ಆ್ಯಪ್ನಗರ

*ಶಿಕ್ಷಕನ ಸಮಾಜ ಸೇವೆಗೆ ಮೆಚ್ಚಿ ವಿವಿಎಸ್‌ ಟ್ವೀಟ್‌

ಉಡುಪಿ ಜಿಲ್ಲೆಯ ಬಾರಾಳಿ ಸ.ಹಿ. ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಾಜಾರಾಮ್‌ ಶಾಲಾ ಬಸ್‌ನ ಚಾಲಕನಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮಹತ್ತರ ಕಾರ್ಯಕ್ಕೆ ಮಾಜಿ ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌ ಟ್ವೀಟ್‌ ಮಾಡಿದ್ದು, ಶಿಕ್ಷಕರ ಈ ಕೆಲಸವನ್ನು ಶ್ಲಾಘಿಸಿದ್ದಾರೆ.

Vijaya Karnataka 26 Jul 2018, 3:58 pm
ಉಡುಪಿ: ಉಡುಪಿ ಜಿಲ್ಲೆಯ ಬಾರಾಳಿ ಸ.ಹಿ. ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಾಜಾರಾಮ್‌ ಶಾಲಾ ಬಸ್‌ನ ಚಾಲಕನಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮಹತ್ತರ ಕಾರ್ಯಕ್ಕೆ ಮಾಜಿ ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌ ಟ್ವೀಟ್‌ ಮಾಡಿದ್ದು, ಶಿಕ್ಷಕರ ಈ ಕೆಲಸವನ್ನು ಶ್ಲಾಘಿಸಿದ್ದಾರೆ.
Vijaya Karnataka Web tweet


ಈ ಸರಕಾರಿ ಶಾಲಾ ಶಿಕ್ಷಕ ರಾಜಾರಾಮ್‌ ಬಗ್ಗೆ ವಿ.ಕ. ಸರಕಾರಿ ಸ್ಕೂಲ್‌ ಬಸ್‌ಗೆ ಪಿ.ಟಿ. ಶಿಕ್ಷಕರೇ ಸಾರಥಿ ಎನ್ನುವ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿದ್ದು, ಜು. 5 ರಂದು ರಾಜ್ಯ ಮಟ್ಟದಲ್ಲಿ ಪ್ರಕಟವಾಗಿತ್ತು.

ಶಿಕ್ಷಕ ರಾಜಾರಾಮ್‌ ಮಕ್ಕಳ ದಾಖಲಾತಿ ಹೆಚ್ಚಿಸುವ ಸಲುವಾಗಿ ಸರಕಾರಿ ಶಾಲಾ ಬಸ್‌ಗೆ ತಾನೇ ಚಾಲಕನಾಗಿ ಬೆಳಗ್ಗೆಯಿಂದ ಸಂಜೆವರೆಗೆ ದುಡಿಯುವ ಎಲ್ಲಾ ಮಾಹಿತಿಯನ್ನು ವಿ.ಕ. ಎಳೆಎಳೆಯಾಗಿ ಮುದ್ರಿಸಿತ್ತು. ಈ ವರದಿ ರಾಜ್ಯದ ಎಲ್ಲಾ ಆವೃತ್ತಿಗಳಲ್ಲಿ ಪ್ರಕಟಗೊಂಡಿದ್ದು, ಪತ್ರಿಕೆ, ದೃಶ್ಯ ಮಾಧ್ಯಮ ಸಹಿತ ತಮಿಳು ಪತ್ರಿಕೆಯೊಂದು ಶಿಕ್ಷಕರ ಬಗ್ಗೆ ವರದಿ ಪ್ರಕಟಿಸಿದ್ದವು.

ತೆರೆಯ ಮರೆಯಲ್ಲಿರುವ ನನ್ನನ್ನು ಗುರುತಿಸಿ ನನ್ನ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ವಿಶೇಷ ವರದಿ ಪ್ರಕಟಿಸುರುವುದು ವಿಜಯ ಕರ್ನಾಟಕ. ನಾನು ಈ ಮಟ್ಟಕ್ಕೆ ಹೆಸರು ಗಳಿಸಿ ಗಣ್ಯರಿಂದ ಪ್ರಶಂಸೆ ಸಿಕ್ಕಿರುವುದಕ್ಕೆ ಕಾರಣವೇ ವಿ.ಕ. ಒಳ್ಳೆಯ ಕೆಲಸಕ್ಕೆ ಮೆಚ್ಚುಗೆ ಸಿಗುತ್ತದೆ ಎನ್ನುವುದಕ್ಕೆ ನಾನೇ ಸಾಕ್ಷಿ. ವಿವಿಎಸ್‌ ಲಕ್ಷ್ಮಣ್‌ನಂತಹ ಮಹಾನ್‌ ಕ್ರಿಕೆಟಿಗ ನನ್ನನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿರುವುದು ಬಹಳ ಸಂತೋಷ ತಂದಿದೆ. ಇದಕ್ಕೂ ಮುನ್ನ ಮಧ್ಯಪ್ರದೇಶದ ಎಸ್ಪಿ ನವನೀತ್‌ ಅವರು ನನಗೆ ಫೋನ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿ.ಕ. ದ ಈ ಸಮಾಜಮುಖಿ ಕೆಲಸ ಮುಂದೆಯೂ ನಡೆಯಲಿ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ ಶಿಕ್ಷಕ ರಾಜಾರಾಮ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ