ಆ್ಯಪ್ನಗರ

ಬರೆಯೋ ಮೊದಲು ಕವನ, ಕೊಡಿ ಗಮನ: ಕವಿಗಳಿಗೆ ವೈದ್ಯರ ಶಿಫಾರಸು!

ಕೀಳರಿಮೆಯಿಲ್ಲದೆ, ಅನ್ಯರಿಗೆ ನೋವು ತಾರದೆ ವಿಶಾಲ ಮನೋಭಾವದಿಂದ ಕವನ ಬರೆಯಲು ಗಮನ ನೀಡುವಂತೆ ಕವಿಗಳಿಗೆ ಡಾ.ಸುಬ್ರಹ್ಮಣ್ಯ ಭಟ್‌ ಶಿಫಾರಸು ಮಾಡಿದ್ದಾರೆ.

Vijaya Karnataka 14 Jan 2019, 5:00 am
ಬೆಳ್ಮಣ್‌: ಕೀಳರಿಮೆಯಿಲ್ಲದೆ, ಅನ್ಯರಿಗೆ ನೋವು ತಾರದೆ ವಿಶಾಲ ಮನೋಭಾವದಿಂದ ಕವನ ಬರೆಯಲು ಗಮನ ನೀಡುವಂತೆ ಕವಿಗಳಿಗೆ ಡಾ.ಸುಬ್ರಹ್ಮಣ್ಯ ಭಟ್‌ ಶಿಫಾರಸು ಮಾಡಿದ್ದಾರೆ.
Vijaya Karnataka Web udupi sammelana
ಬರೆಯೋ ಮೊದಲು ಕವನ, ಕೊಡಿ ಗಮನ: ಕವಿಗಳಿಗೆ ವೈದ್ಯರ ಶಿಫಾರಸು!


ಅವರು ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನಾನಾ ಪಾಟೇಕರ್‌ ಸಭಾಂಗಣದಲ್ಲಿ ಉಡುಪಿ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರ ನಡೆದ ಕವಿಗೋಷ್ಠಿಯಲ್ಲಿ ಮಾತನಾಡಿ, ಮೌನ ಕವನ ವಾಚಿಸಿದರು.

ಬನ್ನಿರಿ ಬನ್ನಿರಿ ಮುಖ್ಯಮಂತ್ರಿಗಳೇ, ಪ್ರಧಾನಿಗಳೆ, ರಾಷ್ಟ್ರಪತಿಗಳೆ...ಅಧಿಕಾರಿಗಳು ಎಚ್ಚರಗೊಳ್ಳುತ್ತಾರೆ, ಅನುದಾನ ಹರಿದು ಬರುತ್ತದೆ... ಎಂದ ಕವಿ ತಾರಾನಾಥ ಮೇಸ್ತ ಶಿರೂರು ಅವರು, ರಾಷ್ಟಪತಿ ರಾಮನಾಥ್‌ ಕೋವಿಂದ್‌ ಉಡುಪಿಗೆ ಬಂದಾಗ ಹೊಂಡ ಬಿದ್ದ ರಸ್ತೆಗಳೆಲ್ಲಾ ದುರಸ್ಥಿಯಾಗಿದ್ದನ್ನು ಪ್ರಸ್ತಾಪಿಸಿದರು. ನನ್ನ ಕವಿತೆಯಲ್ಲಿ ಛಂದಸ್ಸು, ಮಾತ್ರೆ, ಸಿರಪ್‌ ಇಲ್ಲ ಎಂದು ಹಾಸ್ಯ ಕವಿತೆ ಜತೆ ಬೊಜ್ಜದೂಟಕ್ಕೆ ಹೆಣ್ಣಿನ ಕಡೆಯವನೆಂದು ಹೇಳಿ ಬಂದವನ ಕುರಿತ ಕವನವನ್ನು ಪ್ರಸನ್ನ ಸಚ್ಚೇರಿಪೇಟೆ ವಾಚಿಸಿದರು.

ದೀಪಕ್‌ ದುರ್ಗ ಕಾರ್ಕಳ, ಪಿ.ವಿ. ಆನಂದ ಸಾಲಿಗ್ರಾಮ, ಅರುಣಾ ಹೆಬ್ರಿ, ಹರೀಶ್‌ ಕಟಪಾಡಿ(ನದಿಯ ಮೌನ), ಗಿರಿಜಾ ಹೆಗಡೆ ಗಾಂವಕರ್‌ ಕವಿತೆ ವಾಚಿಸಿದರು. ಸಮ್ಮೇಳನಾಧ್ಯಕ್ಷ ಡಾ.ಬಿ.ಜನಾರ್ದನ ಭಟ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ