ಆ್ಯಪ್ನಗರ

ಶಿರ್ವ ಪಾಲಮೆಯಲ್ಲಿ ಬಾವಿಗೆ ಬಿದ್ದ ಚಿರತೆ ರಕ್ಷ ಣೆ

ಶಿರ್ವ ಗ್ರಾಪಂ ವ್ಯಾಪ್ತಿಯ ಪಾಲಮೆ ಎಂಬಲ್ಲಿ ಜನವಸತಿ ಪ್ರದೇಶಕ್ಕೆ ನುಗ್ಗಿ, ಬಾವಿಗೆ ಬಿದ್ದು ಬಂಧಿಯಾಗಿದ್ದ ಚಿರತೆಯೊಂದನ್ನು ಅರಣ್ಯಾಧಿಕಾರಿಗಳು ಗುರುವಾರ ರಕ್ಷಿಸಿದ್ದಾರೆ.

Vijaya Karnataka 8 Mar 2019, 5:00 am
ಕಟಪಾಡಿ: ಶಿರ್ವ ಗ್ರಾಪಂ ವ್ಯಾಪ್ತಿಯ ಪಾಲಮೆ ಎಂಬಲ್ಲಿ ಜನವಸತಿ ಪ್ರದೇಶಕ್ಕೆ ನುಗ್ಗಿ, ಬಾವಿಗೆ ಬಿದ್ದು ಬಂಧಿಯಾಗಿದ್ದ ಚಿರತೆಯೊಂದನ್ನು ಅರಣ್ಯಾಧಿಕಾರಿಗಳು ಗುರುವಾರ ರಕ್ಷಿಸಿದ್ದಾರೆ.
Vijaya Karnataka Web 222


ಸಾಕುನಾಯಿಗಳ ಬೇಟೆಗೆ ಹೊಂಚು ಹಾಕಿ ಜನವಸತಿ ಪ್ರದೇಶಕ್ಕೆ ಬಂದ ಚಿರತೆ ಗುರುವಾರ ಬೆಳಗ್ಗಿನ ಜಾವ ಪಿಯೋಸ್‌ ಮೋರಿಸ್‌ ಎಂಬವರ ಮನೆಯ ಬಾವಿಗೆ ಅಕಸ್ಮಿಕವಾಗಿ ಬಿದ್ದಿದೆ. ತಕ್ಷ ಣವೇ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಅಧಿಕಾರಿಗಳು ಸಾರ್ವಜನಿಕರ ನೆರವಿನೊಂದಿಗೆ ಚಿರತೆಯನ್ನು ರಕ್ಷಿಸಿದ್ದಾರೆ.

ಬಾವಿಗೆ ಬೋನು ಇಳಿಸಿ ಕಾರ್ಯಾಚರಣೆ: ಬಾವಿಗೆ ಬಿದ್ದು ಸಿಟ್ಟುಗೊಂಡು ಘರ್ಜಿಸುತ್ತಿದ್ದ ಚಿರತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಬಾವಿಯನ್ನು ಮೇಲೆ ಬಲೆಯಿಂದ ಮುಚ್ಚಿ ಸೂಕ್ತ ಬಂದೋಬಸ್ತ್‌ ಮಾಡಿಕೊಂಡ ಅಧಿಕಾರಿಗಳು ಬಾವಿಗೆ ಬೋನನ್ನು ಇಳಿಸಿ ಉಪಾಯದಿಂದ ಚಿರತೆಯನ್ನು ಬೋನಿನೊಳಗೆ ಬರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಾವಿಯಲ್ಲಿ ನೀರಿದ್ದ ಕಾರಣ ಚಿರತೆ ಯಾವುದೇ ಗಾಯಗಳಿಲ್ಲದೆ ಪಾರಾಗಿತ್ತು. ನೀರಿನ ಮೇಲಿನ ಆಸರೆಯೊಂದರ ಸಹಾಯದಿಂದ ಪಾರಾಗಿದ್ದ ಚಿರತೆಯನ್ನು ಯಶಸ್ವಿಯಾಗಿ ಬೋನಿಗೆ ಬೀಳಿಸಿ ರಕ್ಷಿಸಲಾಯಿತು. ಬಳಿಕ ಚಿರತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಕೊಲ್ಲೂರಿನ ರಕ್ಷಿತಾರಣ್ಯ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್‌ ಲೋಬೋ ಮಾರ್ಗದರ್ಶನದಲ್ಲಿ ಪಡುಬಿದ್ರಿ ವಲಯದ ಉಪ ಅರಣ್ಯಾಧಿಕಾರಿಗಳಾದ ನಾಗೇಶ್‌ ಬಿಲ್ಲವ, ಜಯರಾಮ ಹಾಗೂ ಅರಣ್ಯ ರಕ್ಷ ಕರಾದ ಜಯರಾಮ ಶೆಟ್ಟಿ, ಗಣಪತಿ ನಾಯ್ಕ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಶಿರ್ವ, ಬಂಟಕಲ್‌, ಬೆಳ್ಳೆ ಪರಿಸರದಲ್ಲಿ ಪದೇ ಪದೆ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಈ ಹಿಂದೆಯೂ ಎರಡು-ಮೂರು ಬಾರಿ ಚಿರತೆಯನ್ನು ಸೆರೆಹಿಡಿಯಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ