ಆ್ಯಪ್ನಗರ

ಹಿರಿಯಡ್ಕದಲ್ಲಿ ಪುತ್ತಿಗೆ ವಿದ್ಯಾಪೀಠದ ಘಟಿಕೋತ್ಸವ

ವೈವಾಹಿಕ, ಹಣ ಮಾಡುವ ಆತುರದಂತಹ ವಾಮ ಮಾರ್ಗವನ್ನು ಜನತೆ ಅನುಸರಿಸದೆ ತಡೆದುಕೊಳ್ಳುವುದೇ ನೈಜ ತಪಸ್ಸು ಎಂದು ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ತಿಳಿಸಿದ್ದಾರೆ.

Vijaya Karnataka 18 May 2019, 5:00 am
ಉಡುಪಿ: ವೈವಾಹಿಕ, ಹಣ ಮಾಡುವ ಆತುರದಂತಹ ವಾಮ ಮಾರ್ಗವನ್ನು ಜನತೆ ಅನುಸರಿಸದೆ ತಡೆದುಕೊಳ್ಳುವುದೇ ನೈಜ ತಪಸ್ಸು ಎಂದು ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ತಿಳಿಸಿದ್ದಾರೆ.
Vijaya Karnataka Web 111


ಹಿರಿಯಡ್ಕದ ಪುತ್ತಿಗೆ ಮೂಲಮಠದಲ್ಲಿ ಶುಕ್ರವಾರ ನಡೆದ ಪುತ್ತಿಗೆ ವಿದ್ಯಾಪೀಠದ 35ನೇ ಘಟಿಕೋತ್ಸವದಲ್ಲಿ ಮಂಗಳಾನುವಾದ ಮಾಡಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಬಂಗಾರದ ಕಂಕಣದೊಂದಿಗೆ ಪ್ರಮಾಣ ಪತ್ರದೊಂದಿಗೆ ಆಶೀರ್ವಚನ ನೀಡಿದರು.

ಆಧುನಿಕ ಜಗತ್ತೇ ಆತುರಾತುರವಾಗಿದ್ದು ವಿದ್ಯಾಪೀಠಗಳಲ್ಲಿರುವ ವಿದ್ಯಾರ್ಥಿಗಳು ಎಲ್ಲ ವಿಧದ ಸೆಳೆತ ಆತುರಗಳನ್ನು ತಡೆದುಕೊಂಡು ಉತ್ತಮ ಅಧ್ಯಯನವನ್ನು ಮಾಡಿ ಪದವಿಯನ್ನು ಉತ್ತಮ ಶ್ರೇಣಿಯಲ್ಲಿ ಪಡೆದುಕೊಳ್ಳುವುದೇ ದೊಡ್ಡ ತಪಸ್ಸು. ಇದನ್ನೇ ಶ್ರೀವಾದಿರಾಜರು ತಾಳುವಿಕೆಗಿಂತ ತಪವು ಇಲ್ಲ ಎಂದು ಉಪದೇಶಿಸಿದ್ದಾರೆ ಎಂದು ಎಂದರು.

ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರು ಮಾಯಾವಾದ ಖಂಡನ ಗ್ರಂಥದ ಅನುವಾದ ಮಾಡಿದರು. ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಮಣಿಮಂಜರಿ ಕಾವ್ಯದ ಅನುವಾದ ಮಾಡಿದರು.

ಘಟಿಕೋತ್ಸವದ ನಿಮಿತ್ತ ವಿದ್ವಾನ್‌ ಅಡ್ವೆ ಲಕ್ಷ್ಮೀಶ ಆಚಾರ್ಯ, ಹೆಬ್ರಿ ಗೋಪಾಲಾಚಾರ್ಯ, ಪಳ್ಳಿ ಪುಟ್ಟಣ್ಣ ಭಟ್‌ ಇವರಿಗೆ ನರಸಿಂಹಾನುಗ್ರಹ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ವಿದ್ವಾನ್‌ ಬಿ.ಗೋಪಾಲಾಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಪ್ರಾಚಾರ್ಯ ವಿದ್ವಾನ್‌ ಸುನಿಲ್‌ ಆಚಾರ್ಯ ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ