ಆ್ಯಪ್ನಗರ

ವಿಜಯ ಬ್ಯಾಂಕ್‌ ವಿಲೀನ ವಿರೋಧಿಸಿ ಪ್ರತಿಭಟನೆ

ಅವಿಭಜಿತ ದಕ್ಷಿಣ ಕನ್ನಡದ ರೈತರಿಂದ ಪ್ರಾರಂಭವಾದ ವಿಜಯಾ ಬ್ಯಾಂಕ್‌ ಈ ಭಾಗದ ಹೆಮ್ಮೆಯ ಪ್ರತೀಕವಾಗಿದೆ. ಆದರೆ ಈಗ ಅದನ್ನು ವಿಲೀನ ಮಾಡಿದರೆ ನಮ್ಮ ಭಾವನೆಗಳಿಗೆ ದಕ್ಕೆಯಾಗುತ್ತದೆ, ಲಾಭದಲ್ಲಿರುವ ವಿಜಯಾ ಬ್ಯಾಂಕ್‌ನ್ನು ನಷ್ಟದಲ್ಲಿರುವ ಇತರ ಬ್ಯಾಂಕ್‌ಗಳೊಡನೆ ವಿಲೀನಗೊಳಿಸುವುದು ಬ್ಯಾಂಕ್‌ನ ಹಾಗೂ ಗ್ರಾಹಕರ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ. ಆದ್ದರರಿಂದ ವಿಲೀನ ಪ್ರಕ್ರಿಯೆಯನ್ನು ತಡೆ ಹಿಡಿಯಬೇಕು ಎಂದು ಬೈಂದೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮದನ್‌ ಕುಮಾರ್‌ ಹೇಳಿದರು.

Vijaya Karnataka 28 Feb 2019, 5:00 am
ಬೈಂದೂರು: ಅವಿಭಜಿತ ದಕ್ಷಿಣ ಕನ್ನಡದ ರೈತರಿಂದ ಪ್ರಾರಂಭವಾದ ವಿಜಯಾ ಬ್ಯಾಂಕ್‌ ಈ ಭಾಗದ ಹೆಮ್ಮೆಯ ಪ್ರತೀಕವಾಗಿದೆ. ಆದರೆ ಈಗ ಅದನ್ನು ವಿಲೀನ ಮಾಡಿದರೆ ನಮ್ಮ ಭಾವನೆಗಳಿಗೆ ದಕ್ಕೆಯಾಗುತ್ತದೆ, ಲಾಭದಲ್ಲಿರುವ ವಿಜಯಾ ಬ್ಯಾಂಕ್‌ನ್ನು ನಷ್ಟದಲ್ಲಿರುವ ಇತರ ಬ್ಯಾಂಕ್‌ಗಳೊಡನೆ ವಿಲೀನಗೊಳಿಸುವುದು ಬ್ಯಾಂಕ್‌ನ ಹಾಗೂ ಗ್ರಾಹಕರ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ. ಆದ್ದರರಿಂದ ವಿಲೀನ ಪ್ರಕ್ರಿಯೆಯನ್ನು ತಡೆ ಹಿಡಿಯಬೇಕು ಎಂದು ಬೈಂದೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮದನ್‌ ಕುಮಾರ್‌ ಹೇಳಿದರು.
Vijaya Karnataka Web vijaya bank


ವಿಜಯ ಬ್ಯಾಂಕ್‌ನ್ನು ಬಿ.ಓ.ಬಿ ಹಾಗೂ ದೇನಾ ಬ್ಯಾಂಕ್‌ನೊಡನೆ ವಿಲೀನ ಪ್ರಕ್ರಿಯೆಯನ್ನು ವಿರೋಧಿಸಿ ಬೈಂದೂರು ಬ್ಲಾಕ್‌ ಕಾಂಗ್ರೇಸ್‌ ಮಾರ್ಗದರ್ಶನದಲ್ಲಿ ನಾಡ ಗ್ರಾಮೀಣ ಕಾಂಗ್ರೆಸ್‌ ಸಮಿತಿ ಮತ್ತು ಯುವ ಕಾಂಗ್ರೆಸ್‌ ವತಿಯಿಂದ ವಿಜಯಾ ಬ್ಯಾಂಕ್‌ ನಾಡ ಗುಡ್ಡೆಯಂಗಡಿ ಎದುರು ಬುಧವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಬೈಂದೂರು ವಿಧಾನಸಭæ ಕ್ಷæ್ಷೕತ್ರದ ಯುವ ಕಾಂಗ್ರೆಸ್‌ ಅಧ್ಯಕ್ಷ ಶೇಖರ್‌ ಪೂಜಾರಿ, ಪಕ್ಷ ದ ಮುಖಂಡರಾದ ವಾಸುದೇವ ಯಡಿಯಾಳ್‌, ಗ್ರಾಮ ಪಂಚಾಯಯಿತತಿ ಅಧ್ಯಕ್ಷೆ ಜೇನ್‌ ಮೇರಿ ಒಲಿವೇರಾ, ಮೋಹನ್‌ ಪೂಜಾರಿ, ಕೆನಡಿ ಪಿರೇರಾ, ರಾಮ ಪೂಜಾರಿ, ತಭ್ರೆಜ್‌ ನಾಗೂರು, ಸತೀಶ್‌ ಪಡುಕೋಣೆ,ದಿನೇಶ್‌ ನಾಯ್ಕ್‌,ವಿನೋದ ಪೂಜಾರಿ, ಹರೀಶ್‌ ಮರವಂತೆ ಮತ್ತಿತರರು ಕಾಂಗ್ರೆಸ್‌ ಕಾರ್ಯಕರ್ತರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ