ಟ ಚಿತ್ರಣಕ್ಕೆ ಗಡುವು ಕೊಟ್ಟಿದ್ದು, ತಪ್ಪಿದರೆ ರಾಜ್ಯದಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ ರವಾನಿಸಿದೆ.

Vijaya Karnataka 10 Feb 2019, 5:00 am
ಉಡುಪಿ: ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ಬೋಟ್‌ ಸಹಿತ 7 ಮೀನುಗಾರರು ಕಣ್ಮರೆಯಾಗಿ 57 ದಿನಗಳೇ ಕಳೆದಿವೆ. ಪ್ರಕರಣಕ್ಕೆ ಸಂಬಂಧಿಸಿ ಮಹತ್ತರ ಸುಳಿವು ಸಿಗದೆ ಕಂಗೆಟ್ಟಿರುವ ಮೀನುಗಾರರು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ವಾರದೊಳಗೆ ಸ್ಪಷ್ಟ ಚಿತ್ರಣಕ್ಕೆ ಗಡುವು ಕೊಟ್ಟಿದ್ದು, ತಪ್ಪಿದರೆ ರಾಜ್ಯದಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ ರವಾನಿಸಿದೆ.
Vijaya Karnataka Web the boat missing give a clear picture within the week
ಬೋಟ್‌ ನಾಪತ್ತೆ : ವಾರದೊಳಗೆ ಸ್ಪಷ್ಟ ಚಿತ್ರಣ ಕೊಡಿ, ತಪ್ಪಿದರೆ ಉಗ್ರ ಹೋರಾಟ


ಬೋಟ್‌ ನಾಪತ್ತೆಯಾದ ದಿನದಿಂದ ಶೋಧ ಮಾಡುತ್ತಿದ್ದೇವೆ ಎನ್ನುವ ಸರಕಾರಕ್ಕೆ ಇದುವರೆಗೆ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಇದು ಸಮುದ್ರದಲ್ಲಿ ನಮ್ಮ ದೇಶದ ರಕ್ಷಣೆಯನ್ನು ಮಾಡುವ ನೌಕಾಪಡೆ, ಕೋಸ್ಟ್‌ ಗಾರ್ಡ್‌ ನ ವೈಫಲ್ಯವೇ ಸರಿ. ಬೋಟ್‌ ಹಾಗೂ 7 ಮೀನುಗಾರರನ್ನು ಪತ್ತೆ ಹಚ್ಚಲು ಸಾಧ್ಯವಾಗದ ಇವರಿಂದ ದೇಶವನ್ನು ಭಯೋತ್ಪಾದಕರಿಂದ ರಕ್ಷಣೆ ಮಾಡುವುದು ಸಾಧ್ಯವೇ?

ಕಾಣೆಯಾಗಿರುವ 7 ಮೀನುಗಾರರ ಮನೆಯಲ್ಲಿ ದಿನ ಕಳೆಯುವುದು ಕಷ್ಟದ ಕೆಲಸ. ರಾಜ್ಯ ಹಾಗೂ ಕೇಂದ್ರದ ಜನಪ್ರತಿನಿಧಿಗಳು ಈ ಬಗ್ಗೆ ಕೀಳುವುದನ್ನೇ ಮರೆತು ಬಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ವಾರದೊಳಗೆ ಬೋಟ್‌ ಹಾಗೂ ಮೀನುಗಾರರಿಗೆ ಏನಾಗಿದೆ ಎನ್ನುವುದನ್ನು ತಿಳಿಸಬೇಕೆಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್‌ ಕುಂದರ್‌ ಆಗ್ರಹಿಸಿದ್ದಾರೆ.

ತನಿಖೆಯಲ್ಲಿ ಸುಳ್ಳು ಮಾಹಿತಿ: ಸುವರ್ಣ ತ್ರಿಭುಜ ಬೋಟ್‌ ನಾಪತ್ತೆಯಾದ ದಿನ ಹಾಗೂ ಅದೇ ಸಮಯದಲ್ಲಿ ಐಎನ್‌ಎಸ್‌ ಕೊಚ್ಚಿ ಹಡಗಿನ ಅಡಿ ಭಾಗಕ್ಕೆ ಹಾನಿಯಾಗಿರುವ ಬಗ್ಗೆ ಶಿಪ್‌ನವರೇ ಒಪ್ಪಿಕೊಂಡಿದ್ದು, ನಾವು ಹಾನಿಯಾದ ಶಿಪ್‌ನ ಚಿತ್ರ ನೋಡಿದ್ದೇವೆ. ಮಹಾರಾಷ್ಟ್ರದ ಮಲ್ವಾನ್‌ನ ಸಮುದ್ರದಾಳದಲ್ಲಿ ಸಿಕ್ಕ ಅವಶೇಷದಂತೆ ಕಂಡಿದ್ದು ಕೂಡಾ ಕಲ್ಲು ಎಂದು ಹೇಳಿಕೆ ನೀಡುವುದನ್ನು ನೋಡಿದರೆ ಪ್ರಕರಣದಲ್ಲಿ ನಮಗೆ ತಪ್ಪು ಮಾಹಿತಿ ಸಿಗುತ್ತಿದೆ ಎಂದು ಭಾಸವಾಗುತ್ತದೆ ಎಂದು ಸತೀಶ್‌ ಕುಂದರ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ