ಆ್ಯಪ್ನಗರ

ಮುಂಡ್ಕೂರಿನಲ್ಲಿ 13ನೇ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಕನ್ನಡ ಭಾಷೆ ಅತ್ಯಂತ ಸುಂದರ ಭಾಷೆಯಾಗಿದೆ. ಕನ್ನಡ ಭಾಷೆ ಬರಿ ಭಾಷಣಕ್ಕೆ ಸೀಮಿತವಾಗದೆ ಕನ್ನಡ ನಾಡು ನುಡಿಗಾಗಿ ಸದಾ ಶ್ರಮಿಸುವ ಅನಿವಾರ್ಯತೆಯಿದೆ. ಕನ್ನಡ ಮಾಧ್ಯಮದಲ್ಲೇ ಕಲಿತಾಗ ಮಾತ್ರ ಕನ್ನಡ ಉಳಿಯುವುದಕ್ಕೆ ಸಾಧ್ಯ. ಕನ್ನಡ ನಾಡು, ನುಡಿಯನ್ನು ಉಳಿಸುವ ಮನಸ್ಸುಗಳು ಒಂದಾಗಬೇಕಾಗಿದೆ ಎಂದು ಮುಂಡ್ಕೂರು ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹಾಗೂ ಸಮ್ಮೇಳನ ಗೌರವಾಧ್ಯಕ್ಷ ವಾದಿರಾಜ್‌ ಶೆಟ್ಟಿ ಹೇಳಿದರು.

Vijaya Karnataka 14 Jan 2019, 5:00 am
ಬೆಳ್ಮಣ್‌ : ಕನ್ನಡ ಭಾಷೆ ಅತ್ಯಂತ ಸುಂದರ ಭಾಷೆಯಾಗಿದೆ. ಕನ್ನಡ ಭಾಷೆ ಬರಿ ಭಾಷಣಕ್ಕೆ ಸೀಮಿತವಾಗದೆ ಕನ್ನಡ ನಾಡು ನುಡಿಗಾಗಿ ಸದಾ ಶ್ರಮಿಸುವ ಅನಿವಾರ್ಯತೆಯಿದೆ. ಕನ್ನಡ ಮಾಧ್ಯಮದಲ್ಲೇ ಕಲಿತಾಗ ಮಾತ್ರ ಕನ್ನಡ ಉಳಿಯುವುದಕ್ಕೆ ಸಾಧ್ಯ. ಕನ್ನಡ ನಾಡು, ನುಡಿಯನ್ನು ಉಳಿಸುವ ಮನಸ್ಸುಗಳು ಒಂದಾಗಬೇಕಾಗಿದೆ ಎಂದು ಮುಂಡ್ಕೂರು ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹಾಗೂ ಸಮ್ಮೇಳನ ಗೌರವಾಧ್ಯಕ್ಷ ವಾದಿರಾಜ್‌ ಶೆಟ್ಟಿ ಹೇಳಿದರು.
Vijaya Karnataka Web sammelana


ಕಾರ್ಕಳ ತಾಲೂಕಿನ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಳದ ನಾನಾ ಪಾಟೇಕರ್‌ ಸಭಾಂಗಣದ ಮುಂಡ್ಕೂರು ನರಸಿಂಗ ಕಾಮತ್‌ ಸಭಾಂಗಣದ ನಂದಳಿಕೆ ವರಕವಿ ಮುದ್ದಣ ವೇದಿಕೆಯಲ್ಲಿ ಜರುಗಿದ ಉಡುಪಿ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಕ.ಸಾ.ಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, ನಾವು ಇಂಗ್ಲಿಷ್‌ ವಿರೋಧಿಯಲ್ಲ. ಸರಕಾರದ ಕನ್ನಡದ ಬಗೆಗಿಇನ ಉದಾಸಿನ ಭಾವನೆ ಸಲ್ಲದು .ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿದ್ದಾರೆ. ಇಂದು ಕನ್ನಡ ಮಾಧ್ಯಮ ಶಾಲೆಯಲ್ಲಿ 7 ತರಗತಿಗೊಬ್ಬ ಶಿಕ್ಷ ಕನಿದ್ದರೆ ಏನು ಪ್ರಯೋಜನಾ? ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳ ಗತಿ ಏನು? ವರ್ಷಕ್ಕೆ 3 ಸಾವಿರ ಕನ್ನಡ ಶಾಲೆಗಳು ಮುಚ್ಚುತ್ತಿವæ. ಹೀಗೇ ಮುಂದುವರಿದಲ್ಲಿ ಮುಂದಿನ 5 ವರ್ಷದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಸಂಪೂರ್ಣ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ತಾಲೂಕು ಪಂ. ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರ ಉದ್ಘಾಟಿಸಿ ಮಾತನಾಡಿ, ಕನ್ನಡದಲ್ಲಿ ಮಧುರವಾರ ಪದಗಳು ಹಾಗೂ ಮಾತುಗಳಿವೆ ಆದರೆ ಇದು ಆಂಗ್ಲ ಭಾಷೆಯಲ್ಲಿಲ್ಲ. ಆಂಗ್ಲ ಭಾಷೆ ವ್ಯವಹಾರಿಕ ಭಾಷೆಯಾಗಿದೆ. ಕನ್ನಡ ನಾಡು ಬೆಳæಸಬೇಕು ಎಂದರು.

ಕ.ಸ.ಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿ, ಇತ್ತೀಚಿನ ದಿನಗಳಲ್ಲಿ ಕನ್ನಡ ಪ್ರಾಥಮಿಕ ಶಾಲೆಗಳು ಪ್ರಯೋಗ ಶಾಲೆಯಾಗುತ್ತಿದೆ. ಕನ್ನಡ ಕಟ್ಟುತ್ತೇವೆ ಎನ್ನುವವರೇ ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸುತ್ತಿದ್ದಾರೆ ಅತ್ಯಂತ ಬೇಸರದ ಸಂಗತಿ.

ಈ ಸಂದರ್ಭ ಮಕ್ಕಳ ಮೇಳ ಸಾಲಿಗ್ರಾಮ ನಿರ್ದೇಶಕ ಎಚ್‌. ಶ್ರೀಧರ್‌ ಹಂದೆ ಅವರಿಗೆ ಭಾಗವತ ನಾರಾಯಣ ಉಪ್ಪೂರು ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಚ್‌. ಸುಜಯೀಂದ್ರ ಹಂದೆ ಕೋಟ ಅವರ ರಚನೆಯ ಯಕ್ಷ ಗುರು ಪ್ರಾಚಾರ್ಯ ಎಂ.ನಾರ್ಣಪ್ಪ ಉಪ್ಪೂರು ಹಾಗೂ ಪೆರ್ವಾಜೆ ಸ.ಮಾ.ಹಿ.ಪ್ರಾಥಮಿಕ ಶಾಲಾ ವಿದ್ಯಾರ್ಥಿನಿ ಅವನೀ ಉಪಾಧ್ಯ ಬಿ. ವಿರಚಿತ ಬದುಕ ಬೆಳಕು ಮಕ್ಕಳ ಕವಿತೆಗಳ ಪುಸ್ತಕವನ್ನು ಕ.ಸಾ.ಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಬಿಡುಗಡೆಗೊಳಿಸಿದರು.

ಮೆರವಣಿಗೆಯನ್ನು ಮುಂಡ್ಕೂರು ವಿದ್ಯಾವರ್ಧಕ ಪ.ಪೂ ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಬಿ. ಪಾಂಡುರಂಗ ಪ್ರಭು ಚಾಲನೆ ನೀಡಿದರು. ಉಡುಪಿ ಜಿ.ಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಪುಸ್ತಕ ಮಳಿಗೆ ಉದ್ಘಾಟಿಸಿದರು. ಮುಂಡ್ಕೂರು ಗ್ರಾ.ಪಂ. ಅಧ್ಯಕ್ಷೆ ಶುಭಾ ಪಿ.ಶೆಟ್ಟಿ ಧ್ವಜರೋಹಣ ನೆರವೇರಿಸಿ, ಸಾಹಿತ್ಯ ಪರಿಷತ್‌ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪರಿಷತ್‌ ಧ್ವಜರೋಹಣ ಮಾಡಿದರು.

ಸಮ್ಮೇಳನದ ಸರ್ವಾಧ್ಯಕ್ಷ ಡಾ. ಬಿ. ಜನಾರ್ದನ್‌ ಭಟ್‌ ಅವರ ಅಧ್ಯಕ್ಷ ತೆಯಲ್ಲಿ ಜರುಗಿದ ಸಮಾರಂಭದಲ್ಲಿ ಮುಂಡ್ಕೂರು ದೇವಳದ ಅರ್ಚಕ ಮಧ್ವಾಪತಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಕ.ಸ.ಪ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಸತ್ಯಶಂಕರ್‌ ಶೆಟ್ಟಿ, ಮುಂಡ್ಕೂರು ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್‌ ಸುದರ್ಶನ್‌ ವೈ.ಎಸ್‌, ಯುಗಪುರುಷದ ಭುವನಾಭಿರಾಮ ಉಡುಪ, ಡಾ. ಪ್ರಭಾಕರ್‌ ಶೆಟ್ಟಿಗಾರ್‌, ಮುಂಡ್ಕೂರು ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯ ಸುರೇಂದ್ರ ಶೆಟ್ಟಿ , ಕಾಪು ತಾಲೂಕು ಘಟಕ ಅಧ್ಯಕ್ಷ ಪುಂಡಲಿಕ ಮರಾಠೆ, ಬ್ರಹ್ಮವರ ತಾಲೂಕು ಅಧ್ಯಕ್ಷ ನಾರಯಣ ಮಡಿ, ಆನಂದ ಸಾಲಿಗ್ರಾಮ, ಅರುಣ್‌ ರಾವ್‌ ಮುಂಡ್ಕೂರು ಮತ್ತಿತರಿದ್ದರು. ಕ.ಸ.ಪ ಕಾರ್ಕಳ ತಾಲೂಕು ಘಟಕಾಧ್ಯಕ್ಷ ಪ್ರಭಾಕರ್‌ ಶೆಟ್ಟಿ ಕೊಂಡಳ್ಳಿ ಸ್ವಾಗತಿಸಿ, ಉಪನ್ಯಾಸಕ ಪ್ರಕಾಶ್‌ ನಾಯ್ಕ್‌, ಹಾಗೂ ಶಿಕ್ಷ ಕಿ ರಮ್ಯಾ ಅರುಣ್‌ ರಾವ್‌ ಕಾರ್ಯಕ್ರಮ ನಿರೂಪಿಸಿ, ಕಾರ್ಕಳ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಸುಧಾಕರ್‌ ಪೊಸ್ರಾಲು ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ