ಆ್ಯಪ್ನಗರ

ಈ ಶೌಚಾಲಯಕ್ಕೆ ಊರವರಿಗೆ ಪ್ರವೇಶವಿಲ್ಲ, ಯಾತ್ರಾರ್ಥಿಗಳಿಗೆ ಸ್ನಾನಕ್ಕೆ ನೀರಿಲ್ಲ !

ನೀರಿನ ಸಮಸ್ಯೆಯಿಂದಾಗಿ ಈ ಶೌಚಾಲಯ,ಸ್ನಾನಗೃಹಕ್ಕೆ ಊರವರು ಹಾಗೂ ಸ್ಥಳೀಯರಿಗೆ ಪ್ರವೇಶವಿಲ್ಲ, ಯಾತ್ರಾರ್ಥಿಗಳ ಸ್ನಾನಕ್ಕೂ ನೀರಿಲ್ಲ . ಹಾಗಾಗಿ ಸ್ನಾನಕ್ಕೂ ಅವಕಾಶ ಇಲ್ಲ !

Vijaya Karnataka 22 May 2019, 9:29 pm
ಉಡುಪಿ : ನೀರಿನ ಸಮಸ್ಯೆಯಿಂದಾಗಿ ಈ ಶೌಚಾಲಯ,ಸ್ನಾನಗೃಹಕ್ಕೆ ಊರವರು ಹಾಗೂ ಸ್ಥಳೀಯರಿಗೆ ಪ್ರವೇಶವಿಲ್ಲ, ಯಾತ್ರಾರ್ಥಿಗಳ ಸ್ನಾನಕ್ಕೂ ನೀರಿಲ್ಲ . ಹಾಗಾಗಿ ಸ್ನಾನಕ್ಕೂ ಅವಕಾಶ ಇಲ್ಲ !
Vijaya Karnataka Web toilet


ಇದು ಉಡುಪಿ ರಾಜಾಂಗಣ ವಾಹನ ಪಾರ್ಕಿಂಗ್‌ ಪ್ರದೇಶದ ಬಳಿಯ ಯಾತ್ರಾರ್ಥಿಗಳ ಶೌಚಾಲಯ ಸಂಕೀರ್ಣದ ಸ್ಥಿತಿ ಗತಿ.

ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಉಡುಪಿ ನಾಗರಿಕರು, ಸ್ಥಳೀಯರು ಸಹಕರಿಸಬೇಕೆಂದು ಫಲಕ ಹಾಕಿ ಮನವಿ ಮಾಡÜಲಾಗಿದೆ.

ಶ್ರೀ ಕೃಷ್ಣ ಮಠ ಪರಿಸರ ಪ್ರತಿಷ್ಠಾನದ ಅಧೀನದಲ್ಲಿರುವ ಯಾತ್ರಾರ್ಥಿಗಳ ಶೌಚಾಲಯವನ್ನು ಪ್ರವಾಸೋದ್ಯಮ ಇಲಾಖೆಯು ನಿರ್ಮಿತಿ ಕೇಂದ್ರದ ಮೂಲಕ 44 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದೆ.

ತಲಾ 6,000ಲೀ. ಸಾಮರ್ಥ್ಯ‌ದ ನಾಲ್ಕು ಟ್ಯಾಂಕರ್‌ ನೀರು ತರಿಸುತ್ತಿದ್ದು, 19,000 ಲೀ. ನೀರು ದಾಸ್ತಾನಿನ ಟ್ಯಾಂಕ್‌ ನೀರು ಸಾಕಾಗುತ್ತಿಲ್ಲ. ದಿನಕ್ಕೆ ನಾಲ್ಕು ಬಾರಿ ನೀರು, ಫಿನಾಯಿಲ್‌ ಹಾಕಿ ಸ್ವಚ್ಛ ಮಾಡಲಾಗುತ್ತಿದೆ.

ಶನಿವಾರ, ಭಾನುವಾರ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚು. ವಾಹನಗಳು ಪಾರ್ಕಿಂಗ್‌ ಪ್ರದೇಶಕ್ಕೆ ಬಂದಾಗ ಇಳಿದು ಹಾಗೂ ವಾಹನವೇರುವ ಮೊದಲು ಶೌಚಾಲಯಕ್ಕೆ ನಿತ್ಯ ಸರಾಸರಿ 5,000 ಜನ ಬರುತ್ತಾರೆ.

ಟ್ಯಾಂಕರ್‌ ನೀರಿಗೆ(12,000ಲೀ.)2,500ರೂ. ನೀಡಿದರೂ ಸಿಗದ ಪರಿಸ್ಥಿತಿ ಈಗಿಲ್ಲ. ಮಹಿಳೆಯರು+ಪುರುಷರಿಗೆ 12+12 ಶೌಚಾಲಯವಿದ್ದು ನಾಲ್ಕು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಾರೆ. ರಾತ್ರಿ 10ಕ್ಕೆ ಬಂದ್‌ ಮಾಡುತ್ತಿದ್ದ ಶೌಚಾಲಯವನ್ನು ಈಗ ಯಾತ್ರಾರ್ಥಿಗಳ ಅನುಕೂಲಕ್ಕೆ ತೆರೆದಿಡುವಂತಾಗಿದೆ.

ಸಿಬ್ಬಂದಿ ಸಂಬಳ, ಸ್ವಚ್ಛತೆಗಾಗುವ 40,000ರೂ. ಗಳಿಗೂ ಅಧಿಕ ವೆಚ್ಚವನ್ನು ಪ್ರತಿಷ್ಠಾನ ಭರಿಸುತ್ತಿದೆ. ನೀರು ಮಿತವಾಗಿ ಬಳಸಲು ಯಾತ್ರಾರ್ಥಿಗಳಿಗೆ ಸೂಚನೆ ನೀಡಲಾಗಿದೆ ಎನ್ನುತ್ತಾರೆ ಉಸ್ತುವಾರಿ ಜಯ ಸನಿಲ್‌.

ಪಕ್ಕದಲ್ಲೇ ಎಂಆರ್‌ಪಿಎಲ್‌ ವತಿಯಿಂದ ಎರಡು ಅಂತಸ್ತಿನ 46+46 ಸ್ನಾನಗೃಹ ಮತ್ತು ಶೌಚಾಲಯ ಸಂಕೀರ್ಣ 2ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು ಯಾತ್ರಾರ್ಥಿಗಳ ಶೌಚಾಲಯಕ್ಕಿರುವ ಒತ್ತಡ ಕಡಿಮೆಯಾಗಲಿದೆ.

ಮಧ್ವ ಸರೋವರದ ಬಳಿ ಶ್ರೀ ಕೃಷ್ಣ ಮಠದ ವತಿಯಿಂದ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯ, ಸ್ನಾನಗೃಹ ಸಂಕೀರ್ಣವಿದ್ದು ಇಲ್ಲಿ ಸ್ನಾನಕ್ಕೆ 15ರೂ., ಶೌಚಾಲಯಕ್ಕೆ 5ರೂ. ಶುಲ್ಕ ವಸೂಲಾಗುತ್ತಿದೆ. ಮೂರು ಟ್ಯಾಂಕರ್‌ ನೀರು ತರಿಸುತ್ತಿದ್ದು ಸಾಲುತ್ತಿಲ್ಲ. ಬೆಳಗ್ಗೆ 8ರಿಂದ ರಾತ್ರಿ 8.30ರ ತನಕ ಕಾರ್ಯನಿರ್ವಹಿಸುತ್ತಿದ್ದು ನೀರು ಬರುವುದು ವಿಳಂಬವಾದರೆ ಕೆಲ ಕಾಲ ವ್ಯವಸ್ಥೆಗೆ ಬ್ರೇಕ್‌ ಹಾಕುವಂತಹ ಪರಿಸ್ಥಿತಿಯಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ