ಉಡುಪಿ: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ವಿಭಿನ್ನ ವ್ಯಕ್ತಿತ್ವ ಹೊಂದಿದ್ದು ಯೋಗ, ಈಜು, ಚತುರ್ವೇದ, ಹಾವು ಹಿಡಿಯೋದರ ಸಹಿತ ಹಲವು ವಿದ್ಯೆ ಬಲ್ಲವರು. ಕೃಷಿ ಕುಟುಂಬದಿಂದ ಬಂದ ಶ್ರೀಗಳು ಸನ್ಯಾಸ ಸ್ವೀಕಾರದವರೆಗೂ ಆ ತುಂಬು ಸಂಪ್ರದಾಯಸ್ಥ ಮನೆಯ ಎಲ್ಲ ಕೆಲಸಗಳಲ್ಲಿ ತೊಡಗಿಸಿಕೊಂಡವರು. ಆ ಬಳಿಕವೂ ಸಂದರ್ಭ ಸಿಕ್ಕಾಗೆಲ್ಲ ಕೃಷಿ ಸಂಬಂಧಿ ಚಟುವಟಿಕೆಗಳಲ್ಲಿ ಯಾವುದೇ ಬಿಗುಮಾನಗಳಿಲ್ಲದೆ ತೊಡಗಿಸಿಕೊಂಡಿದ್ದು ಮಂಗಳವಾರ ಉಡುಪಿಯ ಮಠದಲ್ಲಿ ತೆಂಗಿನ ಸೋಗೆಯನ್ನು ಸ್ವತಃ ತುಂಬಾ ಅಚ್ಚುಕಟ್ಟಾಗಿ ಹೆಣೆದು ಗಮನ ಸೆಳೆದರು. ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ದಕ್ಷಿಣ-ಕನ್ನಡ ಉಡುಪಿ ಜಿಲ್ಲೆಗಳಲ್ಲಿ ಮನೆಯ ಕಾರ್ಯಕ್ರಮಕ್ಕೆ ಸಂಪ್ರಾದಾಯವಾಗಿ ಹಸಿರು ಹಾಗೂ ಹೆಣೆದ ಸೋಗೆಯನ್ನು ಬಳಸುತ್ತಾರೆ. ಕಾರ್ಯಕ್ರಮಕ್ಕೆ ಹೆಣೆದ ಸೋಗೆಗಳು ಹೊಸ ಲುಕ್ ನೀಡುತ್ತದೆ.
ದಕ್ಷಿಣ-ಕನ್ನಡ ಉಡುಪಿ ಜಿಲ್ಲೆಗಳಲ್ಲಿ ಮನೆಯ ಕಾರ್ಯಕ್ರಮಕ್ಕೆ ಸಂಪ್ರಾದಾಯವಾಗಿ ಹಸಿರು ಹಾಗೂ ಹೆಣೆದ ಸೋಗೆಯನ್ನು ಬಳಸುತ್ತಾರೆ. ಕಾರ್ಯಕ್ರಮಕ್ಕೆ ಹೆಣೆದ ಸೋಗೆಗಳು ಹೊಸ ಲುಕ್ ನೀಡುತ್ತದೆ.