ಆ್ಯಪ್ನಗರ

ಯಾರೋ ಮಾಡಿದ ತಪ್ಪಿಗೆ ಸೌದಿಯಲ್ಲಿ ಜೈಲು ಶಿಕ್ಷೆ: ಉಡುಪಿಯ ಹರೀಶ್ ಬಂಗೇರಾ ಬಿಡುಗಡೆಗೆ ಕ್ಷಣಗಣನೆ

'​ಬಂಗೇರಾ ಅವರ ಬಿಡುಗಡೆಯ ಎಲ್ಲಾ ದಾಖಲೆ ಪತ್ರ ಪೂರ್ಣವಾಗಿದ್ದು, ಅವರು ಭಾರತ ಪ್ರಯಾಣದ ಕೊನೆಯ ಹಂತದಲ್ಲಿ ಇದ್ದಾರೆ. ಇದಕ್ಕೆ ಸಹಕರಿಸಿದ ಭಾರತ ವಿದೇಶಾಂಗ ಇಲಾಖೆಗೆ ಧನ್ಯವಾದ' - ಸತೀಶ್ ಕುಮಾರ್ ಬಜಾಲ್

Vijaya Karnataka Web 16 Jul 2021, 4:30 pm

ಹೈಲೈಟ್ಸ್‌:

  • ಹರೀಶ್ ಬಂಗೇರಾ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿ
  • ಸೌದಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಬಂಗೇರಾ
  • ಬಂಗೇರಾ ಹೆಸರಲ್ಲಿ ಸೌದಿ ದೊರೆ ವಿರುದ್ಧ ಪೋಸ್ಟ್ ಮಾಡಲಾಗಿತ್ತು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web harish bangera
ಯಾರೋ ಮಾಡಿದ ತಪ್ಪಿಗೆ ಸೌದಿಯಲ್ಲಿ ಜೈಲು ಶಿಕ್ಷೆ: ಉಡುಪಿಯ ಹರೀಶ್ ಬಂಗೇರಾ ಬಿಡುಗಡೆಗೆ ಕ್ಷಣಗಣನೆ
ಉಡುಪಿ: ಯಾರೋ ನಕಲಿ ಫೇಸ್ ಬುಕ್ ಖಾತೆ ಮಾಡಿದ ತಪ್ಪಿಗೆ ತಾನು ಶಿಕ್ಷೆ ಅನುಭವಿಸುತ್ತಿದ್ದ ಹರೀಶ್ ಬಂಗೇರಾ ಶೀಘ್ರದಲ್ಲೇ ತವರಿಗೆ ಮರಳಲಿದ್ದಾರೆ. ಕುಂದಾಪುರ ಮೂಲದ ಬಂಗೇರಾ ಸೌದಿಯ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಇದೀಗ ಅವರು ಸೌದಿ ಜೈಲಿನಿಂದ ಬಿಡುಗಡೆಗೊಂಡು ಅತೀ ಶೀಘ್ರದಲ್ಲಿ ತನ್ನ ತಾಯಿನಾಡಿಗೆ ಬರಲಿದ್ದಾರೆ ಎಂದು ಮಂಗಳೂರು ಅಷೋಷಿಯೇಷನ್ ಸೌದಿ ಅರೇಬಿಯಾ (MASA) ಇದರ ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಅವರು ತಿಳಿಸಿದ್ದಾರೆ.
ಬಂಗೇರಾ ಅವರ ವಿಮಾನ ಪ್ರಯಾಣದ ವೆಚ್ಚವನ್ನು ಕೂಡಾ ಮಂಗಳೂರು ಅಷೋಷಿಯೇಷನ್‌ನ ಪರವಾಗಿ ಜೈಲು ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಸತೀಶ್ ಕುಮಾರ್ ತಿಳಿಸಿದ್ದಾರೆ.

ಬಂಗೇರ ಅವರ ಬಿಡುಗಡೆಯ ಎಲ್ಲಾ ದಾಖಲೆ ಪತ್ರ ಪೂರ್ಣವಾಗಿದ್ದು, ಅವರು ಭಾರತ ಪ್ರಯಾಣದ ಕೊನೆಯ ಹಂತದಲ್ಲಿ ಇದ್ದಾರೆ ಎಂದು ಅವರು ತಿಳಿಸಿದ್ದಾರೆ. ಇದಕ್ಕೆ ಸಹಕರಿಸಿದ, ಭಾರತ ವಿದೇಶಾಂಗ ಇಲಾಖೆಗೆ ಸತೀಶ್ ಕುಮಾರ್ ಬಜಾಲ್ ಧನ್ಯವಾದ ಅರ್ಪಿಸಿದ್ದಾರೆ.


ಸೌದಿಯ ಮನಿಕಂಠನ್, ಮಹಮ್ಮದ್ ಶರೀಫ್ ದಮ್ಮಾಮ್, ಪ್ರಸನ್ನ ಭಟ್ ರಿಯಾದ್, ಪ್ರಕಾಶ್ ಪೂಜಾರಿ ರಿಯಾದ್, ಕಮಾಲಾಕ್ಷ ಅಡ್ಯಾರ್ ಅಲ್, ಕೋಬರ್, ಜೋಯಿಸನ್ ಅಲ್ ಅಸಾ ಹಾಗೂ ಬಂಗೇರ ಅವರ ಬಿಡುಗಡೆಗೆ ಪ್ರಾರ್ಥಿಸಿದ ಮತ್ತು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಈಗಾಗಲೇ ಉಡುಪಿ ಪೊಲೀಸರು ಬಂಧಿಸಿದ್ದು, ಆರೋಪಿಗಳು ಈಗಾಗಲೇ ಜಾಮೀನು ಪಡೆದು ಬಿಡುಗಡೆಯಾಗಿದ್ಧಾರೆ.

ಏನಿದು ಪ್ರಕರಣ..?

ಕೋಟೇಶ್ವರದ ಗೋಪಾಡಿ ಗ್ರಾಮದ ಹರೀಶ್‌ ಬಂಗೇರಾ ಎಸ್‌. ಅವರ ಹೆಸರಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಸೃಷ್ಟಿಸಲಾಗಿತ್ತು. ಈ ಖಾತೆಯಲ್ಲಿ ಸೌದಿ ಅರೇಬಿಯಾ ದೊರೆ ವಿರುದ್ಧ ಫೋಸ್ಟ್‌ ಮಾಡಲಾಗಿತ್ತು. ಈ ಪೋಸ್ಟ್‌ ಮಾಡಿದವರು ಬಂಗೇರಾ ಎಂದೇ ಭಾವಿಸಿದ್ದ ಸೌದಿ ಪೊಲೀಸರು ಬಂಗೇರಾ ಅವರನ್ನು ಬಂಧಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ