ನಕಲಿ ದಾಖಲೆ ನೀಡಿ ಬ್ಯಾಂಕ್ಗೆ ವಂಚಿಸಲು ಯತ್ನ; ಡಾಕ್ಟರ್ ಸೇರಿ ಇಬ್ಬರ ಬಂಧನ
ವಾಹನ ಸಾಲಕ್ಕಾಗಿ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಬ್ಯಾಂಕ್ಗೆ ವಂಚಿಸಲು ಯತ್ನಿಸಿದ ವೈದ್ಯೆ ಹಾಗೂ ದಾಖಲೆ ಸೃಷ್ಟಿಸಿಕೊಟ್ಟ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Vijaya Karnataka Web 27 Jul 2020, 8:30 am
ಕಟಪಾಡಿ: ದೊಡ್ಡ ಮೊತ್ತದ ವಾಹನ ಸಾಲಕ್ಕಾಗಿ ನಕಲಿ ದಾಖಲೆ ಪತ್ರಗಳನ್ನು ನೀಡಿ ಬ್ಯಾಂಕ್ಗೆ ವಂಚಿಸಲು ಯತ್ನಿಸಿದ ವೈದ್ಯೆ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಟ್ಟ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಪ್ಪೂರು ಸಾಲ್ಮರ ಮನೆ ನಿವಾಸಿ ಡಾ. ರಿನೆಟ್ ಸೋನಿಯಾ ಡಿಸೋಜಾ (37) ಹಾಗೂ ಸಾಲಿಗ್ರಾಮ ಚಿತ್ರಪಾಡಿ ನಿವಾಸಿ ವಿಜಯ ಕೊಠಾರಿ (43) ಬಂಧಿತ ಆರೋಪಿಗಳು.
ಪ್ರಕರಣದ ಪ್ರಮುಖ ಆರೋಪಿ ಡಾ. ರಿನೆಟ್ ಸೋನಿಯಾ ಡಿಸೋಜಾ ಜುಲೈ 3ರಂದು ಶಂಕರಪುರದ ಬ್ಯಾಂಕ್ ಆಫ್ ಬರೋಡಾದ ಮೂಡಬೆಟ್ಟು ಶಾಖೆಗೆ ತೆರಳಿ ನಾನು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನಲ್ಲಿ ಡಾಕ್ಟರ್ ಕಂ ಪ್ರೊಪೆಸರ್ ಆಗಿದ್ದು , ಮಾಸಿಕ 2.66 ಲಕ್ಷ ರೂ.ವೇತನ ಪಡೆಯುತ್ತಿದ್ದೇನೆ. ತನಗೆ ವಾಹನ ಖರೀದಿಸಲು 7.8 ಲಕ್ಷ ರೂ. ಹಾಗೂ ತನ್ನ ಸಹೋದರ ಆಕಾಶ್ ಡಿಸೋಜಾನಿಗೆ ವಾಹನ ಖರೀದಿಸಲು 16 ಲಕ್ಷ ರೂ ಸಾಲ ನೀಡುವಂತೆ ಕೇಳಿಕೊಂಡಿದ್ದರು. ಇದಕ್ಕಾಗಿ ವೇತನ ಸ್ಲಿಪ್ಗಳು, ಹಣಕಾಸು ತೆರಿಗೆ, ಆದಾಯದ ದಾಖಲೆ ಸಹಿತ ವಾಹನ ಮಾರಾಟಗಾರ ಸಂಸ್ಥೆಯಿಂದ ದರ ಪಟ್ಟಿ ಸಲ್ಲಿಸಿದ್ದರು. ಈ ದಾಖಲೆಗಳ ಆಧಾರದಲ್ಲಿ ಸಂಬಂಧಪಟ್ಟ ಸಂಸ್ಥೆಯಲ್ಲಿ ವಿಚಾರಿಸಿದಾಗ ಅಲ್ಲಿ ಇವರು ಉದ್ಯೋಗದಲ್ಲಿಲ್ಲ ಎಂಬುವುದು ದೃಢಪಟ್ಟಿತ್ತು. ಈ ಹಿನ್ನಲೆಯಲ್ಲಿ ಬ್ಯಾಂಕ್ ಮೆನೇಜರ್ ಕಾಪು ಠಾಣೆಯಲ್ಲಿ ಇವರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು.
ಎರಡು ದಿನಗಳ ಹಿಂದೆ ಈ ಮಹಿಳೆ ಮತ್ತೆ ಅದೇ ಬ್ಯಾಂಕಿನ ಕಟಪಾಡಿ ಶಾಖೆಗೆ ಭೇಟಿ ನೀಡಿರುವ ಮಾಹಿತಿ ಪಡೆದ ಕಾಪು ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆಯ ವೇಳೆ ತನಗೆ ವಿಜಯ ಕೊಟಾರಿ ಎಂಬುವವರು ನಕಲಿ ದಾಖಲಾತಿಗಳನ್ನು ಮಾಡಿಕೊಟ್ಟಿರುವುದಾಗಿ ತಿಳಿಸಿದ್ದು , ಪೊಲೀಸರು ಆತನನ್ನೂ ಬಂಧಿಸಿದ್ದಾರೆ. ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಉನ್ನತ ಅಧಿಕಾರಿಗಳ ನಿರ್ದೇಶನದಲ್ಲಿ ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಕಾಪು ಠಾಣೆಯ ಉಪನಿರೀಕ್ಷಕ ರಾಜಶೇಖರ್ ಬಿ ಸಾಗನೂರ್, ಅಪರಾಧ ವಿಭಾಗದ ಪಿಎಸ್ಐ. ಐಆರ್ ಗಡ್ಡೆಕರ್ ಹಾಗೂ ಪ್ರೊಬೆಷನರಿ ಪಿಎಸ್ಐ ಅನಿಲ್ ಮಾದರ ಮತ್ತು ಸಿಬ್ಬಂದಿಗಳಾದ ರವಿ ಕುಮಾರ್, ರಮೇಶ್, ಮಹಾಬಲ ಶೆಟ್ಟಿಗಾರ್, ಸುಲೋಚನಾ , ಶ್ರೀನಾಥ, ಪರಶುರಾಮ, ಅರುಣ್ ಕುಮಾರ್, ಆನಂದ ಮೊದಲಾದವರುಗಳು ಭಾಗವಹಿಸಿರುತ್ತಾರೆ.
ಪ್ರಕರಣದ ಪ್ರಮುಖ ಆರೋಪಿ ಡಾ. ರಿನೆಟ್ ಸೋನಿಯಾ ಡಿಸೋಜಾ ಜುಲೈ 3ರಂದು ಶಂಕರಪುರದ ಬ್ಯಾಂಕ್ ಆಫ್ ಬರೋಡಾದ ಮೂಡಬೆಟ್ಟು ಶಾಖೆಗೆ ತೆರಳಿ ನಾನು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನಲ್ಲಿ ಡಾಕ್ಟರ್ ಕಂ ಪ್ರೊಪೆಸರ್ ಆಗಿದ್ದು , ಮಾಸಿಕ 2.66 ಲಕ್ಷ ರೂ.ವೇತನ ಪಡೆಯುತ್ತಿದ್ದೇನೆ. ತನಗೆ ವಾಹನ ಖರೀದಿಸಲು 7.8 ಲಕ್ಷ ರೂ. ಹಾಗೂ ತನ್ನ ಸಹೋದರ ಆಕಾಶ್ ಡಿಸೋಜಾನಿಗೆ ವಾಹನ ಖರೀದಿಸಲು 16 ಲಕ್ಷ ರೂ ಸಾಲ ನೀಡುವಂತೆ ಕೇಳಿಕೊಂಡಿದ್ದರು. ಇದಕ್ಕಾಗಿ ವೇತನ ಸ್ಲಿಪ್ಗಳು, ಹಣಕಾಸು ತೆರಿಗೆ, ಆದಾಯದ ದಾಖಲೆ ಸಹಿತ ವಾಹನ ಮಾರಾಟಗಾರ ಸಂಸ್ಥೆಯಿಂದ ದರ ಪಟ್ಟಿ ಸಲ್ಲಿಸಿದ್ದರು. ಈ ದಾಖಲೆಗಳ ಆಧಾರದಲ್ಲಿ ಸಂಬಂಧಪಟ್ಟ ಸಂಸ್ಥೆಯಲ್ಲಿ ವಿಚಾರಿಸಿದಾಗ ಅಲ್ಲಿ ಇವರು ಉದ್ಯೋಗದಲ್ಲಿಲ್ಲ ಎಂಬುವುದು ದೃಢಪಟ್ಟಿತ್ತು. ಈ ಹಿನ್ನಲೆಯಲ್ಲಿ ಬ್ಯಾಂಕ್ ಮೆನೇಜರ್ ಕಾಪು ಠಾಣೆಯಲ್ಲಿ ಇವರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು.
ಎರಡು ದಿನಗಳ ಹಿಂದೆ ಈ ಮಹಿಳೆ ಮತ್ತೆ ಅದೇ ಬ್ಯಾಂಕಿನ ಕಟಪಾಡಿ ಶಾಖೆಗೆ ಭೇಟಿ ನೀಡಿರುವ ಮಾಹಿತಿ ಪಡೆದ ಕಾಪು ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆಯ ವೇಳೆ ತನಗೆ ವಿಜಯ ಕೊಟಾರಿ ಎಂಬುವವರು ನಕಲಿ ದಾಖಲಾತಿಗಳನ್ನು ಮಾಡಿಕೊಟ್ಟಿರುವುದಾಗಿ ತಿಳಿಸಿದ್ದು , ಪೊಲೀಸರು ಆತನನ್ನೂ ಬಂಧಿಸಿದ್ದಾರೆ. ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಉನ್ನತ ಅಧಿಕಾರಿಗಳ ನಿರ್ದೇಶನದಲ್ಲಿ ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಕಾಪು ಠಾಣೆಯ ಉಪನಿರೀಕ್ಷಕ ರಾಜಶೇಖರ್ ಬಿ ಸಾಗನೂರ್, ಅಪರಾಧ ವಿಭಾಗದ ಪಿಎಸ್ಐ. ಐಆರ್ ಗಡ್ಡೆಕರ್ ಹಾಗೂ ಪ್ರೊಬೆಷನರಿ ಪಿಎಸ್ಐ ಅನಿಲ್ ಮಾದರ ಮತ್ತು ಸಿಬ್ಬಂದಿಗಳಾದ ರವಿ ಕುಮಾರ್, ರಮೇಶ್, ಮಹಾಬಲ ಶೆಟ್ಟಿಗಾರ್, ಸುಲೋಚನಾ , ಶ್ರೀನಾಥ, ಪರಶುರಾಮ, ಅರುಣ್ ಕುಮಾರ್, ಆನಂದ ಮೊದಲಾದವರುಗಳು ಭಾಗವಹಿಸಿರುತ್ತಾರೆ.