ಆ್ಯಪ್ನಗರ

ಉಡುಪಿ: ಎಲ್ಲರ ಸಹಕಾರದಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ಎಂದ ಪೇಜಾವರ ಶ್ರೀ

ಎಲ್ಲರ ಸಹಕಾರದಿಂದ ರಾಮ ಮಂದಿರ ನಿರ್ಮಾಣವಾಗುತ್ತಿದೆ. ನಿಮ್ಮ ಕೈಲಾಗುವ ಸಹಕಾರ ನೀಡಿ ರಾಮ ಮಂದಿರವನ್ನು ನಮ್ಮೆಲ್ಲರ ಶ್ರದ್ಧಾ ಕೇಂದ್ರ ಮಾಡೋಣ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಹೇಳಿದ್ದು, ದಲಿತ ಕಾಲೋನಿಗೆ ತೆರಳಿ ಅನುಗ್ರಹ ಸಂದೇಶ ನೀಡಿದರು.

Vijaya Karnataka Web 20 Dec 2020, 10:58 pm
ಉಡುಪಿ: ಮಾತೆರೆನ ಸಹಕಾರೊಡ್ ಅಯೋಧ್ಯೆದ ರಾಮ ಜನ್ಮ ಭೂಮಿಡ್ ಮಂದಿರ ನಿರ್ಮಾಣ ಅವೊಂದುಂಡ್ (ಎಲ್ಲರ ಸಹಕಾರದೊಂದಿಗೆ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗುತ್ತಿದೆ). ಎಂಕುಲು ದೆಹಲಿದ ನಾಯಕರೆಡ್ಡ್ ಹಳ್ಳಿದ ಜನಸಾಮಾನ್ಯೆರೆನ್ ಸಂಪರ್ಕ ಮಲ್ತುದ್ ಸಹಕಾರ ಕೇನೊಂದುಲ್ಲ(ನಾವು ದೆಹಲಿ ನಾಯಕರಿಂದ ಹಳ್ಳಿಯ ಸಾಮಾನ್ಯರನ್ನು ಸಂಪರ್ಕಿಸುತ್ತಿದ್ದೇವೆ).
Vijaya Karnataka Web UDUPISHRE
ರಾಮ ದೀಪವನ್ನು ಹಸ್ತಾಂತರಿಸಿ ದೀಪ ಬೆಳಗಿಸಿದ ಪೇಜಾವರ ಶ್ರೀ


ಹೀಗೆ ತುಳುವಿನಲ್ಲಿ ಸಂಭಾಷಣೆ ನಡೆಸುತ್ತಾ ಕೊಡವೂರು ಪಾಳೆಕಟ್ಟೆ ಬಾಚನಬೈಲು ರಸ್ತೆಯ ದಲಿತ ಕಾಲೋನಿಗೆ ತೆರಳಿ ನಿಮ್ಮ ಕೈಲಾಗುವ ಸಹಕಾರ ನೀಡಿ ರಾಮ ಮಂದಿರವನ್ನು ನಮ್ಮೆಲ್ಲರ ಶ್ರದ್ಧಾ ಕೇಂದ್ರ ಮಾಡೋಣ ಎಂದಿದ್ದು ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟಸ್ಟ್‌ನ ಸದಸ್ಯ ಹಾಗೂ ಪೇಜಾವರ ಮಠದ ಶ್ರೀವಿಶ್ವ ಪ್ರಸನ್ನ ತೀರ್ಥ ಶ್ರೀಗಳು.

ನಿತ್ಯವೂ ಶ್ರೀರಾಮನ ಸ್ಮರಣೆ ಮಾಡಿದರೆ ಬದುಕಿನ ಅಪತ್ತು ದೂರವಾಗುತ್ತದೆ. ಲೋಕಕ್ಕೆ ಅನುಗ್ರಹ ಪ್ರಾಪ್ತಿಯಾಗುತ್ತದೆ. ರಾಮ ಮಂದಿರವನ್ನು ಯಾರೋ ಬಲಿಷ್ಠರೊಬ್ಬರು ಮಾಡಬಾರದು. ಸಮಸ್ತ ಹಿಂದೂ ಬಾಂಧವರ ಸಹಕಾರದೊಂದಿಗೆ ಮಂದಿರ ನಿರ್ಮಾಣವಾಗಬೇಕು. ಈ ಮೂಲಕ ಮಂದಿರವನ್ನು ನಮ್ಮೆಲ್ಲರ ಶ್ರದ್ಧಾ ಕೇಂದ್ರವಾಗಿಸಬೇಕೆಂದರು.

ರಾಮ ಜನ್ಮ ಭೂಮಿಯನ್ನು ಸರ್ವೋಚ್ಛ ನ್ಯಾಯಾಲಯ ಹಿಂದೂ ಸಮಾಜಕ್ಕೆ ಒಪ್ಪಿಸಿ ಮಂದಿರ ನಿರ್ಮಾಣ ಜವಾಬ್ದಾರಿಯನ್ನು ಟ್ರಸ್ಟ್‌ಗೆ ವಹಿಸಿದೆ. ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಸಕಲ ಸಿದ್ಧತೆ ನಡೆಯುತ್ತಿದ್ದು, ಈ ಮಂದಿರ ನಿರ್ಮಾಣದ ಜತೆಜತೆಗೆ ಹಿಂದೂ ಧರ್ಮದ ಪುನರುತ್ಥಾನವಾಗಬೇಕು. ರಾಮ ರಾಜ್ಯದ ಕನಸ್ಸು ನನಸಾಗಬೇಕೆಂದರು.

ರೈತ ಹೋರಾಟದಲ್ಲಿ ತುಕ್ಡೇ ಗ್ಯಾಂಗ್, ಪ್ರತಿಪಕ್ಷಗಳ ಢೋಂಗಿತನ, ರಾಜಕೀಯಕ್ಕಾಗಿ ಮೋದಿ, ಬಿಜೆಪಿ ವಿರೋಧ: ಶೋಭಾ ಕರಂದ್ಲಾಜೆ

ರಾಮ ಸೇತುವೆ ನಿರ್ಮಾಣಕ್ಕೆ ಅಳಿಲು ಸೇವೆ ಮಾಡಿರುವಂತೆ ಮಂದಿರ ನಿರ್ಮಾಣ ಕಾರ್ಯಕ್ಕೆ ಪ್ರತಿಯೊಬ್ಬರ ಸಹಕಾರ ಹಾಗೂ ಸಹಭಾಗಿತ್ವದ ಅವಶ್ಯಕ್ಕಾಗಿ ಸಮಸ್ತ ಹಿಂದೂ ಬಾಂಧವರನ್ನು ಭೇಟಿ ಮಾಡುತ್ತಿದ್ದೇವೆ. ಮಕರ ಸಂಕ್ರಾತಿಯ ಬಳಿಕ ನಿಧಿ ಸಮರ್ಪಣೆ ಅಭಿಯಾನ ನಡೆಯಲಿದೆ. ನಿಮ್ಮಿಂದಾಗುವಷ್ಟು ಸಹಾಯ ಮಾಡಿ. ಮನೆ ಮನೆಯಲ್ಲಿ ರಾಮನಿಗಾಗಿ ದೀಪ ಬೆಳಗಿ ರಾಮಮಂತ್ರ ಜಪ ನಡೆಸಿ ಎಂದು ಸಲಹೆ ನೀಡಿದರು.

ನಗರಸಭಾ ಸದಸ್ಯ ವಿಜಯ ಕೊಡವೂರು, ವಿಹಿಂಪ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ಭಜನಾ ಮಂದಿರ ಅಧ್ಯಕ್ಷ ಜಯ ಸಾಲ್ಯಾನ್, ಮಾಜಿ ಅಧ್ಯಕ್ಷ ಮಾಧವ ಕರ್ಕೇರ, ಜೀವನ್ ಪಾಳೆಕಟ್ಟೆ, ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ, ಶ್ರೀಗಳ ಆಪ್ತ ಕಾರ್ಯದರ್ಶಿ ಕೃಷ್ಣಮೂರ್ತಿ ಭಟ್, ವಿಷ್ಣುಮೂರ್ತಿ ಭಟ್ ಉಪಸ್ಥಿತರಿದ್ದರು.

ಗೋಕಳ್ಳತನ ಕೇಸ್‌ನಲ್ಲಿ ಕಾರ್ಕಳ ಭಜರಂಗದಳದ ಮಾಜಿ ಸಂಚಾಲಕ ಅನಿಲ್‌ ಪ್ರಭು ಬಂಧನ

ಗುರುಗಳಂತೆ ಶಿಷ್ಯರ ದಲಿತ ಕಾಲೋನಿ ಭೇಟಿ
ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಈ ಹಿಂದೆ ಅನೇಕ ಬಾರಿ ದಲಿತ ಕಾಲೋನಿಗೆ ಭೇಟಿ ನೀಡಿ ಸಂಚಲನ ಮೂಡಿಸಿದ್ದರು. ಗುರುಗಳು ತೋರಿಸಿಕೊಟ್ಟ ದಾರಿಯನ್ನು ನಡೆಸುವುದಾಗಿ ತಿಳಿಸಿದ ಪೇಜಾವರ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಕೊಡವೂರು ವಾರ್ಡ್‍ನ ಪಾಳೆಕಟ್ಟೆ ಪರಿಶಿಷ್ಟ ಪಂಗಡದ ಬಡಾವಣೆಗೆ ಭಾನುವಾರ ಮೊದಲ ಭೇಟಿ ನೀಡಿದರು.

ಮೊದಲಿಗೆ ಕೊಡವೂರಿನ ದೇವರಬೆಟ್ಟು ಶ್ರೀಬಬ್ಬುಸ್ವಾಮಿ ಕ್ಷೇತ್ರಕ್ಕೆ ತೆರಳಿದರು. ಆ ಬಳಿಕ ದಲಿತ ಕಾಲೋನಿಯ ಮುಖಂಡರಿಬ್ಬರ ಮನೆಗೆ ಪ್ರವೇಶಿಸಿದರು. ಶ್ರೀಗಳ ಪಾದಕ್ಕೆ ನೀರು ಹಾಕಿ ಮನೆಗೆ ಬರ ಮಾಡಿಕೊಂಡರು. ಕೆ. ಮಾಧವ ಕರ್ಕೇರ, ರವಿ ಕರ್ಕೇರಾ ಹಾಗೂ ಸದಾನಂದ ಎಂಬುವವರ ಮನೆಗೆ ತೆರಳಿದ ಶ್ರೀಗಳು ಮಠದಿಂದ ಕೊಡ ಮಾಡಿದ ರಾಮ ದೀಪವನ್ನು ಹಸ್ತಾಂತರಿಸಿ ದೀಪ ಬೆಳಗಿಸಿದರು.

ಮನೆ ಮಂದಿಯೊಂದಿಗೆ ಕುಶಲೋಪರಿ ನಡೆಸಿದರು. ಬಳಿಕ ಮನೆ ಮಂದಿಗೆ ರಾಮ ಮಂತ್ರ ಉಪದೇಶ ನೀಡಿ ಮಂತ್ರಾಕ್ಷತೆ ನೀಡಿದರು. ಅಲ್ಲಿಂದ ಶ್ರೀ ಮೂಕಾಂಬಿಕಾ ಭಜನಾ ಮಂಡಳಿಗೆ ಭೇಟಿ ನೀಡಿದ ಅನುಗ್ರಹ ಸಂದೇಶ ನೀಡಿದರು. ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಮಠದ ಅಧೀನದಲ್ಲಿರುವ ಮುಚ್ಲುಕೋಡು ಸುಬ್ರಹ್ಮಣ್ಯ ದೇವಸ್ಥಾನದಿಂದ ತಂಡ ಪ್ರಸಾದವನ್ನು ಕಾಲೋನಿ ನಿವಾಸಿಗಳಿಗೆ ಹಂಚಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ