ಕಟಪಾಡಿ: ಉತ್ತರ ಕ್ರಿಯೆಯಲ್ಲಿ ಸ್ವರ್ಗಸ್ಥರಾದವರಿಗೆಂದು ಬಲಿ ಬಾಳೆಯಲ್ಲಿಡುವ ಅನ್ನವನ್ನು ತಿನ್ನಲು ಕಾಗೆ ಇಲ್ಲವೇ?, ಸಂಪರ್ಕಿಸಿ ಎಂಬ ಫೇಸ್ಬುಕ್ ಪೋಸ್ಟ್ ಮೂಲಕ ಸುದ್ದಿಯಾಗಿದ್ದ ಕಾಪು ಮೂಲದ ಕಾಗೆಯ ಮಾಲೀಕ ಪ್ರಶಾಂತ್ ಪೂಜಾರಿಗೆ ಅರಣ್ಯಾಧಿಕಾರಿಗಳು ಶನಿವಾರ ಶಾಕ್ ಕೊಟ್ಟಿದ್ದಾರೆ.
ಮೂರು ತಿಂಗಳಿಂದ ಸಾಕಿದ್ದ ಕಾಗೆಯನ್ನು ಕಾಪು ವಲಯ ಅರಣ್ಯ ಇಲಾಖೆಯ ಸಿಬ್ಬಂದಿ ಶನಿವಾರ ಮೇಲಧಿಕಾರಿಗಳ ಆದೇಶದ ಮೇರೆಗೆ ಬಿಡಿಸಿಕೊಂಡು ದೂರದ ಶಿರ್ವ ಪಿಲಾರು ಕಾಡಿಗೆ ಬಿಟ್ಟು ಬಂದಿದ್ದಾರೆ. ಕಾಗೆಯಿಂದಲೇ ದಿನ ಬೆಳಗಾಗುವಷ್ಟರಲ್ಲಿ ಫೇಮಸ್ ಆಗಿದ್ದ ಕಾಗೆ ಮಾಲೀಕ ಈಗ ಅದೇ ದುಃಖದಿಂದ ಥಂಡಾ ಹೊಡೆದು ಕುಳಿತಿದ್ದಾರೆ.
ಫೇಸ್ಬುಕ್ ಪೋಸ್ಟ್ ವೈರಲ್: ತನ್ನಲ್ಲಿ ತರಬೇತಿ ನೀಡಿರುವ ಕಾಗೆ ಇದೆ. ಇದು ಶ್ರಾದ್ಧ ಕಾರ್ಯಕ್ರಮದಲ್ಲಿ ಸ್ವರ್ಗಸ್ಥರಾದವರಿಗೆ ಇಟ್ಟ ಅನ್ನ ತಿನ್ನುವ ಮೂಲಕ ಕ್ರಿಯೆ ಪೂರ್ಣಗೊಳಿಸಲು ಲಭ್ಯವಿದೆ ಎಂದು ಫೇಸ್ಬುಕ್ನಲ್ಲಿ ಹಾಕಿದ್ದ ಪೋಸ್ಟ್ ವೈರಲ್ ಆಗಿದೆ. ಇದು ಸುದ್ದಿಯಾಗುತ್ತಲೇ ಕೆಲವು ವೆಬ್ಪೋರ್ಟಲ್ಗಳು ಮತ್ತು ಪತ್ರಿಕೆಗಳು ವರದಿ ಪ್ರಕಟಿಸಿ ಮತ್ತಷ್ಟು ಕುತೂಹಲ ಮೂಡಿಸಿದರು.
ಈತ ಈಗಾಗಲೇ ಈ ಉದ್ಯಮ ಆರಂಭಿಸಿದ್ದಾಗಿಯೂ, ಭರ್ಜರಿ ವ್ಯಾಪಾರ ನಡೆಯುತ್ತಿರುವುದಾಗಿಯೂ ಸುದ್ದಿ ಹಬ್ಬಿತು. ಸಾಮಾಜಿಕ ಜಾಲತಾಣದ ಹುಚ್ಚು ಹೊಳೆಯಲ್ಲಿ ತಿರುವು ಪಡೆಯುತ್ತಾ ಸಾಗಿದ ಸುದ್ದಿ ಒಂದು ಹಂತದಲ್ಲಿ ಕಾಗೆ ಮಾಲೀಕ ಗಿರಾಕಿಗಳೊಡನೆ ಸಂಭಾಷಣೆ ನಡೆಸುವ ವಾಯ್ಸ್ ಪೋಸ್ಟ್ ಕೂಡ ಹರಿದಾಡಲು ಶುರುವಾಯಿತು. ಒಂದು ಶ್ರಾದ್ಧಕ್ಕೆ ಇಂತಿಷ್ಟು, ಎರಡು ಇದ್ದರೆ ಇನ್ನೊಂದು ಫ್ರೀ ಎಂದು ಮಾಲೀಕ ವ್ಯವಹಾರ ಕುದುರಿಸುವ ಮಟ್ಟಿಗೆ ತಮಾಷೆ ಹಬ್ಬಿತು.
ಈ ಮಧ್ಯೆ ಪ್ರಾಣಿದಯಾ ಸಂಘಟನೆ ಕಾರ್ಯಕರ್ತರು ಕ್ಯಾತೆ ತೆಗೆದು ಅರಣ್ಯಾಧಿಕಾರಿಗಳಿಗೆ ಒತ್ತಡ ತಂದರು. ಇದೆಲ್ಲದರ ಪರಿಣಾಮ ವಲಯ ಅರಣ್ಯ ಸಂರಕ್ಷ ಣಾಧಿಕಾರಿ ಕ್ಲಿಪರ್ಡ್ ಲೋಬೋ ಅದೇಶದ ಮೇರೆಗೆ ಕಾಪು ಮತ್ತು ಪಡುಬಿದ್ರಿಯ ಅರಣ್ಯ ರಕ್ಷಕರಾದ ಮಂಜುನಾಥ್ ಮತ್ತು ಅಭಿಷೇಕ್ ಎಂಬವರು ಮನೆಯ ಗೂಡಿನಲ್ಲಿ ಕೂಡಿ ಹಾಕಿಟ್ಟಿದ್ದ ಕಾಗೆಯನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಆದರೆ ಬಡಪಾಯಿ ಕಾಗೆ ಸಂರಕ್ಷಿತ ಪ್ರಾಣಿ ಪಕ್ಷಿಗಳ ಪಟ್ಟಿಯಲ್ಲಿ ಬರದಿರುವ ಕಾರಣ ಕಾಗೆ ಮಾಲೀಕ ಯಾವುದೇ ಕಾನೂನು ಪ್ರಕ್ರಿಯೆಗೆ ಒಳಪಡದೆ ಬಚಾವಾಗಿದ್ದಾರೆ.
ಜನರ ಪ್ರತಿಕ್ರಿಯೆ ತಿಳಿಯುವ ಕುತೂಹಲವೇ ಮುಳುವಾಯಿತು
ವಾಸ್ತವದಲ್ಲಿ ಪ್ರಶಾಂತ್ ಪೂಜಾರಿ ಅಂತಹ ವ್ಯವಹಾರವೇನೂ ನಡೆಸಿಯೇ ಇರಲಿಲ್ಲ. ವೃತ್ತಿಯಲ್ಲಿ ಟೈಲರ್ ಆಗಿರುವ ಅವರ ಮನೆ ಬಳಿ ಮೂರು ತಿಂಗಳ ಹಿಂದೆ 3 ಕಾಗೆ ಮರಿಗಳು ಮರದಿಂದ ನೆಲಕ್ಕೆ ಬಿದ್ದಿದ್ದವು. ಅವುಗಳ ಪೈಕಿ ಎರಡು ಸತ್ತಿದ್ದು, ಒಂದನ್ನು ಈ ಯುವಕ ಜೋಪಾನವಾಗಿ ಸಾಕಿದ್ದ. ಈಗ ಶ್ರಾದ್ಧಕ್ಕೂ ಕಾಗೆ ಸಿಗುತ್ತಿಲ್ಲ, ಇದರ ಬ್ಯುಸಿನೆಸ್ ಮಾಡಬಹುದು ಎಂದು ಯಾರೋ ತಮಾಷೆಗೆ ಹೇಳಿದ್ದಕ್ಕೆ ಈತ ಜನರ ಪ್ರತಿಕ್ರಿಯೆ ತಿಳಿಯುವ ಕುತೂಹಲಕ್ಕೆ ಪೋಸ್ಟ್ ಹಾಕಿದ್ದ ಅಷ್ಟೇ.
ಅಲ್ಲಿ ಇಲ್ಲಿ ವರದಿಯಾದಂತೆ ಈತ ಎಲ್ಲೂ ಇದನ್ನು ಶ್ರಾದ್ಧಕ್ಕೆ ಬಳಸಿಯೇ ಇಲ್ಲ. ವೈರಲ್ ಆದ ಈತನ ಪೋಸ್ಟ್ನ ಬೆನ್ನಿಗೆ ಯಾರೋ ಈತನೇ ವ್ಯವಹಾರದ ಬಗ್ಗೆ ಮಾತನಾಡುತ್ತಾ ದರ ನಿಗದಿಪಡಿಸುವಂತೆ ಬಿಂಬಿಸಿ ಧ್ವನಿಮುದ್ರಿಕೆಯನ್ನು ವೈರಲ್ ಮಾಡಿದ್ದು ಎಲ್ಲರ ಗಮನ ಸೆಳೆದ ಪರಿಣಾಮ ಈಗ ತಾನು ಸಾಕಿದ ಕಾಗೆಯನ್ನೂ ಈತ ಕಳಕೊಳ್ಳುವಂತಾಯಿತು.
ಮೂರು ತಿಂಗಳಿಂದ ಸಾಕಿದ್ದ ಕಾಗೆಯನ್ನು ಕಾಪು ವಲಯ ಅರಣ್ಯ ಇಲಾಖೆಯ ಸಿಬ್ಬಂದಿ ಶನಿವಾರ ಮೇಲಧಿಕಾರಿಗಳ ಆದೇಶದ ಮೇರೆಗೆ ಬಿಡಿಸಿಕೊಂಡು ದೂರದ ಶಿರ್ವ ಪಿಲಾರು ಕಾಡಿಗೆ ಬಿಟ್ಟು ಬಂದಿದ್ದಾರೆ. ಕಾಗೆಯಿಂದಲೇ ದಿನ ಬೆಳಗಾಗುವಷ್ಟರಲ್ಲಿ ಫೇಮಸ್ ಆಗಿದ್ದ ಕಾಗೆ ಮಾಲೀಕ ಈಗ ಅದೇ ದುಃಖದಿಂದ ಥಂಡಾ ಹೊಡೆದು ಕುಳಿತಿದ್ದಾರೆ.
ಫೇಸ್ಬುಕ್ ಪೋಸ್ಟ್ ವೈರಲ್: ತನ್ನಲ್ಲಿ ತರಬೇತಿ ನೀಡಿರುವ ಕಾಗೆ ಇದೆ. ಇದು ಶ್ರಾದ್ಧ ಕಾರ್ಯಕ್ರಮದಲ್ಲಿ ಸ್ವರ್ಗಸ್ಥರಾದವರಿಗೆ ಇಟ್ಟ ಅನ್ನ ತಿನ್ನುವ ಮೂಲಕ ಕ್ರಿಯೆ ಪೂರ್ಣಗೊಳಿಸಲು ಲಭ್ಯವಿದೆ ಎಂದು ಫೇಸ್ಬುಕ್ನಲ್ಲಿ ಹಾಕಿದ್ದ ಪೋಸ್ಟ್ ವೈರಲ್ ಆಗಿದೆ. ಇದು ಸುದ್ದಿಯಾಗುತ್ತಲೇ ಕೆಲವು ವೆಬ್ಪೋರ್ಟಲ್ಗಳು ಮತ್ತು ಪತ್ರಿಕೆಗಳು ವರದಿ ಪ್ರಕಟಿಸಿ ಮತ್ತಷ್ಟು ಕುತೂಹಲ ಮೂಡಿಸಿದರು.
ಈತ ಈಗಾಗಲೇ ಈ ಉದ್ಯಮ ಆರಂಭಿಸಿದ್ದಾಗಿಯೂ, ಭರ್ಜರಿ ವ್ಯಾಪಾರ ನಡೆಯುತ್ತಿರುವುದಾಗಿಯೂ ಸುದ್ದಿ ಹಬ್ಬಿತು. ಸಾಮಾಜಿಕ ಜಾಲತಾಣದ ಹುಚ್ಚು ಹೊಳೆಯಲ್ಲಿ ತಿರುವು ಪಡೆಯುತ್ತಾ ಸಾಗಿದ ಸುದ್ದಿ ಒಂದು ಹಂತದಲ್ಲಿ ಕಾಗೆ ಮಾಲೀಕ ಗಿರಾಕಿಗಳೊಡನೆ ಸಂಭಾಷಣೆ ನಡೆಸುವ ವಾಯ್ಸ್ ಪೋಸ್ಟ್ ಕೂಡ ಹರಿದಾಡಲು ಶುರುವಾಯಿತು. ಒಂದು ಶ್ರಾದ್ಧಕ್ಕೆ ಇಂತಿಷ್ಟು, ಎರಡು ಇದ್ದರೆ ಇನ್ನೊಂದು ಫ್ರೀ ಎಂದು ಮಾಲೀಕ ವ್ಯವಹಾರ ಕುದುರಿಸುವ ಮಟ್ಟಿಗೆ ತಮಾಷೆ ಹಬ್ಬಿತು.
ಈ ಮಧ್ಯೆ ಪ್ರಾಣಿದಯಾ ಸಂಘಟನೆ ಕಾರ್ಯಕರ್ತರು ಕ್ಯಾತೆ ತೆಗೆದು ಅರಣ್ಯಾಧಿಕಾರಿಗಳಿಗೆ ಒತ್ತಡ ತಂದರು. ಇದೆಲ್ಲದರ ಪರಿಣಾಮ ವಲಯ ಅರಣ್ಯ ಸಂರಕ್ಷ ಣಾಧಿಕಾರಿ ಕ್ಲಿಪರ್ಡ್ ಲೋಬೋ ಅದೇಶದ ಮೇರೆಗೆ ಕಾಪು ಮತ್ತು ಪಡುಬಿದ್ರಿಯ ಅರಣ್ಯ ರಕ್ಷಕರಾದ ಮಂಜುನಾಥ್ ಮತ್ತು ಅಭಿಷೇಕ್ ಎಂಬವರು ಮನೆಯ ಗೂಡಿನಲ್ಲಿ ಕೂಡಿ ಹಾಕಿಟ್ಟಿದ್ದ ಕಾಗೆಯನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಆದರೆ ಬಡಪಾಯಿ ಕಾಗೆ ಸಂರಕ್ಷಿತ ಪ್ರಾಣಿ ಪಕ್ಷಿಗಳ ಪಟ್ಟಿಯಲ್ಲಿ ಬರದಿರುವ ಕಾರಣ ಕಾಗೆ ಮಾಲೀಕ ಯಾವುದೇ ಕಾನೂನು ಪ್ರಕ್ರಿಯೆಗೆ ಒಳಪಡದೆ ಬಚಾವಾಗಿದ್ದಾರೆ.
ಜನರ ಪ್ರತಿಕ್ರಿಯೆ ತಿಳಿಯುವ ಕುತೂಹಲವೇ ಮುಳುವಾಯಿತು
ವಾಸ್ತವದಲ್ಲಿ ಪ್ರಶಾಂತ್ ಪೂಜಾರಿ ಅಂತಹ ವ್ಯವಹಾರವೇನೂ ನಡೆಸಿಯೇ ಇರಲಿಲ್ಲ. ವೃತ್ತಿಯಲ್ಲಿ ಟೈಲರ್ ಆಗಿರುವ ಅವರ ಮನೆ ಬಳಿ ಮೂರು ತಿಂಗಳ ಹಿಂದೆ 3 ಕಾಗೆ ಮರಿಗಳು ಮರದಿಂದ ನೆಲಕ್ಕೆ ಬಿದ್ದಿದ್ದವು. ಅವುಗಳ ಪೈಕಿ ಎರಡು ಸತ್ತಿದ್ದು, ಒಂದನ್ನು ಈ ಯುವಕ ಜೋಪಾನವಾಗಿ ಸಾಕಿದ್ದ. ಈಗ ಶ್ರಾದ್ಧಕ್ಕೂ ಕಾಗೆ ಸಿಗುತ್ತಿಲ್ಲ, ಇದರ ಬ್ಯುಸಿನೆಸ್ ಮಾಡಬಹುದು ಎಂದು ಯಾರೋ ತಮಾಷೆಗೆ ಹೇಳಿದ್ದಕ್ಕೆ ಈತ ಜನರ ಪ್ರತಿಕ್ರಿಯೆ ತಿಳಿಯುವ ಕುತೂಹಲಕ್ಕೆ ಪೋಸ್ಟ್ ಹಾಕಿದ್ದ ಅಷ್ಟೇ.
ಅಲ್ಲಿ ಇಲ್ಲಿ ವರದಿಯಾದಂತೆ ಈತ ಎಲ್ಲೂ ಇದನ್ನು ಶ್ರಾದ್ಧಕ್ಕೆ ಬಳಸಿಯೇ ಇಲ್ಲ. ವೈರಲ್ ಆದ ಈತನ ಪೋಸ್ಟ್ನ ಬೆನ್ನಿಗೆ ಯಾರೋ ಈತನೇ ವ್ಯವಹಾರದ ಬಗ್ಗೆ ಮಾತನಾಡುತ್ತಾ ದರ ನಿಗದಿಪಡಿಸುವಂತೆ ಬಿಂಬಿಸಿ ಧ್ವನಿಮುದ್ರಿಕೆಯನ್ನು ವೈರಲ್ ಮಾಡಿದ್ದು ಎಲ್ಲರ ಗಮನ ಸೆಳೆದ ಪರಿಣಾಮ ಈಗ ತಾನು ಸಾಕಿದ ಕಾಗೆಯನ್ನೂ ಈತ ಕಳಕೊಳ್ಳುವಂತಾಯಿತು.