ಆ್ಯಪ್ನಗರ

ಮೋಸದಿಂದ ಹಿಂದೂಗಳನ್ನು ಮತಾಂತರ ಮಾಡುವ ಕೆಲಸ ಕೊನೆಗೊಳ್ಳಲಿ

ಮೋಸದಿಂದ ಹಿಂದೂಗಳನ್ನು ಮತಾಂತರ ಮಾಡುವ ಕೆಲಸ ಕೊನೆಗೊಳ್ಳಲಿ. ಯಾರೇ ಬಂದರೂ ಈ ಹಿಂದೂ ದೇಶವನ್ನು ಮತಾಂತರ ಮಾಡಲು ಸಾಧ್ಯವಿಲ್ಲ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಬೆಳ್ಮಣ್‌ ಚಲೋ ಜನಾಂದೋಲನ ಸಭೆಯಲ್ಲಿ ಹೇಳಿದ್ದಾರೆ.

Vijaya Karnataka Web 30 Sep 2019, 3:31 pm
ಬೆಳ್ಮಣ್‌ : ಮೋಸದಿಂದ ಹಿಂದೂಗಳನ್ನು ಮತಾಂತರ ಮಾಡುವ ಕೆಲಸ ಕೊನೆಗೊಳ್ಳಲಿ. ಯಾರೇ ಬಂದರೂ ಈ ಹಿಂದೂ ದೇಶವನ್ನು ಮತಾಂತರ ಮಾಡಲು ಸಾಧ್ಯವಿಲ್ಲ. ಹಿಂದೂ ಧರ್ಮವನ್ನು ಎಂದೂ ಕೆಣಕದಿರಿ. ಜಗತ್ತಿನಲ್ಲೇ ಸರ್ವ ಶ್ರೇಷ್ಠ ಧರ್ಮ ಎಂದರೆ ಹಿಂದೂ ಧರ್ಮ ಎಂದು ಆರೆಸ್ಸೆಸ್‌ ಮುಖಂಡ ಹಾಗೂ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ‍್ಯಕಾರಿಣಿ ಸದಸ್ಯ ಡಾ. ಕಲ್ಲಡ್ಕ ಪ್ರಭಾಕರ್‌ ಭಟ್‌ ಹೇಳಿದರು.
Vijaya Karnataka Web bhat


'ಭಾರತ ಹಿಂದು ರಾಷ್ಟ್ರ, ಮುಸ್ಲಿಮರು ಬರಕೂಡದು' ಎಂದವನ ಮೇಲೆ ಹಲ್ಲೆ ಮಾಡಿದವರ ಬಂಧನ

ವಿಹಿಂಪ, ಭಜರಂಗದಳ ಕಾರ್ಕಳ ಪ್ರಖಂಡ ವತಿಯಿಂದ ಬೆಳ್ಮಣ್‌ನಲ್ಲಿ ಜರುಗಿದ 'ಮತಾಂತರದ ವಿರುದ್ಧ ಬೆಳ್ಮಣ್‌ ಚಲೋ' ಬೃಹತ್‌ ಜನಾಂದಲೋನ ಸಭೆಯಲ್ಲಿ ಮಾಡಿದ ದಿಕ್ಸೂಚಿ ಭಾಷಣದಲ್ಲಿ ಹೇಳಿದ್ದಾರೆ. ಮತಾಂತರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಸಹಾಯಕ ಎಸ್ಪಿ ಕುಮಾರ್‌ ಚಂದ್ರ, ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ನಾಸಿರ್‌ ಹುಸೇನ್‌ ಅವರಿಗೆ ಹಿಂದೂ ಮುಖಂಡರು ಮನವಿ ಸಲ್ಲಿಸಿದರು. ನಂದಳಿಕೆ ಚಾವಡಿ ಅರಮನೆ ಸುಹಾಸ್‌ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ಪಾಕಿಸ್ತಾನದಲ್ಲಿ ಹಿಂದೂ ವಿದ್ಯಾರ್ಥಿನಿಯ ಕೊಲೆ; ಶೋಯಿಬ್ ಅಖ್ತರ್ ಮಿಡಿದ ಹೃದಯ!

ಮುಖ್ಯಅತಿಥಿಗಳಾಗಿ ಜಿಲ್ಲಾ ಹಿಂಜಾವೇ ಕಾರ‍್ಯದರ್ಶಿ ಪ್ರಕಾಶ್‌ ಕುಕ್ಕೆಹಳ್ಳಿ, ಜಿಲ್ಲಾ ಗೋರಕ್ಷಾ ಪ್ರಮುಖ್‌ ದಿನೇಶ್‌ ಶೆಟ್ಟಿ ಹೆಬ್ರಿ, ವಿಹಿಂಪ ಜಿಲ್ಲಾ ಗೋರಕ್ಷ ಪ್ರಮುಖ್‌ ಉಮೇಶ್‌ ನಾಯಕ್‌ ಸೂಡ, ಭಜರಂಗದಳ ತಾಲೂಕು ಸಂಚಾಲಕ ಗುರುಪ್ರಸಾದ್‌ ನಾರಾವಿ, ಬೆಳ್ಮಣ್‌ ವಲಯ ವಿಹಿಂಪ ಅಧ್ಯಕ್ಷ ಪ್ರಸಾದ್‌ ಶೆಟ್ಟಿ ಕಾಡಿ ಕಂಬಳ, ಹಿಂದೂ ಮುಖಂಡ ರತ್ನಾಕರ್‌ ಅಮೀನ್‌ ಉಪಸ್ಥಿತರಿದ್ದರು.

ಭಾರತ ಹಿಂದೂ ರಾಷ್ಟ್ರ ಘೋಷಣೆಯಾಗಲಿ

ಜಿಲ್ಲಾ ಭಜರಂಗದಳ ಸುರಕ್ಷ ಪ್ರಮುಖ್‌ ಮಹೇಶ್‌ ಬೈಲೂರು ಸ್ವಾಗತಿಸಿದರು. ಧರ್ಮ ಜಾಗರಣ ಮಂಗಳೂರು ವಿಭಾಗ ಸಹ ಸಂಯೋಜಕ ಪ್ರಸಾದ್‌ ಶೆಟ್ಟಿ ಕುತ್ಯಾರು ಪ್ರಾಸ್ತಾವಿಕ ಮಾತನಾಡಿದರು. ಅಶೋಕ್‌ ನಾರಾವಿ ನಿರೂಪಿಸಿದರು. ಜಯಪ್ರಕಾಶ್‌ ಪ್ರಭು ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ