ಆ್ಯಪ್ನಗರ

ಉಡುಪಿಯ ಪೇಜಾವರ ಮಠಕ್ಕೆ ಸ್ಥಳಾಂತರವಾದ ವಿಶ್ವೇಶ ತೀರ್ಥ ಶ್ರೀಪಾದರು: ಮಠದಲ್ಲೇ ಚಿಕಿತ್ಸೆ

ಪೇಜಾವರ ಶ್ರೀಗಳ ಆರೋಗ್ಯ ಕ್ಷೀಣಿಸುತ್ತಿದ್ದು ವಿವಿಧ‌ ಅಂಗಾಂಗಗಳ ಸುಸ್ಥಿತಿಗೆ ಯಂತ್ರ ಅಳವಡಿಸಲಾಗಿದೆ. ಆದರೆ, ಅವರ ಆರೋಗ್ಯ ಸುಧಾರಣೆ ಕಾಣದ ಹಿನ್ನೆಲೆ ಶ್ರೀಗಳ ಆಸೆಯಂತೆ ಅವರನ್ನು ಉಡುಪಿಯ ಪೇಜಾವರ ಮಠಕ್ಕೆ ಶಿಫ್ಟ್‌ ಮಾಡಲಾಗಿದೆ.

Vijaya Karnataka Web 29 Dec 2019, 7:38 am
ಉಡುಪಿ: ಪೇಜಾವರಶ್ರೀಗಳ ಆರೋಗ್ಯದಲ್ಲಿ‌ ಚೇತರಿಕೆ ಲಕ್ಷಣವಿಲ್ಲದ ಹಿನ್ನೆಲೆಯಲ್ಲಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಿಂದ ಶ್ರೀಗಳನ್ನು ಭಾನುವಾರ ಬೆಳಗ್ಗೆ 6.55ಕ್ಕೆ ಪೇಜಾವರ ಮಠಕ್ಕೆ ಸ್ಥಳಾಂತರ ಮಾಡಲಾಗಿದೆ. ಆಸ್ಪತ್ರೆಯಿಂದ ಉಡುಪಿಯ ಪೇಜಾವರ ಮಠಕ್ಕೆ ಆ್ಯಂಬುಲೆನ್ಸ್ ಮೂಲಕ ಶ್ರೀಗಳನ್ನು ಶಿಫ್ಟ್‌ ಮಾಡಲಾಗಿದೆ.
Vijaya Karnataka Web vishwesha-theertha-swamiji


ಶ್ರೀಗಳ ಆರೋಗ್ಯ ಕ್ಷೀಣಿಸಿದ್ದು, ಈ ಹಿನ್ನೆಲೆ ಮಠದ ಕೊಠಡಿಯೊಂದರಲ್ಲಿ ಆಸ್ಪತ್ರೆಯ ಐಸಿಯುನಂತಹ ವಾತಾವರಣದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು, ಆಸ್ಪತ್ರೆಯಿಂದ ಪೇಜಾವರ ಮಠದ ಮಾರ್ಗದುದ್ದಕ್ಕೂ ಬಿಗಿ ಭದ್ರತೆ ನಿಯೋಜಿಸಲಾಗಿದ್ದು, ಸಾರ್ವಜನಿಕರು ಅಲ್ಲಿ ಸುಳಿಯದಂತೆ ನೋಡಿಕೊಳ್ಳಲಾಗಿತ್ತು.

ವಿಶ್ವೇಶ ತೀರ್ಥ ಶ್ರೀ ಪಾದರ ಆರೋಗ್ಯ ಸ್ಥಿತಿ ಗಂಭೀರವಾಗಿರುವುದರಿಂದ ಮಠದಲ್ಲಿ ಆಸ್ಥಾನ ಪೂಜೆಯನ್ನು ಕಿರಿಯ ಶ್ರೀಗಳು ವಿಶ್ವಪ್ರಸನ್ನ ತೀರ್ಥರು ಭಾನುವಾರ ಬೆಳಗ್ಗೆ ಬೇಗನೆ ಆರಂಭಿಸಿದ್ದರು. ಆಸ್ಥಾನ ಪೂಜೆ ಮುಗಿದ ನಂತರವೇ ವಿಶ್ವೇಶ ತೀರ್ಥ ಶ್ರೀಪಾದರನ್ನು ಶಿಫ್ಟ್ ಮಾಡಲಾಗಿದೆ.

ಪೇಜಾವರ ಶ್ರೀಗಳ ಮಿದುಳು ನಿಷ್ಕ್ರಿಯ: ಜೀವರಕ್ಷಕ ಸಾಧನಗಳೇ ಆಧಾರ

ಪೇಜಾವರ ಮಠದ ಶ್ರೀಗಳನ್ನು ಮಠಕ್ಕೆ ಕರೆತಂದ ಆ್ಯಂಬುಲೆನ್ಸ್


ಇನ್ನು, ಮಠದ ಸುತ್ತಮುತ್ತ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಮಠದೊಳಗೆ ಸದ್ಯಕ್ಕೆ ಯಾವ ಭಕ್ತರನ್ನೂ ಬಿಡುತ್ತಿಲ್ಲ. ಉಡುಪಿಯ ಶ್ರೀ ಕೃಷ್ಣ ಮಠದ ಸುತ್ತಮುತ್ತ 700 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಉಡುಪಿ ಎಸ್‌ಪಿ ನಿಶಾ ಜೇಮ್ಸ್ ಮಾಹಿತಿ ನೀಡಿದ್ದಾರೆ.

ಪೇಜಾವರ ಶ್ರೀಗಳ‌ ಆರೋಗ್ಯ ಕ್ಷಣಕ್ಷಣಕ್ಕೂ ಕ್ಷೀಣ : ಶೀಘ್ರದಲ್ಲೇ ಮಠಕ್ಕೆ ಸ್ಥಳಾಂತರ

ಆದರೆ, ಶ್ರೀಗಳ ದರ್ಶನ ಪಡೆಯ ಬಯಸುವ ಭಕ್ತರು ಬೆಳಗ್ಗೆ 9 ಗಂಟೆಯ ನಂತರ ಪೇಜಾವರ ಮಠಕ್ಕೆ ಬಂದು ದರ್ಶನ‌ ಪಡೆಯಬಹುದು ಎಂದು ಮಠದ ವಕ್ತಾರರು ತಿಳಿಸಿದ್ದಾರೆ. ಅವರ ಅಂತಿಮ ಆಸೆಯಂತೆ ಮಠಕ್ಕೆ ಶಿಫ್ಟ್ ಮಾಡಲಾಗಿದ್ದು, ವೆಂಟಿಲೇಟರ್ ಸಹಿತ ಅವರನ್ನು ಕರೆತರಲಾಗಿದೆ ಎಂದು ಮಠದ ವಕ್ತಾರರು ತಿಳಿಸಿದ್ದಾರೆ.

ಪೇಜಾವರ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡಿಲ್ಲ: ಶೋಭಾ ಕರಂದ್ಲಾಜೆ ಹೇಳಿಕೆ

ಅಗತ್ಯ ಜೀವರಕ್ಷಕ ವ್ಯವಸ್ಥೆಯೊಂದಿಗೆ ಭಾನುವಾರದಿಂದ ಶ್ರೀಪಾದರು ಮಠದಲ್ಲಿರಲಿದ್ದು ಜೀವ ರಕ್ಷಕ ಸಾಧನಗಳ ಜತೆ ವೈದ್ಯರೂ ಇರಲಿದ್ದಾರೆ. ಸಾರ್ವಜನಿಕರು ಹಾಗೂ ಭಕ್ತರು ಮಠಕ್ಕೆ ಬಾರದೆ ಸಹಕರಿಸುವಂತೆ ಜೀವ ರಕ್ಷಕ ಸಾಧನಗಳ ಜತೆ ವೈದ್ಯರೂ ಇರಲಿದ್ದಾರೆ ಎಂದು ಮಠದ ಕಿರಿಯ ಯತಿ ವಿಶ್ವಪ್ರಸನ್ನ ತೀರ್ಥರು ಶನಿವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ್ದರು.

ಉಸಿರಾಟ ಸಮಸ್ಯೆ ಹಾಗೂ ನ್ಯುಮೋನಿಯಾ ಕಾರಣದಿಂದಾಗಿ ಡಿಸೆಂಬರ್ 20ರಂದು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದರು ದಾಖಲಾಗಿದ್ದರು. ಆಸ್ಪತ್ರೆಗೆ ಹಲವು ಗಣ್ಯರು, ಮಠಾಧೀಶರು ಭೇಟಿ ನೀಡಿ ಅವರ ಆರೋಗ್ಯವನ್ನು ವಿಚಾರಿಸಿದ್ದರೆ, ಪ್ರಧಾನಿ ಮೋದಿ ಸೇರಿ ಹಲವರು ದೂರವಾಣಿ ಮೂಲಕ ಆರೋಗ್ಯ ಸ್ಥಿತಿ ವಿಚಾರಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ