ಧಾರ್ಮಿಕ ಹಿನ್ನೆಲೆಯ ವಂಡಾರು ಕಂಬಳ ಸಂಭ್ರಮ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ವಿಶಿಷ್ಟ ಎಂದೆ ಪರಿಗಣಿಸಲ್ಪಟ್ಟಿರುವ ಧಾರ್ಮಿಕ ಹಿನ್ನೆಲೆಯ ಉಡುಪಿ ಜಿಲ್ಲೆಯ ವಂಡಾರು ಕಂಬಳ ಮಂಗಳವಾರ ಸಡಗರ ಸಂಭ್ರಮದಿಂದ ನಡೆಯಿತು.
Vijaya Karnataka 12 Dec 2018, 5:00 am
ವಿಕ ಸುದ್ದಿಲೋಕ ಕುಂದಾಪುರ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ವಿಶಿಷ್ಟ ಎಂದೆ ಪರಿಗಣಿಸಲ್ಪಟ್ಟಿರುವ ಧಾರ್ಮಿಕ ಹಿನ್ನೆಲೆಯ ಉಡುಪಿ ಜಿಲ್ಲೆಯ ವಂಡಾರು ಕಂಬಳ ಮಂಗಳವಾರ ಸಡಗರ ಸಂಭ್ರಮದಿಂದ ನಡೆಯಿತು.
ಉತ್ಸವದ ಪ್ರಯುಕ್ತ ಕಂಬಳ ಮನೆಯ ತುಳಸೀ ಅಮ್ಮನವರು, ಶ್ರೀ ಸ್ವಾಮಿ, ನೆಗಳೇಶ್ವರ, ಮನೆ ಆರಾಧ್ಯ ದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳು ನೆರವೇರಿದ ಬಳಿಕ ಕಂಬಳ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು. ಕಂಬಳಗದ್ದೆ ಸುತ್ತು ಪ್ರದಕ್ಷಿಣೆ ನಡೆಸಿ ಅಕ್ಕಿ ಚೆಲ್ಲಿ ಗದ್ದೆಯ ನೀರನ್ನು ತೀರ್ಥವಾಗಿ ಸ್ವೀಕರಿಸಿದರು. ಜನ, ಜಾನುವಾರು ಒಳಿತಿಗಾಗಿ ಹರಕೆ ಸಲ್ಲಿಸುವ ಪರಿಪಾಠ ಇಲ್ಲಿ ಬೆಳೆದು ಬಂದಿದ್ದು ಹರಕೆ ಸಲ್ಲಿಸುವವರು ತಮ್ಮ ಜಾನುವಾರುಗಳನ್ನು ಗದ್ದೆಗಿಳಿಸಿ ಓಡಿಸಿದರು. ಬಳಿಕ ಕಂಬಳಗದ್ದೆ ನಡುವಿನ ಕೂರ್ಚಿ ಕಂಬಕ್ಕೆ ಸುತ್ತುವರಿದು ಸಂಪ್ರದಾಯದಂತೆ ಕಂಬಳ ಮನೆಯ ದೇವರಿಗೆ ವಂದಿಸಿ ಕೋಣ ಓಡಿಸುವ ಸ್ಪರ್ಧೆ ಸಂಪನ್ನಗೊಂಡಿತು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ವಿಶಿಷ್ಟ ಎಂದೆ ಪರಿಗಣಿಸಲ್ಪಟ್ಟಿರುವ ಧಾರ್ಮಿಕ ಹಿನ್ನೆಲೆಯ ಉಡುಪಿ ಜಿಲ್ಲೆಯ ವಂಡಾರು ಕಂಬಳ ಮಂಗಳವಾರ ಸಡಗರ ಸಂಭ್ರಮದಿಂದ ನಡೆಯಿತು.
ಉತ್ಸವದ ಪ್ರಯುಕ್ತ ಕಂಬಳ ಮನೆಯ ತುಳಸೀ ಅಮ್ಮನವರು, ಶ್ರೀ ಸ್ವಾಮಿ, ನೆಗಳೇಶ್ವರ, ಮನೆ ಆರಾಧ್ಯ ದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳು ನೆರವೇರಿದ ಬಳಿಕ ಕಂಬಳ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು. ಕಂಬಳಗದ್ದೆ ಸುತ್ತು ಪ್ರದಕ್ಷಿಣೆ ನಡೆಸಿ ಅಕ್ಕಿ ಚೆಲ್ಲಿ ಗದ್ದೆಯ ನೀರನ್ನು ತೀರ್ಥವಾಗಿ ಸ್ವೀಕರಿಸಿದರು. ಜನ, ಜಾನುವಾರು ಒಳಿತಿಗಾಗಿ ಹರಕೆ ಸಲ್ಲಿಸುವ ಪರಿಪಾಠ ಇಲ್ಲಿ ಬೆಳೆದು ಬಂದಿದ್ದು ಹರಕೆ ಸಲ್ಲಿಸುವವರು ತಮ್ಮ ಜಾನುವಾರುಗಳನ್ನು ಗದ್ದೆಗಿಳಿಸಿ ಓಡಿಸಿದರು. ಬಳಿಕ ಕಂಬಳಗದ್ದೆ ನಡುವಿನ ಕೂರ್ಚಿ ಕಂಬಕ್ಕೆ ಸುತ್ತುವರಿದು ಸಂಪ್ರದಾಯದಂತೆ ಕಂಬಳ ಮನೆಯ ದೇವರಿಗೆ ವಂದಿಸಿ ಕೋಣ ಓಡಿಸುವ ಸ್ಪರ್ಧೆ ಸಂಪನ್ನಗೊಂಡಿತು.