ಆ್ಯಪ್ನಗರ

ಉದ್ಯಾವರದಲ್ಲಿ 13ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ ಶಿಪ್‌ -2019ಗೆ ಚಾಲನೆ

ಕೊಬುಡೋ ಬುಡೋಕಾನ್‌ ಕರಾಟೆ ಡೋ ಅಸೋಸಿಯೇಶನ್‌ ಕರ್ನಾಟಕ ಇವರ ವತಿಯಿಂದ 13ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ ಶಿಪ್‌ -2019 ಸ್ಪರ್ಧಾಕೂಟದ ಉದ್ಘಾಟನಾ ಸಮಾರಂಭ ಉದ್ಯಾವರ ಗ್ರಾಮ ಪಂಚಾಯತ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆಯಿತು.

Vijaya Karnataka 13 Jan 2019, 9:28 pm
ಕಟಪಾಡಿ : ಕೊಬುಡೋ ಬುಡೋಕಾನ್‌ ಕರಾಟೆ ಡೋ ಅಸೋಸಿಯೇಶನ್‌ ಕರ್ನಾಟಕ ಇವರ ವತಿಯಿಂದ 13ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ ಶಿಪ್‌ -2019 ಸ್ಪರ್ಧಾಕೂಟದ ಉದ್ಘಾಟನಾ ಸಮಾರಂಭ ಉದ್ಯಾವರ ಗ್ರಾಮ ಪಂಚಾಯತ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆಯಿತು.
Vijaya Karnataka Web karate


ಸಮಾಜ ಸೇವಕ ಉದ್ಯಾವರ ಹಲೀಮಾ ಸಾಬ್ಜಿ ಟ್ರಸ್ಟ್‌ನ ವಿಶ್ವಸ್ಥರಾದ ಹಾಜಿ ಅಬ್ದುಲ್‌ ಜಲೀಲ್‌ ಸಾಹೇಬ್‌ ಉದ್ಯಾವರ ಕರಾಟೆ ಸ್ಪರ್ಧೆಯನ್ನು ಉದ್ಘಾಟಿಸಿ ಶುಭ ಕೋರಿದರು.

ಶುಭಾಶಂಸನೆಗೈದ ಅಂಬಲಪಾಡಿ ಶ್ರೀ ಜನಾರ್ದನಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬಿ. ವಿಜಯ ಬಲ್ಲಾಳ್‌ ಮಾತನಾಡಿ, ಅಳುಪರ ನೆಲೆವೀಡಾದ ಉದ್ಯಾವರದ ನೆಲದಲ್ಲಿ ಸಾವಿರಾರು ಕರಾಟೆ ಪಟುಗಳನ್ನು ಸೇರಿಸಿ ಇಷ್ಟು ದೊಡ್ಡ ಕೂಟವನ್ನು ಆಯೋಜಿಸಿರುವ ಆಯೋಜಕರು ಅಭಿನಂದನಾರ್ಹರು ಎಂದರು.

ಉದ್ಯಮಿ ಹರಿಯಪ್ಪ ಕೋಟ್ಯಾನ್‌ ಅಧ್ಯಕ್ಷ ತೆ ವಹಿಸಿದ್ದರು. ರಾಜ್ಯ ಮತ್ತು ಸ್ಥಳೀಯ ಕರಾಟೆ ಅಸೋಸಿಯೇಶನ್‌ ಪದಾಧಿಕಾರಿಗಳಾದ ಅಲ್ತಾಫ್‌ ಪಾಷಾ, ಪ್ರವೀಣ್‌ ಕುಮಾರ್‌, ಈಶ್ವರ ಕಟೀಲ್‌, ಸಜು ಎಮ್‌ಎಮ್‌, ಎ.ಝೆಡ್‌.ಮುಹೀಬ್‌, ಉದ್ಯಾವರ ಬಿಲ್ಲವರ ಸಂಘದ ಅಧ್ಯಕ್ಷ ಪ್ರತಾಪ್‌ ಕುಮಾರ್‌, ಉದ್ಯಾವರ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಅಧ್ಯಕ್ಷ ಉದ್ಯಮಿ ಪ್ರಕಾಶ್‌ ಟಿ.ಕೋಟ್ಯಾನ್‌, ಉದ್ಯಮಿ ಯೋಗೇಶ್‌ ಕೋಟ್ಯಾನ್‌ ಉದ್ಯಾವರ ಹಾಗೂ ವಿವಿಧ ವಿದ್ಯಾ ಸಂಸ್ಥೆಗಳ ಮುಖ್ಯಸ್ಥರು, ಕ್ರೀಡಾಪಟುಗಳು ಉಪಸ್ಥಿತರಿದ್ದರು.

ಕೊಬುಡೋ ಬುಡೋಕಾನ್‌ ಕರಾಟೆ ಡೋ ಅಸೋಸಿಯೇಶನ್‌ ಕರ್ನಾಟಕ ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಸಂತೋಷ್‌ ಸುವರ್ಣ ಬೊಳ್ಜೆ ಸ್ವಾಗತಿಸಿದರು. ರಾಜ್ಯಾಧ್ಯಕ್ಷ ಮತ್ತು ಮುಖ್ಯ ಶಿಕ್ಷ ಕರಾದ ರವಿಕುಮಾರ್‌ ಉದ್ಯಾವರ ಪ್ರಾಸ್ತಾವಿಕ ಮಾತುಗಳನ್ನಾಡಿದರು., ಸಂಘದ ಉಪಾಧ್ಯಕ್ಷ ಉಮೇಶ್‌ ಕರ್ಕೇರ ವಂದಿಸಿದರು, ಸಚಿನ್‌ ನಿರೂಪಿಸಿದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ