ಆ್ಯಪ್ನಗರ

ಇಂದಿನಿಂದ ಉಡುಪಿ ನಗರಕ್ಕೆ ನೀರು ಪೂರೈಕೆ ವ್ಯತ್ಯಯ: ಮೂರು ದಿನಕ್ಕೊಮ್ಮೆ ನೀರು ಪೂರೈಕೆ

ಉಡುಪಿ ನಗರಸಭಾ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜು ಮಾಡುವ ಬಜೆ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹದ ಮಟ್ಟ ತೀರಾ ಕುಸಿದಿರುವುದರಿಂದ ಮಾ.25ರಿಂದ ಪ್ರತೀ ಮೂರು ದಿನಕ್ಕೊಮ್ಮೆ ನೀರು ಹಂಚಿಕೆ ವ್ಯವಸ್ಥೆಯನ್ನು ಜಾರಿ ಮಾಡಲಾಗುತ್ತಿದೆ.

Vijaya Karnataka 25 Mar 2019, 5:00 am
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜು ಮಾಡುವ ಬಜೆ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹದ ಮಟ್ಟ ತೀರಾ ಕುಸಿದಿರುವುದರಿಂದ ಮಾ.25ರಿಂದ ಪ್ರತೀ ಮೂರು ದಿನಕ್ಕೊಮ್ಮೆ ನೀರು ಹಂಚಿಕೆ ವ್ಯವಸ್ಥೆಯನ್ನು ಜಾರಿ ಮಾಡಲಾಗುತ್ತಿದೆ.
Vijaya Karnataka Web water supply
ಇಂದಿನಿಂದ ಉಡುಪಿ ನಗರಕ್ಕೆ ನೀರು ಪೂರೈಕೆ ವ್ಯತ್ಯಯ: ಮೂರು ದಿನಕ್ಕೊಮ್ಮೆ ನೀರು ಪೂರೈಕೆ


ಉಡುಪಿ ನಗರಸಭಾ ವ್ಯಾಪ್ತಿಯನ್ನು 3 ವಿಭಾಗಗಳನ್ನಾಗಿ ಮಾಡಿ ಮಾ.25ರಿಂದ ಏ.30 ರ ವರೆಗೆ ನೀರು ಸರಬರಾಜು ಮಾಡಲಾಗುವುದು. ಮುಂದೆ ಮೇ ತಿಂಗಳಿನಲ್ಲಿ ನೀರಿನ ಲಭ್ಯತೆ ಅನುಗುಣವಾಗಿ ವಿತರಣಾ ವ್ಯವಸ್ಥೆಯನ್ನು ತಿಳಿಸಲಾಗುವುದು ಎಂದು ಪೌರಾಯುಕ್ತ ಆನಂದ ಕಲ್ಲೋಳಿಕರ್‌ ಅವರ ಪ್ರಕಟನೆ ತಿಳಿಸಿದೆ.

ಎಲ್ಲೆಲ್ಲಿ ಯಾವಾಗೆಲ್ಲಾ ನೀರು: ಮಾ.25, 28, 31, ಏ.3, 6, 9, 12,15, 18, 21, 24,27,30 ರಂದು ಮಣಿಪಾಲ ಸಿಟಿ, ಅನಂತನಗರ ಮೊದಲ ಹಾಗೂ ಎರಡನೇ ಹಂತ, ಹುಡ್ಕೋ ಕಾಲನಿ, ಇಂಡಸ್ಟ್ರಿಯಲ್‌ ಏರಿಯಾ, ಮಂಚಿ ಕುಮೇರಿ, ಮಂಚಿ ದುಗ್ಲಿ, ಮಂಜುಶ್ರೀ ನಗರ, ಮಂಚಿ ಕೋಡಿ, ದುರ್ಗಾ ನಗರ, ಅನಂತ ಕಲ್ಲಾಣ ನಗರ, ಈಶ್ವರ ನಗರ, ನೆಹರೂ ನಗರ, ಸರಳೇಬೆಟ್ಟು, ಕೊಂಡಂಗೆ, ನರಸಿಂಗೆ, ವಿವೇಕಾನಂದ ನಗರ, ತ್ರಿಶಂಕು ನಗರ, ಪವಿತ್ರ ನಗರ, ವಿಜಯನಗರ ಕೋಡಿ, ಶೇಷಾದ್ರಿ ನಗರ, ವಿದ್ಯಾರತ್ನ ನಗರ, ಶೀಂಬ್ರಾ, ವಿ.ಪಿ. ನಗರ, ಇಂದ್ರಾಳಿ, ಗುಳ್ಮೆ, ರೈಲ್ವೆ ಗೋಡಾನ್‌ ರೋಡ್‌, ಮಂಚಿ ಶಾಲೆ ರಸ್ತೆ, ಹಯಗ್ರೀವ ನಗರ, ಲಕ್ಷ್ಮೀಂದ್ರ ನಗರ, ಸಗ್ರಿ, ಪೆರಂಪಳ್ಳಿ, ಅಂಬಡೆಬೆಟ್ಟು, ವಿ. ಎಮ್‌. ನಗರ, ದೊಡ್ಡಣಗುಡ್ಡೆ ರೈಲ್ವೆ ಸೇತುವೆ ವರೆಗೆ, ಪೆರಂಫಳ್ಳಿ ರೈಲ್ವೆ ಸೇತುವೆ ವರೆಗೆ, ಆದಿಪರಾಶಕ್ತಿ ದೇವಸ್ಥಾನ ರಸ್ತೆ, ರುದ್ರಪ್ರಿಯ ನಗರ, ಪರ್ತಕರ್ತರ ಕಾಲೊನಿ, ಸಣ್ಣಕ್ಕಿಬೆಟ್ಟು, ಹೆರ್ಗ, ಗ್ಯಾಟ್ಸ್‌ನ್‌ ಕಲೊನಿ, ಶೆಟ್ಟಿಬೆಟ್ಟು, ದೇವಿನಗರ, ಮಂಜುನಾಥ ನಗರ, ಪರೀಕ ಅರಮನೆ ರಸ್ತೆ, ಪರ್ಕಳ ಹೈಸ್ಕೂಲ್‌ವರೆಗೆ ನೀರು ಸರಬರಾಜು ಮಾಡಲಾಗುತ್ತದೆ.

ಮಾ.26, 29, ಏ.1,4, 7,10,13,16, 19,22,25,28 ರಂದು ಇಂದಿರಾ ನಗರ, ಕುಕ್ಕಿಕಟ್ಟೆ, ಕಸ್ತೂರ್ಬಾ ನಗರ, ಬೈಲೂರು ಮಹಿಷಮರ್ದಿನಿ ನಗರ, ವಾಸುಕಿ ನಗರ, ಬಲಾಯಿಪಾದೆ, ಮಂಚಿ ಮೂಲಸ್ಥಾನ ರಸ್ತೆ, ಚಿಟ್ಪಾಡಿ, ಡಿ.ಸಿ.ಎಂ ಕಾಲೋನಿ, ಪಣಿಯಾಡಿ, ಶಾರದಾ ಮಂಟಪ, ಎಂ.ಜಿ.ಎಂ, ಒಕುಡೆ ಓಣಿ, ಕುಂಜಿಬೆಟ್ಟು, ಕಟ್ಟೆ ಆಚಾರ್ಯ ಮಾರ್ಗ, ಕನ್ನರ್‌ಪಾಡಿ, ಸೆಟ್ಟಿಗಾರ್‌ ಕಾಲೋನಿ, ಕಿನ್ನಿಮುಲ್ಕಿ, ವೇಗಸ್‌ ಲೇಔಟ್‌, ಬಿ.ಬಿ ನಗರ, ಮಿಷನ್‌ ಕಂಪೌಡ್‌, ಬೈಲೂರು ಕೃಷ್ಣ ಭಟ್‌ ಮನೆ ರಸ್ತೆ, ಪೊಲೀಸ್‌ ಗ್ರೌಂಡ್‌, ಶಾಂತಿ ನಗರ, ಕೊಳಂಬೆ, ಬೀಡಿನಗುಡ್ಡೆ, ವೆಂಕಟರಮಣ ದೇವಸ್ಥಾನ ವಠಾರ, ಭೂತದ ಒಣಿ, ರಥ ಬೀದಿ, ತೆಂಕಪೇಟೆ, ಒಳಕಾಡು, ಪಿಪಿಸಿ, ಸ್ಟೇಟ್‌ ಬ್ಯಾಂಕ್‌ ಓಣಿ, ತಾಲೂಕು ಕಛೇರಿ ಬಳಿ, ಕೆ.ಎಂ ಮಾರ್ಗ, ಬನ್ನಂಜೆ, ಮಠದಬೆಟ್ಟು, ಕಲ್ಸಂಕ, ಬಡುಗುಪೇಟೆ, ಸಿಟಿ ಬಸ್ಸ್‌ ಸ್ಟ್ಯಾಂಡ್‌, ಕಾಡಬೆಟ್ಟು, ಶೀರಬೀಡು, ಗರಡಿ ರಸ್ತೆ ಬನ್ನಂಜೆ, ಎಸ್‌ ಸಿ ಕಾಲೋನಿ, ಅಜ್ಜರಕಾಡು, P[ಆ ಕ್ವಾಟ್ರಸ್‌, ಡಿ.ಸಿ ಮನೆ ವಠಾರ, ಸರ್ವಿಸ್‌ ಬಸ್ಸು ಸ್ಟ್ಯಾಂಡ್‌, ರಾಜಾಂಗಣ, ವಾದಿರಾಜ ರೋಡ್‌, ಎನ್‌ ಹೆಚ್‌ 66 ಕರವಾಳಿ ಬೈಪಾಸ್‌ ನಿಂದ ಅಂಬಾಲಪಾಡಿ ವರೆಗೆ, ಕೊಡಂಕೂರು, ನ್ಯೂ ಕೊಡಂಕುರು, ಸಾಯಿಬಾಬ ನಗರ, ಮೂಡಬೆಟ್ಟು, ಆದಿ ಉಡುಪಿ, ಮುಖ್ಯಪ್ರಾಣ ನಗರ, ನಾಗೇಶ್‌ ನಗರಕ್ಕೆ ನೀರು ಪೂರೈಸಲಾಗುವುದು.

ಮಾ.27,30, ಏ. 2,5,8,11,14,17,20, 23,26,29 ರಂದು ಕಲ್ಮಾಡಿ, ಬಂಕೇರ ಕಟ್ಟ, ಪಡು ಕೆರೆ, ಶಾಂತಿ ನಗರ, ಕಲ್ಮಾಡಿ ಚರ್ಚ್‌ ಹಿಂಬದಿ, ದೊಡ್ಡಣ ಗುಡ್ಡೆ, ಕರಂಬಳ್ಳಿ, ಜನತಾ ಕಾಲೋನಿ, ನೇಕಾರರ ಕಾಲೋನಿ, ವಿ ಎಂ ನಗರ ರೈಲ್ವೆ ಸೇತುವೆ ವರಗೆ, ಪೋಲಿಸ್‌ ಕ್ವಾಟ್ರಸ್‌, ಚಕ್ರತೀರ್ಥ, ಪಾಡಿಗಾರು ಮಠ, ಗುಂಡಿಬೈಲು ಶಾಲಾ ವಠಾರ, ಕಲ್ಸಂಕ ಗುಂಡಿಬೈಲು ರೋಡ್‌, ಅಡ್ಕದ ಕಟ್ಟೆ, ನಿಟ್ಟೂರು, ವಿಷ್ಣೂಮೂರ್ತಿ ನಗರ, ಕಡಿಯಾಳಿ, ಕೆ.ಇ.ಬಿ ಕ್ವಾಟ್ರಸ್‌, ಕಾತ್ಯಾಯನಿ ನಗರ, ಎಂ.ಜಿ.ಎಂ ಕ್ವಾಟ್ರಸ್‌, ಸಗ್ರಿ ರೈಲ್ವೆ ಸೇತುವೆ ವರೆಗೆ, ಸುಬ್ರಹ್ಣಣ್ಯ ನಗರ, ಕುದ್ಮಲ್‌ ರಂಗರಾವ್‌ ನಗರ, ಲಕ್ಷ್ಮೀನಗರ, ಲಕ್ಷ್ಮೀ ಕಾಫಿ ಬಳಿ, ಲಕ್ಷ್ಮೀನಗರ ಗರ್ಡೆ, ಪಾಳೆ ಕಟ್ಟೆ, ಗೋಪಾಲಪುರ, ನಯಂಪಳ್ಳಿ, ಸಂತೆಕಟ್ಟೆ, ಅಂಬಾಗಿಲು, ಕಕ್ಕುಂಜೆ, ಪ್ರಭಾಕರ್‌ ಲೇಔಟ್‌, ಸಂತೋಷ್‌ ನಗರ, ಕುದುರೆ ಕಲ್ಸಂಕದ ವರೆಗೆ, ನಿಟ್ಟೂರು ಶಾಲೆ ಬಳಿ, ರಾಜೀವ್‌ ನಗರ ಹನುಮಂತ ನಗರ, ಪಾಳೆಕಟ್ಟೆ, ಚೆನ್ನಂಗಡಿ, ಕಾನಂಗಿ, ಹೆಬ್ಬಾರ್‌ ಮಾರ್ಗ, ಕೊಡವೂರು ಪೇಟೆ, ಕೊಡವೂರು ಮೂಡಬೆಟ್ಟು ರೋಡ್‌, ಬಾಪುತೋಟ, ಶಶಿ ತೋಟ, ಮಲ್ಪೆ ಸೆಂಟ್ರಲ್‌, ಕೊಳ, ನೇರ್ಗಿ, ವಡಭಾಂಡೇಶ್ವರ, ಮಲ್ಪೆ ಬೀಚ್‌ ಕಡೆಗೆ ನೀರು ಹರಿಸಲಾಗುತ್ತದೆ ಎಂದು ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ