ಆ್ಯಪ್ನಗರ

ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನ: ಜೀರ್ಣೋದ್ಧಾರದ ವಿಜ್ಞಾಪನಾ ಪತ್ರ ಬಿಡುಗಡೆ

ಇತಿಹಾಸ ಪ್ರಸಿದ್ಧ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಶಿಲಾಮಯ ಗರ್ಭಗುಡಿ, ಶಿಲಾಮಯ ಗಣಪತಿ ಗರ್ಭಗುಡಿ, ಶಿಲಾಮಯ ಭದ್ರಕಾಳಿ ಗರ್ಭಗುಡಿ, ಸುತ್ತು ಪೌಳಿ ಮತ್ತು ಗುರುಗಳ ಪೀಠದ ಜೀರ್ಣೋದ್ಧಾರದ ವಿಜ್ಞಾಪನಾ ಪತ್ರವನ್ನು ಜೀರ್ಣೋದ್ಧಾರ ಸಮಿತಿಯ ಗೌರವ ಅಧ್ಯಕ್ಷ ನಾಡೋಜ ಡಾ.ಜಿ. ಶಂಕರ್‌ ಮಹಾಜನ ಸಂಘ ಹಾಗೂ ಜೋರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳ ಸಮ್ಮುಖ ಉಚ್ಚಿಲ ದೇವಳದ ಆವರಣದಲ್ಲಿ ಸೋಮವಾರ ಬಿಡುಗಡೆಗೊಳಿಸಿದರು.

Vijaya Karnataka 13 Feb 2019, 5:00 am
ಉಚ್ಚಿಲ: ಇತಿಹಾಸ ಪ್ರಸಿದ್ಧ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಶಿಲಾಮಯ ಗರ್ಭಗುಡಿ, ಶಿಲಾಮಯ ಗಣಪತಿ ಗರ್ಭಗುಡಿ, ಶಿಲಾಮಯ ಭದ್ರಕಾಳಿ ಗರ್ಭಗುಡಿ, ಸುತ್ತು ಪೌಳಿ ಮತ್ತು ಗುರುಗಳ ಪೀಠದ ಜೀರ್ಣೋದ್ಧಾರದ ವಿಜ್ಞಾಪನಾ ಪತ್ರವನ್ನು ಜೀರ್ಣೋದ್ಧಾರ ಸಮಿತಿಯ ಗೌರವ ಅಧ್ಯಕ್ಷ ನಾಡೋಜ ಡಾ.ಜಿ. ಶಂಕರ್‌ ಮಹಾಜನ ಸಂಘ ಹಾಗೂ ಜೋರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳ ಸಮ್ಮುಖ ಉಚ್ಚಿಲ ದೇವಳದ ಆವರಣದಲ್ಲಿ ಸೋಮವಾರ ಬಿಡುಗಡೆಗೊಳಿಸಿದರು.
Vijaya Karnataka Web ucchila tempel
ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನ: ಜೀರ್ಣೋದ್ಧಾರದ ವಿಜ್ಞಾಪನಾ ಪತ್ರ ಬಿಡುಗಡೆ


ಈ ಸಂದರ್ಭ ಮಾತನಾಡಿದ ಅವರು, ಮೊಗವೀರ ಪಂಗಡದ ಧಾರ್ಮಿಕ ಅಭಿವ್ಯಕ್ತಿಯ ದ್ಯೋತಕದಂತಿರುವ ಮಹಾಲಕ್ಷ್ಮೀ ಅಮ್ಮನವರ ದೇವಾಲಯವನ್ನು ಭವ್ಯವಾಗಿಸುವ ಸಂಕಲ್ಪಕ್ಕೆ ತೀರ್ಮಾನಿಸಲಾಗಿದ್ದು ಇದೇ ಪ್ರಕಾರವಾಗಿ ಜೀರ್ಣೋದ್ಧಾರ ಕಾರ್ಯಕ್ಕೆ ಮೊಗವೀರ ಮಹಾಜನ ಸಂಘ ಸೇರಿದಂತೆ ಮೊಗವೀರ ಕುಲಬಾಂಧವರು ಮುಂದಾಗಿದ್ದೇವೆ. ಧಾರ್ಮಿಕ ನೆಲೆಗಟ್ಟಿನಲ್ಲಿ ಮೊಗವೀರ ಪಂಗಡದವರು ಒಗ್ಗಟ್ಟಾಗಿ ಈ ಕಾರ್ಯದಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ಮೊಗವೀರ ಮಹಾಜನ ಸಂಘದ ನೂತನ ಅಧ್ಯಕ್ಷ ಜಯ.ಸಿ. ಕೋಟ್ಯಾನ್‌ ಮಾತನಾಡಿ, ಕೇರಳದ ಮಾಧವ ಪೊದುವಾಳ್‌ ಅವರ ಸಾರಥ್ಯದಲ್ಲಿ ಶ್ರೀ ಕ್ಷೇತ್ರದಲ್ಲಿ ತಾಂಬೂಲ ಪ್ರಶ್ನೆ ನೆರವೇರಿದೆ. ವಾಸ್ತು ತಜ್ಞರ ಸಲಹೆಯಂತೆ ಶಿಲ್ಪಶಾಸ್ತ್ರದ ಪ್ರಕಾರ ಶಿಲಾಮಯವಾಗಿ ನೂತನ ಮಂದಿರವನ್ನು ನಿರ್ಮಿಸುವ ಸಂಕಲ್ಪ ಮಾಡಿಕೊಂಡಿರುವ ಹಾಗೂ ಸುಮಾರು ರೂ.25 ಕೋಟಿ ವೆಚ್ಚದ ಈ ಯೋಜಿತ ಯೋಜನೆಗೆ ಉಪ್ಪಳದಿಂದ ಶಿರೂರುವರೆಗಿನ ಎಲ್ಲಾ ಮೊಗವೀರ ಬಾಂಧವರು ಕೈಜೋಡಿಸಬೇಕು ಎಂದು ವಿನಂತಿಸಿದರು. 2020ರ ವಾರ್ಷಿಕ ಜಾತ್ರೆ ಮಹೋತ್ಸವದ ಮುನ್ನ ಜೀರ್ಣೋದ್ಧಾರ ಕಾರ್ಯಗಳನ್ನು ಸಂಪನ್ನಗೊಳಿಸಲು ಅಂದಾಜಿಸಲಾಗಿದ್ದು ಡಾ. ಜಿ.ಶಂಕರ್‌ ಮಾರ್ಗದರ್ಶದಲ್ಲಿ ವಲಯವಾರು ಸಮಿತಿ ರಚಿಸಿ ದೇವತಾ ಕಾರ್ಯ ಮುಂದುವರಿಸಲು ಚಿಂತಿಸಲಾಗಿದೆ ಎಂದು ಹೇಳಿದರು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಬಿ.ಅಮೀನ್‌, ಗೌರವ ಸಲಹೆಗಾರರಾದ ಭುವನೇಂದ್ರ ಕಿದಿಯೂರು, ಆನಂದ ಸಿ.ಕುಂದರ್‌, ಯಶ್‌ಪಾಲ್‌ ಸುವರ್ಣ, ಸರಳಾ ಬಿ.ಕಾಂಚನ್‌, ಉಪಾಧ್ಯಕ್ಷ ರಾದ ಪ್ರಸಾದ್‌ರಾಜ್‌ ಕಾಂಚನ್‌, ತಿಮ್ಮ ಮರಕಾಲ ಅಲೆಯ, ಶಿವಪ್ಪ ಟಿ. ಕಾಂಚನ್‌, ಪ್ರ. ಕಾರ್ಯದರ್ಶಿ ಶಂಕರ್‌ ಸಾಲ್ಯಾನ್‌ ಬಾರ್ಕೂರು, ಕೋಶಾಧಿಕಾರಿ ವಿನಯ ಕರ್ಕೇರ, ಕಾರ್ಯದರ್ಶಿಗಳಾದ ಭರತ್‌ ಕುಮಾರ್‌ ಎರ್ಮಾಳ್‌, ಜಗದೀಶ್‌ ಬಂಗೇರ, ಸರ್ವೋತ್ತಮ ಕುಂದರ್‌, ಕ್ಷೇತ್ರದ ವಿನ್ಯಾಸಗಾರ ಯೋಗೀಶ್‌ ಚಂದ್ರಾಧರ್‌ ಕಿದಿಯೂರು, ಕ್ಷೇತ್ರದ ತಂತ್ರಿ, ವಾಸ್ತು ತಜ್ಞ, ಅರ್ಚಕವೃಂದ, ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು, ಸಮಿತಿ ಸದಸ್ಯರು ಹಾಗೂ ಎಲ್ಲಾ ಮೊಗವೀರ ಮಹಾಸಭಾದ ಎಲ್ಲಾ ಪ್ರಮುಖರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ