ಆ್ಯಪ್ನಗರ

ಭಕ್ತಿಯಿಂದ ಭಗವಂತ ಸ್ಮರಿಸಿದರೆ ಅನುಗ್ರಹ ಪ್ರಾಪ್ತಿ

ಭಕ್ತಿ, ಪ್ರೀತಿಯಿಂದ ಶ್ರೀಕೃಷ್ಣನ ಸ್ಮರಣೆ ಮಾಡಿದರೆ ಭಗವಂತ ಒಲಿದು ಭಕ್ತರ ಮನೆ ಮನೆಯಲ್ಲಿ ನಿಂತು ಅನುಗ್ರಹಿಸುತ್ತಾನೆ ಎಂದು ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹೇಳಿದರು.

Vijaya Karnataka 9 Jun 2019, 8:34 pm
ಉಡುಪಿ: ಭಕ್ತಿ, ಪ್ರೀತಿಯಿಂದ ಶ್ರೀಕೃಷ್ಣನ ಸ್ಮರಣೆ ಮಾಡಿದರೆ ಭಗವಂತ ಒಲಿದು ಭಕ್ತರ ಮನೆ ಮನೆಯಲ್ಲಿ ನಿಂತು ಅನುಗ್ರಹಿಸುತ್ತಾನೆ ಎಂದು ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹೇಳಿದರು.
Vijaya Karnataka Web krishna


ಶ್ರೀಕೃಷ್ಣ ಸುವರ್ಣಗೋಪುರಮ್‌ ಸಮರ್ಪಣೋತ್ಸವದ ಅಂಗವಾಗಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶನಿವಾರ ನಡೆದ ಧರ್ಮಗೋಪುರಮ್‌ನಲ್ಲಿ ಆಶೀರ್ವಚನ ನೀಡಿದರು.

ಶ್ರೀಕೃಷ್ಣನಿಗೆ ಅರ್ಪಣೆ ಮಾಡಿರುವ ಸುವರ್ಣ ಗೋಪುರ ಎಂದೂ ವ್ಯರ್ಥವಾಗುವುದಿಲ್ಲ. ಲಕ್ಷಾಂತರ ಮಂದಿ ಭಕ್ತರು ತಮ್ಮ ಮೈಮೇಲೆ ತೊಟ್ಟಿರುವ ಬಂಗಾರವನ್ನು ದೇವರಿಗೆ ಭಕ್ತಿಯಿಂದ ಶ್ರದ್ಧೆಯಿಂದ ಕೊಟ್ಟಿದ್ದು, ಭಕ್ತರಿಗೆ ನಿರಂತರ ರಕ್ಷಣೆ ನೀಡುತ್ತಾನೆ. ಈ ಮೂಲಕ ದೇಶ ಸುಭದ್ರವಾಗಿ ರಾಮ ರಾಜ್ಯದ ನಿರ್ಮಾಣವಾಗಲಿ ಎಂದರು.

ಅಧ್ಯಕ್ಷತೆ ವಹಿಸಿ ಧರ್ಮ ಸಂದೇಶ ನೀಡಿದ ಶ್ರೀ ಸುವಿದ್ಯೇಂದ್ರತೀರ್ಥ ಶ್ರೀಪಾದರು, ವಿಷ್ಣು ಸಹಸ್ರನಾಮದಿಂದ ಭಗವಂತನ ಪೂಜೆ ಮಾಡುವುದು ಅತ್ಯಂತ ಶ್ರೇಷ್ಠ ಧರ್ಮ ಎನ್ನುವುದನ್ನು ಭೀಷ್ಮಾಚಾರ್ಯರು ಹೇಳಿದ್ದರು. ಇನ್ನೊಬ್ಬರನ್ನು ನೋಡಿ ಅಪಹಾಸ್ಯ ಮಾಡಬಾರದು. ಅನ್ಯರಿಗೆ ಅನ್ಯಾಯ ಮಾಡಬಾರದು ಎನ್ನುವುದನ್ನು ತಿಳಿಸಲಾಗಿದೆ. ಸುವರ್ಣವೆಂದರೆ ಬಂಗಾರದ ಮೈಬಣ್ಣಯುಳ್ಳವನು ಎಂದರ್ಥ. ಭಗವಂತನೇ ಇಷ್ಟಪಟ್ಟಿರುವ ಸುವರ್ಣ ಗೋಪುರವನ್ನು ಶ್ರೀಗಳು ಮಾಡಿದ್ದಾರೆ ಎಂದು ಗುಣಗಾನ ಮಾಡಿದರು.

ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಪಲಿಮಾರು ಮಠದ ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು, ಶ್ರೀದಾನಮಾರ್ತಾಂಡವರ್ಮ ರಾಜಾ ಮಾಯಿಪ್ಪಾಡಿ ಅರಸರು, ಅದಾನಿ ಗ್ರೂಪ್‌ ಅಧ್ಯಕ್ಷ ಕಿಶೋರ್‌ ಆಳ್ವ ಉಪಸ್ಥಿತರಿದ್ದರು. ಕೊರ್ಲಹಳ್ಳಿ ವೆಂಕಟೇಶ್‌ ಆಚಾರ್ಯ ಕಾರ‍್ಯಕ್ರಮ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ