ಆ್ಯಪ್ನಗರ

ಕರಾವಳಿಯಲ್ಲಿ ತರಕಾರಿಗಿಂತ ಬಂಗುಡೆ, ಬೂತಾಯಿ ಮೀನೇ ಅಗ್ಗ! ನವರಾತ್ರಿಗೆ ತರಕಾರಿ ದರ ಮತ್ತಷ್ಟು ಏರಿಕೆ?

Vegetable and Nonveg Price In Coastal Karnataka: ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿದ್ದ ಭಾರೀ ಮಳೆ, ನೆರೆ, ರೋಗದಿಂದಾಗಿ ತರಕಾರಿ ತುಟ್ಟಿಯಾಗಿದ್ದು, ಮಳೆ ಮುಗಿದು ಬೆಳೆಯುವ ತರಕಾರಿ ಮಾರುಕಟ್ಟೆಗೆ ಪೂರೈಕೆಯಾಗಲು ಏನಿಲ್ಲವೆಂದರೂ 2 ರಿಂದ 3 ತಿಂಗಳೇ ಬೇಕು. ತೋಟಗಾರಿಕಾ ಇಲಾಖೆಯಿಂದ ಅಂಗಳ, ತಾರಸಿ ತರಕಾರಿ ಬೆಳೆಯಲು ಪ್ರೋತ್ಸಾಹ ನೀಡುತ್ತಿದ್ದರೂ ಆಸಕ್ತರು ವಿರಳ. ಆರೋಗ್ಯ, ತಾಜಾತನ, ವಿಷ ಮುಕ್ತ ಆಹಾರದ ನಿಟ್ಟಿನಲ್ಲಿ ತರಕಾರಿ ಬೆಳೆಯಿರಿ ಎಂದರೂ ಮಾರುಕಟ್ಟೆಯನ್ನೇ ಶೇ.80 ಜನರು ಅವಲಂಬಿಸಿದ್ದಾರೆ.

Edited byದಿಲೀಪ್ ಡಿ. ಆರ್. | Vijaya Karnataka 19 Sep 2022, 6:43 pm

ಹೈಲೈಟ್ಸ್‌:

  • ಕ್ಯಾಬೇಜ್‌ ಅತಿ ಕಡಿಮೆ ದರದ ತರಕಾರಿ
  • ಬೀನ್ಸ್‌ ದುಬಾರಿ ದರದ ತರಕಾರಿ
  • ನವರಾತ್ರಿಗೆ ಮಾಂಸಾಹಾರ ತ್ಯಜಿಸುವ ಹಿನ್ನೆಲೆಯಲ್ಲಿ ದರ ಇಳಿಕೆ ನಿರೀಕ್ಷೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web vegetable prices
ಕರಾವಳಿಯಲ್ಲಿ ತರಕಾರಿಗಿಂತ ಬಂಗುಡೆ, ಬೂತಾಯಿ ಮೀನೇ ಅಗ್ಗ! ನವರಾತ್ರಿಗೆ ತರಕಾರಿ ದರ ಮತ್ತಷ್ಟು ಏರಿಕೆ?
ಎಸ್‌. ಜಿ. ಕುರ್ಯ
ಉಡುಪಿ:
ನಾಗರ ಪಂಚಮಿ, ಅಷ್ಟಮಿ, ಚೌತಿಗೊಂದಿಷ್ಟು ಅಗ್ಗವಾಗಿದ್ದ ತರಕಾರಿ ದರ ನವರಾತ್ರಿ ಸಮೀಪಿಸುತ್ತಿದ್ದಂತೆ ಮತ್ತೆ ಏರುತ್ತಿದ್ದು, ಬಂಗುಡೆ, ಬೂತಾಯಿ ಮೀನೇ ಅಗ್ಗವಾಗಿದೆ.
ಕ್ಯಾಬೇಜ್‌ (ಕೆಜಿ) 24 ರಿಂದ 30 ರೂ. ಅತಿ ಕಡಿಮೆ ದರದ ತರಕಾರಿಯಾಗಿದ್ದರೆ ರಿಂಗ್‌ ಬೀನ್ಸ್‌ ದರ ಶತಕ ಬಾರಿಸಿ ಈಗ 120 ರೂ. ದಾಟಿದೆ. ನವರಾತ್ರಿಗೆ ತರಕಾರಿ ಮತ್ತಷ್ಟು ತುಟ್ಟಿಯಾಗುವ ಆತಂಕವಿದೆ. ಭಕ್ತಿಯ ನೆಲೆಯಲ್ಲಿ ಮೀನು, ಮಾಂಸಾಹಾರ ತ್ಯಜಿಸುವ ಹಿನ್ನೆಲೆಯಲ್ಲಿ ಕೋಳಿ, ಮೀನಿನ ದರ ಇಳಿಕೆಯಾಗುವ ನಿರೀಕ್ಷೆಯಿದೆ.

ತರಕಾರಿ ದರದಲ್ಲಿ ಕೊಂಚ ಇಳಿಕೆ; ಮೀನು, ಮಾಂಸ ಬಲು ದುಬಾರಿ: ಇಲ್ಲಿದೆ ದರಪಟ್ಟಿ!
ಕೆ. ಜಿ.ಗೆ 180 ರಿಂದ 220 ರೂ. ಕೊಟ್ಟರೂ ಕೊತ್ತಂಬರಿ ಸೊಪ್ಪು ಒಳ್ಳೇದು ಸಿಗುತ್ತಿಲ್ಲ. ಉಳಿದ ಸೊಪ್ಪುಗಳೂ ತುಟ್ಟಿಯಾಗಿವೆ, ಸ್ವಚ್ಛವಿಲ್ಲ. ಮಳೆಗಾಲದ ಹಿನ್ನೆಲೆಯಲ್ಲಿ ಊರ ತರಕಾರಿಯಂತೂ ವಿರಳವಾಗಿದ್ದು, ಶೇ. 5 ರಿಂದ 10ರಷ್ಟೂ ಕೂಡ ಮಾರುಕಟ್ಟೆಗೆ ಪೂರೈಕೆಯಾಗುತ್ತಿಲ್ಲ.

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿದ್ದ ಭಾರೀ ಮಳೆ, ನೆರೆ, ರೋಗದಿಂದಾಗಿ ತರಕಾರಿ ತುಟ್ಟಿಯಾಗಿದ್ದು, ಮಳೆ ಮುಗಿದು ಬೆಳೆಯುವ ತರಕಾರಿ ಮಾರುಕಟ್ಟೆಗೆ ಪೂರೈಕೆಯಾಗಲು ಏನಿಲ್ಲವೆಂದರೂ 2 ರಿಂದ 3 ತಿಂಗಳೇ ಬೇಕು. ತೋಟಗಾರಿಕಾ ಇಲಾಖೆಯಿಂದ ಅಂಗಳ, ತಾರಸಿ ತರಕಾರಿ ಬೆಳೆಯಲು ಪ್ರೋತ್ಸಾಹ ನೀಡುತ್ತಿದ್ದರೂ ಆಸಕ್ತರು ವಿರಳ. ಆರೋಗ್ಯ, ತಾಜಾತನ, ವಿಷ ಮುಕ್ತ ಆಹಾರದ ನಿಟ್ಟಿನಲ್ಲಿ ತರಕಾರಿ ಬೆಳೆಯಿರಿ ಎಂದರೂ ಮಾರುಕಟ್ಟೆಯನ್ನೇ ಶೇ.80 ಜನರು ಅವಲಂಬಿಸಿದ್ದಾರೆ.

ಕಾರವಾರ: ವಾರಾಂತ್ಯ ಕರ್ಫ್ಯೂ ತೆರವಾದರೂ ಮಾರುಕಟ್ಟೆ ಖಾಲಿ, ತರಕಾರಿ, ಮೀನು ಮಾರ್ಕೆಟ್‌ ವ್ಯಾಪಾರ ಡಲ್‌
ತರಕಾರಿ, ಸೊಪ್ಪು, ಹಣ್ಣು ಹಂಪಲು

ಕ್ಯಾರೆಟ್‌: 100 ರೂ. ಬಟಾಣಿ: 150 ರೂ. ಬೀಟ್‌ರೂಟ್‌: 50 ರಿಂದ 60 ರೂ. ಮೂಲಂಗಿ: 35 ರಿಂದ 40 ರೂ. ಬದನೆ: 60 ರಿಂದ 70 ರೂ. ಕ್ಯಾಪ್ಸಿಕಮ್‌: 60 ರಿಂದ 70 ರೂ. ನವಿಲು ಕೋಸು: 40 ರೂ. ಬೆಂಡೆ: 60 ರಿಂದ 70 ರೂ. ಹೀರೆ: 60 ರಿಂದ 80 ರೂ. ಪಡವಲ ಕಾಯಿ: 55 ರಿಂದ 60 ರೂ. ಟೊಮೆಟೊ: 40 ರಿಂದ 45 ರೂ. ಬಟಾಟೆ: 35 ರೂ. ಬೆಳ್ಳುಳ್ಳಿ: 50 ರಿಂದ 70 ರೂ. ಈರುಳ್ಳಿ: 22 ರಿಂದ 28 ರೂ. ಸೌತೆ: 45 ರಿಂದ 50 ರೂ. ಗೆಣಸು: 30 ರಿಂದ 45 ರೂ. ಸುವರ್ಣ: 35 ರಿಂದ 50 ರೂ. ಸೇಬು: 90 ರಿಂದ 120 ರೂ. ಕೊತ್ತಂಬರಿ ಸೊಪ್ಪು: 180 ರಿಂದ 220 ರೂ.


ಮಾಂಸ, ಮೊಟ್ಟೆ

ಕೋಳಿ (ಕೆ.ಜಿ.): 150 ರಿಂದ 220 ರೂ.

ಮೊಟ್ಟೆ: 5.50 ರೂ.

ಬಂಗುಡೆ (15): 100 ರೂ.

ಬೂತಾಯಿ (30): 100 ರೂ.

ಸಿಗಡಿ (ಕೆ. ಜಿ.): 400 ರಿಂದ 500 ರೂ.

ಅಂಜಾಲ್‌ (ಕೆ.ಜಿ.): 600 ರೂ.

ಪಾಂಪ್ಲೆಟ್‌ (ಕೆ.ಜಿ.): 800 ರಿಂದ 1,000 ರೂ.

ಪೂರೈಕೆಯಾಗುವ ತರಕಾರಿಯಲ್ಲಿ ಶೇ. 30 ರಿಂದ 40 ರಷ್ಟು ಹಾಳಾಗುತ್ತಿದ್ದರೆ, ಸೊಪ್ಪುಗಳು ಸ್ವಚ್ಛವಿಲ್ಲ. ದರ ಗಗನಮುಖಿಯಾಗಿದ್ದರಿಂದ ಬೇಡಿಕೆ ಒಂದಿಷ್ಟು ಕಡಿಮೆಯಾಗಿದೆ. ನವರಾತ್ರಿಗೆ ಮತ್ತಷ್ಟು ದರ ಏರಿಕೆ ನಿರೀಕ್ಷೆಯಿದೆ.
ರಮೇಶ್‌, ಇಂದ್ರಾಣಿ ಫ್ರೂಟ್ಸ್‌ ಆ್ಯಂಡ್‌ ವೆಜಿಟೇಬಲ್ಸ್‌, ಇಂದ್ರಾಳಿ, ಉಡುಪಿ

'ನವ ರಾತ್ರಿಗೆ ಕೋಳಿ ದರ ಇಳಿಕೆ, ಮೀನಿನ ದರ ಮತ್ತಷ್ಟು ಅಗ್ಗವಾಗಬಹುದು. ವಿಪರೀತ ಮಳೆ, ನೆರೆಯಿಂದಾಗಿ ಕೋಳಿ ಆಹಾರದ ದರ ಕೆ. ಜಿ.ಗಿದ್ದ 42 ರೂ. 52ಕ್ಕೇರಿದೆ. ಹೀಗಾಗಿ ಕೋಳಿ, ಮಾಂಸದ ದರ ಗರಿಷ್ಠ ಮಟ್ಟದಲ್ಲಿದೆ' ಎಂದು ಇಂದ್ರಾಳಿ ಚಿಕನ್‌ ಸೆಂಟರ್‌ ಮಾಲೀಕ ಉಮೇಶ್‌ ಹೇಳಿದ್ದಾರೆ.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ