ಆ್ಯಪ್ನಗರ

ಉಡುಪಿಯಲ್ಲಿ ಚನ್ನರಾಯಪಟ್ಟಣದ ಘಮ ಘಮ ಹಲಸು!

ಚನ್ನರಾಯಪಟ್ಟಣದ ಬರ್ಕೆ ಹಲಸಿನ ಹಣ್ಣನ್ನು ಚಿಕ್ಕಮಗಳೂರಿನ ಇಸ್ಮಾಯಿಲ್‌ ಉಡುಪಿಯ ಮಸೀದಿ ರಸ್ತೆ ಬದಿ ವಾಹನದಲ್ಲೇ ಇಟ್ಟು ಮಾರುತ್ತಿದ್ದು ದಾರಿ ಹೋಕರು ಮೂಗರಳಿಸಿ, ಬಾಯಿ ಚಪ್ಪರಿಸುತ್ತಿದ್ದಾರೆ.

Vijaya Karnataka 17 Mar 2019, 11:56 am
ಉಡುಪಿ: ವಾತಾವರಣದಲ್ಲಿ ಧಗೆ ಏರುತ್ತಿರುವಂತೆ ಸೀಸನ್‌ಗಿಂತ ಒಂದೆರಡು ತಿಂಗಳ ಮೊದಲೇ ನಾನಾ ಬಗೆಯ ಹಣ್ಣುಗಳು ಮಾರುಕಟ್ಟೆಗೆ ಬರತೊಡಗಿವೆ.
Vijaya Karnataka Web jackfruit


ಚನ್ನರಾಯಪಟ್ಟಣದ ಬರ್ಕೆ ಹಲಸಿನ ಹಣ್ಣನ್ನು ಚಿಕ್ಕಮಗಳೂರಿನ ಇಸ್ಮಾಯಿಲ್‌ ಉಡುಪಿಯ ಮಸೀದಿ ರಸ್ತೆ ಬದಿ ವಾಹನದಲ್ಲೇ ಇಟ್ಟು ಮಾರುತ್ತಿದ್ದು ದಾರಿ ಹೋಕರು ಮೂಗರಳಿಸಿ, ಬಾಯಿ ಚಪ್ಪರಿಸುತ್ತಿದ್ದಾರೆ.

ಹಲಸಿನ ಹಣ್ಣನ್ನು ಬಿಚ್ಚಿ ಬಿಡಿಬಿಡಿಯಾಗಿ ಹಲಸಿನ ತೊಳೆಯನ್ನು ಮಾರುವ ಇಸ್ಮಾಯಿಲ್‌ 6 ತೊಳಗೆ 10 ರೂ. ಪಡೆದರೆ ಇಡಿ ಹಲಸಿನ ಹಣ್ಣನ್ನು ಗಾತ್ರದ ಆಧಾರದಲ್ಲಿ 50ರಿಂದ 150 ರೂ. ದರದಲ್ಲಿ ಗ್ರಾಹಕರಿಗೆ ನೀಡುತ್ತಾರೆ.

ರೈತರ ತೋಟದಿಂದ ಹಲಸಿನ ಕಾಯಿಯನ್ನು 30ರಿಂದ 50ರೂ. ದರದಲ್ಲಿ ಖರೀದಿಸಿ ಉಡುಪಿಗೆ ಟೆಂಪೋದಲ್ಲಿ ತಂದು ಲಾಭಾಂಶವಿಟ್ಟು ಮಾರುತ್ತಿರುವ ಇಸ್ಮಾಯಿಲ್‌ ದುರಾಸೆಯಿಲ್ಲದೆ ಪ್ರಾಮಾಣಿಕ ವ್ಯಾಪಾರದಲ್ಲಿ ತೊಡಗಿದ್ದಾರೆ.

ತಂದ 100 ಹಣ್ಣುಗಳೂ ಮಾರಾಟವಾಗಿದ್ದು ಮತ್ತೆ ಹಣ್ಣು ತರಲು ಹೊರಟಿದ್ದಾರೆ. ಈ ಬಾರಿ ಮುಂಗಾರು ಮಳೆ ಸೆಪ್ಟೆಂಬರ್‌ಗೇ ಕೊನೆಯಾಗಿ ಸೆಖೆ ಶುರುವಾಗಿದ್ದರಿಂದ ನಾನಾ ಹಣ್ಣುಗಳ ಸೀಸನ್‌ ಎರಡು ತಿಂಗಳ ಮೊದಲೇ ಆರಂಭವಾಗಿದೆ ಎನ್ನುವುದು ಇಸ್ಮಾಯಿಲ್‌ ಅನುಭವಕ್ಕೂ ಬಂದಿದೆ.

ಕೆ. ಆರ್‌. ಪೇಟೆ, ಬೇಲೂರು, ಮಂಡ್ಯದ ಗ್ರಾಮೀಣ ಭಾಗಕ್ಕೆ ತೆರಳಿ ಹಲಸಿನ ಹಣ್ಣು ತಂದು ಉಡುಪಿ ಜನತೆಗೆ ಮಾರುತ್ತಿದ್ದಾರೆ. ವಿವಿಧ ಹಣ್ಣುಗಳ ರುಚಿ ಹತ್ತಿಸುತ್ತಿದ್ದಾರೆ, ಉತ್ತಮ ತಳಿಯ ಬೀಜ ಬಿತ್ತುವಂತೆ ಪ್ರೇರೇಪಿಸುತ್ತಾರೆ. ವಿವಿಧ ಊರುಗಳಿಂದ ಟೊಮೆಟೊ, ಈರುಳ್ಳಿ, ಬೆಳ್ಳುಳ್ಳಿಯನ್ನೂ ಮಾರುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ