ಉಡುಪಿ: ಸುವರ್ಣ ತ್ರಿಭುಜ ದೋಣಿಯ ಅವಶೇಷ ಕಂಡರೂ, ಏಳು ಮೀನುಗಾರರು ಇನ್ನೂ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶಿಸಿದ್ದು, ಸುಮೊಟೊ ಅರ್ಜಿ ಹಾಕಿದೆ.
ಮಾಧ್ಯಮ ವರದಿಗಳ ಆಧಾರದಲ್ಲಿ ಸ್ವಯಂಪ್ರೇರಣೆಯಿಂದ ಆಯೋಗವು ರಾಜ್ಯ ಮುಖ್ಯ ಕಾರ್ಯದರ್ಶಿ ಹಾಗೂ ಕೇಂದ್ರ ರಕ್ಷಣಾ ಖಾತೆ ಕಾರ್ಯದರ್ಶಿಗೆ ಸೋಮವಾರ ನೋಟಿಸ್ ಜಾರಿ ಮಾಡಿದೆ.
ಡಿ. 13ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ದೋಣಿಯ ಅವಶೇಷವನ್ನು ಮೇ 1ರಂದು ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಮಾಲ್ವಾಣ್ ಕಡಲತೀರದಿಂದ 35 ನಾಟಿಕಲ್ ಮೈಲ್ ದೂರ, 65 ಮೀ. ಆಳದಲ್ಲಿ ನೌಕಾಪಡೆ ಪತ್ತೆ ಹಚ್ಚಿತ್ತು.
ಆದರೆ ಏಳು ಮೀನುಗಾರರ ಸುಳಿವು ಮಾತ್ರ ಇನ್ನೂ ದೊರೆತಿಲ್ಲ. ಈ ಮಧ್ಯೆ ಭಾರತೀಯ ನೌಕಾಪಡೆ ದೋಣಿ ಅವಶೇಷ ಪತ್ತೆ ಹಿನ್ನೆಲೆಯಲ್ಲಿ ಏಳು ಮೀನುಗಾರರ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ.
ರಾಜ್ಯ ಮುಖ್ಯ ಕಾರ್ಯದರ್ಶಿಗೆ ನೀಡಿದ ನೋಟಿಸ್ನಲ್ಲಿ ಆಯೋಗವು ನಾಪತ್ತೆಯಾದ ಮೀನುಗಾರರ ಕುಟುಂಬದ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಂಡು ಶೋಧ ಕಾರ್ಯಾಚರಣೆಯ ವರದಿಯನ್ನು ಆರು ವಾರಗಳೊಳಗೆ ಸಲ್ಲಿಸಲು ಕೇಂದ್ರ ರಕ್ಷಣಾ ಇಲಾಖೆಗೆ ಸೂಚಿಸಿದೆ.
ನಾಪತ್ತೆಯಾದ ಮೀನುಗಾರರೆಲ್ಲರೂ ಕುಟುಂಬದ ಆಧಾರಸ್ಥಂಭವಾಗಿದ್ದು ಮೀನುಗಾರರರ ಶೋಧದಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ಕೇಂದ್ರ ರಕ್ಷಣಾ ಇಲಾಖೆ ಹಾಗೂ ರಾಜ್ಯ ಮುಖ್ಯ ಕಾರ್ಯದರ್ಶಿಗೆ ನೀಡಿದ ನೋಟೀಸಿನಲ್ಲಿ ಆಯೋಗವು ಅಭಿಪ್ರಾಯಪಟ್ಟಿದೆ.
ಯಾರಾರಯರು ಕಾಣೆ? ಚಂದ್ರಶೇಖರ ಕೋಟ್ಯಾನ್ ಬಡಾನಿಡಿಯೂರು, ದಾಮೋದರ್, ಲಕ್ಷ್ಮಣ್, ಸತೀಶ್, ರವಿ, ಹರೀಶ್, ರಮೇಶ್.
ಏಳು ಮೀನುಗಾರರು ಬದುಕಿ ಬರುತ್ತಾರೆಂದು ನಂಬಿರುವ ಕುಟುಂಬಸ್ಥರು ರಾಜ್ಯ ಸರಕಾರ ಘೋಷಿಸಿದ 10 ಲಕ್ಷ ರೂ. ಪರಿಹಾರ ಸ್ವೀಕರಿಸುವ ನಿಟ್ಟಿನಲ್ಲಿ ದಾಖಲೆಗಳಿಗೆ ಸಹಿ ಹಾಕಲು ಹಿಂದೇಟು ಹಾಕಿದ್ದು ಮನವೊಲಿಸುವ ಯತ್ನದ ನಡುವೆ ಆಯೋಗದ ಮಧ್ಯಪ್ರವೇಶ ಹೊಸ ಭರವಸೆ ಮೂಡಿಸಿದೆ.
ನೌಕಾಪಡೆಯ ಐಎನ್ಎಸ್ ಕೊಚ್ಚಿನ್ , ಸುವರ್ಣ ತ್ರಿಭುಜ ದೋಣಿಗೆ ಡಿಕ್ಕಿ ಹೊಡೆದಿದೆ ಎನ್ನುವ ಆರೋಪದ ನಡುವೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನ್ಯಾಯಾಂಗ ತನಿಖೆಗೆ ಆಗ್ರಹಿಸಿ ರಾಷ್ಟ್ರಪತಿ, ಪ್ರಧಾನಿಗೆ ಪತ್ರ ಬರೆದಿದ್ದಾರೆ. ಯಾವುದೇ ಕ್ರಮ ಕೈಗೊಳ್ಳದಿದ್ದರೆ ಸರ್ವೋಚ್ಛ ನ್ಯಾಯಾಲಯದಲ್ಲಿ ದಾವೆ ಹೂಡುವೆ ಎಚ್ಚರಿಕೆ ನೀಡಿದ್ದಾರೆ.
* ದೋಣಿ ಅವಶೇಷ ನೌಕಾಪಡೆಗೆ ಕಾಣಸಿಕ್ಕರೂ, ಏಳು ಮೀನುಗಾರರ ಪತ್ತೆ ನಿಟ್ಟಿನಲ್ಲಿ ಹೋರಾಟ ಮುಂದುವರಿದಿದೆ. ಐದು ತಿಂಗಳಿನಿಂದ ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಕುಟುಂಬಕ್ಕೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಮಧ್ಯಪ್ರವೇಶದಿಂದಲಾದರೂ ನ್ಯಾಯ ಸಿಗಲಿ.
-ಸತೀಶ್ ಕುಂದರ್, ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ
ಮಾಧ್ಯಮ ವರದಿಗಳ ಆಧಾರದಲ್ಲಿ ಸ್ವಯಂಪ್ರೇರಣೆಯಿಂದ ಆಯೋಗವು ರಾಜ್ಯ ಮುಖ್ಯ ಕಾರ್ಯದರ್ಶಿ ಹಾಗೂ ಕೇಂದ್ರ ರಕ್ಷಣಾ ಖಾತೆ ಕಾರ್ಯದರ್ಶಿಗೆ ಸೋಮವಾರ ನೋಟಿಸ್ ಜಾರಿ ಮಾಡಿದೆ.
ಡಿ. 13ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ದೋಣಿಯ ಅವಶೇಷವನ್ನು ಮೇ 1ರಂದು ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಮಾಲ್ವಾಣ್ ಕಡಲತೀರದಿಂದ 35 ನಾಟಿಕಲ್ ಮೈಲ್ ದೂರ, 65 ಮೀ. ಆಳದಲ್ಲಿ ನೌಕಾಪಡೆ ಪತ್ತೆ ಹಚ್ಚಿತ್ತು.
ಆದರೆ ಏಳು ಮೀನುಗಾರರ ಸುಳಿವು ಮಾತ್ರ ಇನ್ನೂ ದೊರೆತಿಲ್ಲ. ಈ ಮಧ್ಯೆ ಭಾರತೀಯ ನೌಕಾಪಡೆ ದೋಣಿ ಅವಶೇಷ ಪತ್ತೆ ಹಿನ್ನೆಲೆಯಲ್ಲಿ ಏಳು ಮೀನುಗಾರರ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ.
ರಾಜ್ಯ ಮುಖ್ಯ ಕಾರ್ಯದರ್ಶಿಗೆ ನೀಡಿದ ನೋಟಿಸ್ನಲ್ಲಿ ಆಯೋಗವು ನಾಪತ್ತೆಯಾದ ಮೀನುಗಾರರ ಕುಟುಂಬದ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಂಡು ಶೋಧ ಕಾರ್ಯಾಚರಣೆಯ ವರದಿಯನ್ನು ಆರು ವಾರಗಳೊಳಗೆ ಸಲ್ಲಿಸಲು ಕೇಂದ್ರ ರಕ್ಷಣಾ ಇಲಾಖೆಗೆ ಸೂಚಿಸಿದೆ.
ನಾಪತ್ತೆಯಾದ ಮೀನುಗಾರರೆಲ್ಲರೂ ಕುಟುಂಬದ ಆಧಾರಸ್ಥಂಭವಾಗಿದ್ದು ಮೀನುಗಾರರರ ಶೋಧದಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ಕೇಂದ್ರ ರಕ್ಷಣಾ ಇಲಾಖೆ ಹಾಗೂ ರಾಜ್ಯ ಮುಖ್ಯ ಕಾರ್ಯದರ್ಶಿಗೆ ನೀಡಿದ ನೋಟೀಸಿನಲ್ಲಿ ಆಯೋಗವು ಅಭಿಪ್ರಾಯಪಟ್ಟಿದೆ.
ಯಾರಾರಯರು ಕಾಣೆ? ಚಂದ್ರಶೇಖರ ಕೋಟ್ಯಾನ್ ಬಡಾನಿಡಿಯೂರು, ದಾಮೋದರ್, ಲಕ್ಷ್ಮಣ್, ಸತೀಶ್, ರವಿ, ಹರೀಶ್, ರಮೇಶ್.
ಏಳು ಮೀನುಗಾರರು ಬದುಕಿ ಬರುತ್ತಾರೆಂದು ನಂಬಿರುವ ಕುಟುಂಬಸ್ಥರು ರಾಜ್ಯ ಸರಕಾರ ಘೋಷಿಸಿದ 10 ಲಕ್ಷ ರೂ. ಪರಿಹಾರ ಸ್ವೀಕರಿಸುವ ನಿಟ್ಟಿನಲ್ಲಿ ದಾಖಲೆಗಳಿಗೆ ಸಹಿ ಹಾಕಲು ಹಿಂದೇಟು ಹಾಕಿದ್ದು ಮನವೊಲಿಸುವ ಯತ್ನದ ನಡುವೆ ಆಯೋಗದ ಮಧ್ಯಪ್ರವೇಶ ಹೊಸ ಭರವಸೆ ಮೂಡಿಸಿದೆ.
ನೌಕಾಪಡೆಯ ಐಎನ್ಎಸ್ ಕೊಚ್ಚಿನ್ , ಸುವರ್ಣ ತ್ರಿಭುಜ ದೋಣಿಗೆ ಡಿಕ್ಕಿ ಹೊಡೆದಿದೆ ಎನ್ನುವ ಆರೋಪದ ನಡುವೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನ್ಯಾಯಾಂಗ ತನಿಖೆಗೆ ಆಗ್ರಹಿಸಿ ರಾಷ್ಟ್ರಪತಿ, ಪ್ರಧಾನಿಗೆ ಪತ್ರ ಬರೆದಿದ್ದಾರೆ. ಯಾವುದೇ ಕ್ರಮ ಕೈಗೊಳ್ಳದಿದ್ದರೆ ಸರ್ವೋಚ್ಛ ನ್ಯಾಯಾಲಯದಲ್ಲಿ ದಾವೆ ಹೂಡುವೆ ಎಚ್ಚರಿಕೆ ನೀಡಿದ್ದಾರೆ.
* ದೋಣಿ ಅವಶೇಷ ನೌಕಾಪಡೆಗೆ ಕಾಣಸಿಕ್ಕರೂ, ಏಳು ಮೀನುಗಾರರ ಪತ್ತೆ ನಿಟ್ಟಿನಲ್ಲಿ ಹೋರಾಟ ಮುಂದುವರಿದಿದೆ. ಐದು ತಿಂಗಳಿನಿಂದ ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಕುಟುಂಬಕ್ಕೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಮಧ್ಯಪ್ರವೇಶದಿಂದಲಾದರೂ ನ್ಯಾಯ ಸಿಗಲಿ.
-ಸತೀಶ್ ಕುಂದರ್, ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ