ಆ್ಯಪ್ನಗರ

ಶಬ್ದಗಳು ಒಂದು ಪ್ರದೇಶದ ಇತಿಹಾಸವನ್ನು ಬಿಚ್ಚಿಡುತ್ತವೆ : ಬಾಬು ಶಿವ ಪೂಜಾರಿ

ಒಂದು ಭಾಷೆ ಹಳ್ಳಿಗರ ಜನಜೀವನದ ಕೊಂಡಿಯಾಗಿದೆ. ಆ ಭಾಷೆ ಮಾತನಾಡಲು ಕೀಳರಿಮೆ ಬೇಡ ಎಂದು ಹಿರಿಯ ಜಾನಪದ ಸಂಶೋಧಕ ಬಾಬುಶಿವ ಪೂಜಾರಿ ಹೇಳಿದರು.

Vijaya Karnataka 13 Aug 2019, 5:00 am
ಬ್ರಹ್ಮಾವರ: ಒಂದು ಭಾಷೆ ಹಳ್ಳಿಗರ ಜನಜೀವನದ ಕೊಂಡಿಯಾಗಿದೆ. ಆ ಭಾಷೆ ಮಾತನಾಡಲು ಕೀಳರಿಮೆ ಬೇಡ ಎಂದು ಹಿರಿಯ ಜಾನಪದ ಸಂಶೋಧಕ ಬಾಬುಶಿವ ಪೂಜಾರಿ ಹೇಳಿದರು.
Vijaya Karnataka Web UDP-12bvrKundapra


ಅವರು, ಭಾನುವಾರ ಬಾರಕೂರು ಶಿವಗಿರಿ ಕ್ಷೇತ್ರದಲ್ಲಿ ಬಿಲ್ಲವ ಸಂಘದ ನೇತೃತ್ವದಲ್ಲಿ ನಡೆದ ವಿಶ್ವ ಕುಂದಾಪ್ರ ಕನ್ನಡ ದಿನ ಆಚರಣೆಯ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಅವರು 1991ರ ಪೂರ್ವದಲ್ಲಿ ಭಾರತದಲ್ಲಿ 1600 ಭಾಷೆಗಳಿದ್ದವು. ಇವುಗಳಲ್ಲಿ 69 ಭಾಷೆಗಳನ್ನು ಶಾಲೆಗಳಲ್ಲಿ ಮಾಧ್ಯಮವಾಗಿ ಕಲಿಸುತ್ತಾರೆ. 49 ಭಾಷೆಗಳು ಸಂವಹನ ಮಾಧ್ಯಮಗಳಾಗಿವೆ. ಭಾಷೆಯನ್ನೂ ಹೆಚ್ಚೆಚ್ಚು ಬಳಸಿದರೆ ಮಾತ್ರ ಅದು ಉಳಿಯುತ್ತದೆ ಇಲ್ಲವಾದರೆ ಭಾಷೆ ಸಾಯುತ್ತದೆ .

ದೀಪ ಪ್ರಜ್ವಲಿಸಿದ ಹಿರಿಯ ಸಾಹಿತಿ ಪಂಜು ಗಂಗೊಳ್ಳಿ ಮಾತನಾಡಿ ಪ್ರಪಂಚದಲಿ ಏಳು ಅದ್ಭುತಗಳಿವೆ ಆದರೆ ಭಾಷೆ ಏಳು ಅದ್ಭುತಗಳನ್ನು ಮೀರಿದ ಅದ್ಭುತÜ ಕುಂದಾಪ್ರ ಕನ್ನಡ. ಈ ಭಾಷೆಯಲ್ಲಿ ಅನೇಕ ನುಡಿಕಟ್ಟುಗಳು ವಿಶೇಷ ಅರ್ಥವನ್ನು ಹೊಂದಿದ್ದು ಬದುಕಿಗೆ ಅನೇಕ ಒಳನೋಟಗಳನ್ನು ತಿಳಿಸಿಕೊಡುತ್ತದೆ ಎಂದರು.

ಸಭೆಯ ಅಧ್ಯಕ್ಷ ತೆಯನ್ನು ಹಿರಿಯ ಯಕ್ಷ ಗಾನ ಕಲಾವಿದ ಐರೋಡಿ ಗೋವಿಂದಪ್ಪ ವಹಿಸಿದ್ದರು.

ಹಾಡು ಹರಟೆಯ ವಿಚಾರ ಸಂಕೀರ್ಣದಲ್ಲಿ ನಟ ರಘು ಪಾಂಡೇಶ್ವರ್‌, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ನಾಟಕ ಕಲಾವಿದ ಆಲ್ವಿನ್‌ ಅಂದ್ರಾದೆ, ನಾಟಕ ನಿರ್ದೇಶಕ ಲಿಯಾಕತ್‌ ಆಲಿ ಬಾರಕೂರು ಇವರು ಕುಂದಾಪ್ರ ಭಾಷೆಯ ಸೊಗಡನ್ನು ತಮ್ಮ ಅನುಭವ ಕಥನದ ಮೂಲಕ ತಿಳಿಸಿದರು.

ಸುರೇಶ್‌ ಕಾರ್ಕಡ ಹಾಗೂ ನಾಗೇಶ್‌ ಶಾನುಭಾಗ್‌ ಇವರು ಕುಂದಾಪ್ರ ಕನ್ನಡ ದ ಹಾಡುಗಳನ್ನು ಹೇಳಿ ರಂಜಿಸಿದರು

ಕಾರ್ಯಕ್ರಮದಲ್ಲಿ ಹಿರಿಯ ಶೋಭಾನೆ ಹಾಡುಗಾರ ಕೂಸ ಪೂಜಾರಿ ಮೂಡುತೋಟ ಇವರನ್ನು ಸನ್ಮಾನಿಸಲಾಯಿತು

ವೇದಿಕೆಯಲ್ಲಿ ನಿವೃತ್ತ ಪ್ರಾಂಶುಪಾಲ ಬಿ.ಸೀತಾರಾಮ ಶೆಟ್ಟಿ . ಉದ್ಯಮಿ ಶ್ರೀನಿವಾಸ ಶೆಟ್ಟಿಗಾರ್‌. ಬಾರಕೂರು ಬಿಲ್ಲವ ಸಂಘದ ಅಧ್ಯಕ್ಷ ಕುಷ್ಟು ಪೂಜಾರಿ, ಸತೀಶ್‌ ಎಸ್‌. ಅಮೀನ್‌ ಬಾರಕೂರು, ಕೇಶವ ಸಸಿಹಿತ್ಲು, ಬಾರಕೂರು ರೋಟರಿ ಕ್ಲಬ್‌ ಅಧ್ಯಕ್ಷ ಸುಧಾಕರ್‌ ರಾವ್‌ ಉಪಸ್ಥಿತರಿದ್ದರು.

ಅಶೋಕ್‌ ಸಿ ಪೂಜಾರಿ ಪ್ರಾಸ್ತವಿಕ ಮಾತನಾಡಿ ಸ್ವಾಗತಿಸಿದರು, ಸತೀಶ್‌ ವಡ್ಡರ್ಸೆ ವಂದಿಸಿದರು, ನರೇಂದ್ರ ಕುಮಾರ್‌ ಕೋಟ ನಿರೂಪಿಸಿದರು .

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ