ಆ್ಯಪ್ನಗರ

ಏ.8ರಂದು ಮಾಹೆಯಲ್ಲಿ ರಾಬಿನ್‌ ಸಿಂಗ್‌ ಕ್ರಿಕೆಟ್‌ ಅಕಾಡೆಮಿ ಶುಭಾರಂಭ

ದುಬೈ ಹಾಗೂ ಚೆನ್ನೈನಲ್ಲಿ ಕ್ರಿಕೆಟ್‌ ಅಕಾಡೆಮಿ ಸ್ಥಾಪಿಸಿ, ಕ್ರಿಕೆಟ್‌ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸುತ್ತಿರುವ ಖ್ಯಾತ ಕ್ರಿಕೆಟಿಗ, ಕೋಚ್‌ ರಾಬಿನ್‌ ಸಿಂಗ್‌ ಅವರ 3ನೇ 'ರಾಬಿನ್‌ ಸಿಂಗ್‌ ಕ್ರಿಕೆಟ್‌ ಅಕಾಡೆಮಿ' ಮಣಿಪಾಲದ ಮಾಹೆ ವಿವಿಯಲ್ಲಿ ಏ.8ರಂದು ಶುಭಾರಂಭವಾಗಲಿದೆ ಎಂದು ಮಾಹೆ ವಿವಿ ಸಹಕುಲಾಧಿಪತಿ ಹಾಗೂ ಉಡುಪಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆಯ ಗೌರವಾಧ್ಯಕ್ಷ ಡಾ. ಎಚ್‌.ಎಸ್‌. ಬಲ್ಲಾಳ್‌ ತಿಳಿಸಿದ್ದಾರೆ.

Vijaya Karnataka 26 Mar 2019, 5:00 am
ಉಡುಪಿ: ದುಬೈ ಹಾಗೂ ಚೆನ್ನೈನಲ್ಲಿ ಕ್ರಿಕೆಟ್‌ ಅಕಾಡೆಮಿ ಸ್ಥಾಪಿಸಿ, ಕ್ರಿಕೆಟ್‌ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸುತ್ತಿರುವ ಖ್ಯಾತ ಕ್ರಿಕೆಟಿಗ, ಕೋಚ್‌ ರಾಬಿನ್‌ ಸಿಂಗ್‌ ಅವರ 3ನೇ 'ರಾಬಿನ್‌ ಸಿಂಗ್‌ ಕ್ರಿಕೆಟ್‌ ಅಕಾಡೆಮಿ' ಮಣಿಪಾಲದ ಮಾಹೆ ವಿವಿಯಲ್ಲಿ ಏ.8ರಂದು ಶುಭಾರಂಭವಾಗಲಿದೆ ಎಂದು ಮಾಹೆ ವಿವಿ ಸಹಕುಲಾಧಿಪತಿ ಹಾಗೂ ಉಡುಪಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆಯ ಗೌರವಾಧ್ಯಕ್ಷ ಡಾ. ಎಚ್‌.ಎಸ್‌. ಬಲ್ಲಾಳ್‌ ತಿಳಿಸಿದ್ದಾರೆ.
Vijaya Karnataka Web the robin singh cricket academy has started a good morning on april 8th
ಏ.8ರಂದು ಮಾಹೆಯಲ್ಲಿ ರಾಬಿನ್‌ ಸಿಂಗ್‌ ಕ್ರಿಕೆಟ್‌ ಅಕಾಡೆಮಿ ಶುಭಾರಂಭ


ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಏ.8ರಂದು ಅಕಾಡೆಮಿ ಆರಂಭದ ಜತೆಗೆ ಮಾಹೆ ವಿವಿ ಮತ್ತು ಉಡುಪಿ ಕ್ರಿಕೆಟ್‌ ಅಸೋಸಿಯೇಶನ್‌ ಆಶ್ರಯದಲ್ಲಿ ಮುಂದಿನ 40 ದಿನಗಳ ಕ್ರಿಕೆಟ್‌ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. 6ರಿಂದ 19 ವರ್ಷದೊಳಗಿನ ಬಾಲಕ-ಬಾಲಕಿಯರಿಗೆ ಕ್ರಿಕೆಟ್‌ ತರಬೇತಿ ಶಿಬಿರ ನಡೆಯಲಿದ್ದು, ಹೊರ ಜಿಲ್ಲೆಯ ಆಸಕ್ತರಿಗೂ ಅವಕಾಶ ನೀಡಲಾಗಿದೆ ಎಂದರು.

ಬೆಳಗ್ಗೆ 7ರಿಂದ ಆರಂಭವಾಗುವ ಬೇಸಿಗೆ ಶಿಬಿರದಲ್ಲಿ ಬೆಳಗ್ಗೆ ಎರಡು ಹಾಗೂ ಸಂಜೆ ಒಂದು ತಂಡಗಳಿಗೆ ಕ್ರಿಕೆಟ್‌ನ ಎಲ್ಲ ವಿಭಾಗಗಳ ಮಾಹಿತಿ ಜತೆಗೆ, ದೈಹಿಕ, ಮಾನಸಿಕ ಕ್ಷಮತೆ ಕಾಪಾಡಿಕೊಳ್ಳಲು ತರಬೇತಿ ನೀಡಲಾಗುವುದು. ಮಹಿಳಾ ಕ್ರಿಕೆಟ್‌ಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಒಬ್ಬರಿಗೆ 2000 ರೂ. ಪ್ರವೇಶ ಶುಲ್ಕ ನಿಗದಿ ಮಾಡಿದ್ದು, ಪೌಷ್ಟಿಕ ಆಹಾರ ಮತ್ತು ಸಮವಸ್ತ್ರಗಳನ್ನು ನೀಡಲಾಗುವುದೆಂದು ಮಾಹಿತಿ ನೀಡಿದರು.

ಶಿಬಿರದಲ್ಲಿ ರಾಬಿನ್‌ ಸಿಂಗ್‌ ಕ್ರಿಕೆಟ್‌ ಅಕಾಡೆಮಿಯ ಇಬ್ಬರು ನುರಿತ ತರಬೇತುದಾರರು ಮತ್ತು ಸ್ಥಳೀಯ ಮೂವರ ಸಹಿತ ಐವರು ನುರಿತ ಅನುಭವಿ ತರಬೇತುದಾರರು ಪ್ರತಿಯೊಬ್ಬ ಆಟಗಾರರ ವೈಯಕ್ತಿಕ ಸಾಮರ್ಥ್ಯ‌, ಫೀಲ್ಡಿಂಗ್‌ ತರಬೇತಿ, ಮ್ಯಾಚ್‌ ನಿರ್ವಹಣೆ, ದೈಹಿಕ ಮಾನಸಿಕ ಕ್ಷ ಮತೆಗಳ ಬಗ್ಗೆ ತರಬೇತಿ ನೀಡಲಿದ್ದಾರೆ. ತರಬೇತಿ ಬಳಿಕ ಉಡುಪಿ ಕ್ರಿಕೆಟ್‌ ಅಸೋಸಿಯೇಶನ್‌ನ ಕ್ರಿಕೆಟ್‌ ತಂಡವನ್ನೂ ಆಯ್ಕೆ ಮಾಡಲಾಗುವುದೆಂದರು.

ಮಾಹೆಯ ಕ್ರೀಡಾ ಮಂಡಳಿ ಕಾರ್ಯದರ್ಶಿ ಡಾ. ವಿನೋದ್‌ ನಾಯಕ್‌, ಜತೆ ಕಾರ್ಯದರ್ಶಿ ಶೋಭಾ, ಉಡುಪಿ ಕ್ರಿಕೆಟ್‌ ಅಸೋಸಿಯೇಶನ್‌ ಅಧ್ಯಕ್ಷ ಡಾ. ಕೃಷ್ಣಪ್ರಸಾದ್‌, ಕಾರ್ಯದರ್ಶಿ ಬಾಲಕೃಷ್ಣ ಪರ್ಕಳ, ಕೋಚ್‌ ರೆನ್‌ ಟ್ರೆವರ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ