ಆ್ಯಪ್ನಗರ

ಅಪ್ರಾಪ್ತೆ ಮೇಲೆ ಗ್ಯಾಂಗ್‌ರೇಪ್ ಪ್ರಕರಣ : ಆರೋಪಿಗಳಿಗೆ 20 ವರ್ಷ ಸಜೆ ನೀಡಿದ ಉಡುಪಿ ನ್ಯಾಯಾಲಯ

ಉಡುಪಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆಸಿದ ಗ್ಯಾಂಗ್ ರೇಪ್ (ಪೋಕ್ಸೊ) ಪ್ರಕರಣದ ಆರೋಪಿಗಳಿಬ್ಬರಿಗೆ 20 ವರ್ಷದ ಕಠಿಣ ಸಜೆ ಹಾಗೂ ದಂಡ ವಿಧಿಸಿ ಉಡುಪಿ ಜಿಲ್ಲಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ. ಜೋಶಿ ಮಂಗಳವಾರ ಆದೇಶಿಸಿದ್ದಾರೆ.

Vijaya Karnataka Web 26 Nov 2019, 9:59 pm
ಉಡುಪಿ: ಕಳೆದ 3 ವರ್ಷದ ಹಿಂದೆ ನಗರದ ಹೊರವಲಯದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆಸಿದ ಗ್ಯಾಂಗ್ ರೇಪ್ (ಪೋಕ್ಸೊ) ಪ್ರಕರಣದ ಆರೋಪಿಗಳಿಬ್ಬರಿಗೆ 20 ವರ್ಷದ ಕಠಿಣ ಸಜೆ ಹಾಗೂ ದಂಡ ವಿಧಿಸಿ ಉಡುಪಿ ಜಿಲ್ಲಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ. ಜೋಶಿ ಮಂಗಳವಾರ ಆದೇಶಿಸಿದ್ದಾರೆ.
Vijaya Karnataka Web rape case verdict
ಸಾಂದರ್ಭಿಕ ಚಿತ್ರ


ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಆರೋಪಿಗಳಿಬ್ಬರನ್ನು ದೋಷಿಯೆಂಬುದಾಗಿ ಶುಕ್ರವಾರ ಆದೇಶಿಸಿದ್ದು. ನ. 25 ಕ್ಕೆ ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ತಿಳಿಸಿದ್ದರು. ಕಾರಣಾಂತರಗಳಿಂದ ಮಂಗಳವಾರಕ್ಕೆ ಮುಂದೂಡಿದ್ದು, ಮೂಲತಃ ರಾಜಸ್ಥಾನದ ನಿವಾಸಿಗಳಾದ ನೊಂದ ಬಾಲಕಿಯ ತಂದೆಯ ಪರಿಚಯಸ್ಥರು ಟೈಲ್ಸ್ ಕಾರ್ಮಿಕರಾದ ಪದಮ್ ಸಿಂಗ್ ಸೇನಿ (28), ಮುಖೇಶ್ ಮಾಲಿ (20) ಎಂಬುವವರಿಗೆ 20 ವರ್ಷದ ಕಠಿಣ ಸಜೆ ವಿಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಅಪಹರಣ(366ಎ) 10 ವರ್ಷ ಸಜೆ, 15 ಸಾವಿರ ರೂ. ದಂಡ, ತಪ್ಪಿದರೆ 6 ತಿಂಗಳು ಹೆಚ್ಚುವರಿ ಶಿಕ್ಷೆ, ಗ್ಯಾಂಗ್‍ರೇಪ್ (376 ಡಿ), 20 ವರ್ಷ ಸಜೆ, 20 ಸಾವಿರ ರೂ. ದಂಡ, ತಪ್ಪಿದರೆ 1 ವರ್ಷ ಸಾಮಾನ್ಯ ಸಜೆ, ಸಾಕ್ಷಿನಾಶ (201) 7 ವರ್ಷ ಸಜೆ, 10 ಸಾವಿರ ರೂ. ದಂಡ ತಪ್ಪಿದರೆ 6 ತಿಂಗಳ ಶಿಕ್ಷೆ, ಜೀವ ಬೆದರಿಕೆ (506) ಒಂದು ವರ್ಷ ಸಜೆ, 5000 ದಂಡ, ತಪ್ಪಿದರೆ 3. ತಿಂಗಳ ಶಿಕ್ಷೆ ಹಾಗೂ ಪೋಕ್ಸೋ (ಕಲಂ 4 ಮತ್ತು 6) 20 ವರ್ಷ ಸಜೆ, 20 ಸಾವಿರ ದಂಡ, ತಪ್ಪಿದರೆ 1 ವರ್ಷ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ನೊಂದ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರದಿಂದ 1 ಲಕ್ಷ ರೂ. ಪಡೆಯಲು ಅವಕಾಶವಿದೆ ಎಂದಿದ್ದಾರೆ.

ಮಹಾರಾಷ್ಟ್ರಕ್ಕೆ ಉದ್ದವ್‌ ಠಾಕ್ರೆ ಹೊಸ ಸಿಎಂ : ಡಿ.1ಕ್ಕೆ ಪ್ರಮಾಣವಚನ ಸ್ವೀಕಾರ ಸಾಧ್ಯತೆ

ನ್ಯಾಯಾಲಯಕ್ಕೆ ಹೆಚ್ಚಿನ ಭದ್ರತೆ: ಕಳೆದ ವರ್ಷ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸುವಾಗ ಜಿಲ್ಲಾ ವಿಶೇಷ ಸರಕಾರಿ ಅಭಿಯಂತರರ ಮೇಲೆ ಬೂಟು ಎಸೆಯಲಾಗಿತ್ತು. ಅಂದಿನಿಂದಲೂ ನ್ಯಾಯಾಲಯಕ್ಕೆ ಬೂಟು ಅಥವಾ ಪಾದರಕ್ಷೆಗಳನ್ನು ಹಾಕಿಕೊಂಡು ಪ್ರವೇಶಿಸುವುದನ್ನು ನಿಷೇಧಿಸಲಾಗಿತ್ತು. ಈ ತೀರ್ಪು ಪ್ರಕಟಿಸುವಾಗ ನ್ಯಾಯಾಲಯಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು.

ಪ್ರಕರಣದ ಹಿನ್ನೆಲೆ:
ಮೂಲತಃ ರಾಜಸ್ಥಾನದ ನಿವಾಸಿಯಾಗಿದ್ದ ಅಪ್ರಾಪ್ತ ಬಾಲಕಿಯ ತಂದೆ ಕಳೆದ 20 ವರ್ಷಗಳಿಂದ ಉಡುಪಿ ಹೊರವಲಯದಲ್ಲಿ ವಾಸವಿದ್ದು, ಟೈಲ್ಸ್ ಜೋಡಣೆ ಕೆಲಸ ಮಾಡುತ್ತಿದ್ದರು. ಈ‌ ನೊಂದ ಬಾಲಕಿಯ ತಂದೆಯ ಜತೆಗೆ ಕೆಲಸಕ್ಕಿದ್ದ ಪದಮ್ ಸಿಂಗ್ ಸೇನಿ ಹಾಗೂ ಮುಖೇಶ್ ಮಾಲಿ
ಬಾಲಕಿಯ ತಂದೆಯ ಮನೆಯಲ್ಲಿ ಇಲ್ಲದ ವೇಳೆ ಮನೆಗೆ ಬಂದು ಬಾಲಕಿಯನ್ನು ಎಳೆದುಕೊಂಡು ಹೋಗಿ ಆರೋಪಿ ವಾಸಕ್ಕಿದ್ದ ಬಾಡಿಗೆ ಮನೆಯಲ್ಲಿ 2016, ಜು. 8 ರಂದು ಅತ್ಯಾಚಾರ ಎಸಗಿದ್ದರು.

ರಾಷ್ಟ್ರೀಯ ಆರೋಗ್ಯ ತಪಾಸಣಾ ದಿನ: ಆರೋಗ್ಯ ತಪಾಸಣೆಯ ಪ್ರತಿಜ್ಞೆ ಮಾಡಿ...

2016 ರ, ಜು. 9 ರಂದು ಆಕೆಯನ್ನು ಬೆಳಗ್ಗೆ ಮುಖೇಶ್ ಮನೆಗೆ ಬಿಟ್ಟಿದ್ದು, ಆಕೆಯ ಬಾಯಿ ಹಾಗೂ ಕೈ ಕಟ್ಟಿದ್ದ ಬಟ್ಟೆಯನ್ನು ನೀರಿಗೆ ಎಸೆದಿದ್ದರು. ಮನೆಗೆ ಬಂದಿದ್ದ ನೊಂದ ಬಾಲಕಿಗೆ ಆರೋಗ್ಯ ಸಮಸ್ಯೆ ಕಾಡಿದ್ದು, ಅತ್ಯಾಚಾರ ಎಸಗಿದ ಕುರುಹುಗಳು ಕಾಣಿಸಿಕೊಂಡಿತ್ತು.

ಪ್ರಕರಣದ ಪ್ರಮುಖ ಆರೋಪಿ ಪದಮ್ ಈ ಬಗ್ಗೆ ಹೊರಗಡೆ ಬಾಯಿ ಬಿಡದಂತೆ ಬಾಲಕಿಗೆ ಜೀವಬೆದರಿಕೆ ಹಾಕಿದ್ದ. 2016 ರ ಜು.9 ರಂದು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖಾಧಿಕಾರಿಗಳಾದ ಉಡುಪಿ ವೃತ್ತ ನಿರೀಕ್ಷಕ ಶ್ರೀಕಾಂತ್ ಕೆ. ಹಾಗೂ ಟಿ.ಆರ್. ಜೈಶಂಕರ್ ಆರೋಪಿಗಳಿಬ್ಬರನ್ನು ಉದ್ಯಾವರ ಸಮೀಪ ಬಂಧಿಸಿದ್ದು, ಸೆ. 29 ರಂದು ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿ ಸಲ್ಲಿಕೆ ಮಾಡಿದ್ದರು.

ಪ್ರಕರಣದಲ್ಲಿ 34 ಸಾಕ್ಷಿಗಳ ಪೈಕಿ 21 ಸಾಕ್ಷಿಗಳ ಹೇಳಿಕೆ ಪಡೆದುಕೊಳ್ಳಲಾಗಿತ್ತು. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವಿಜಯ ವಾಸು ಪೂಜಾರಿ ವಾದಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ