ಪಡುಬಿದ್ರಿ: ಪೌರಾಣಿಕ ಹಿನ್ನೆಲೆಯಿಂದ ಯಕ್ಷ ಗಾನವು ಇಂದು ರಾಷ್ಟ್ರಮಟ್ಟದ ಮನ್ನಣೆ ಸಿಗುತ್ತಿರುವುದು ಶ್ಲಾಘನೀಯ. ಯಕ್ಷ ಧ್ರುವ ಫೌಂಡೇಶನ್ ಮಾಡುತ್ತಿರುವ ಉತ್ತಮ ಕಾರ್ಯದಿಂದ ಯಕ್ಷ ಗಾನಕ್ಕೆ ಹೊಸ ಸ್ವರೂಪ ದೊರಕುತ್ತಿದೆ. ಪಡುಬಿದ್ರಿಯಲ್ಲಿ ಇಂದು ಆರಂಭಗೊಂಡ ಯಕ್ಷ ಧ್ರುವ ಫೌಂಡೇಶನ್ ಘಟಕವು ಅದರ ಎಲ್ಲ 26 ಶಾಖೆಗಳಲ್ಲಿ ಮುಂಚೂಣಿಯಲ್ಲಿ ಕಾಣುವಂತಾಗಲಿ ಎಂದು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.
ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ವಠಾರದಲ್ಲಿ ಶನಿವಾರ ಯಕ್ಷ ಧ್ರುವ ಪಟ್ಲ ಫೌಂಡೇಶನ್ನ ಪಡುಬಿದ್ರಿ ಘಟಕ ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರು ಎಂಆರ್ಜಿ ಗ್ರೂಫ್ಸ್ನ ಕೆ. ಪ್ರಕಾಶ್ ಶೆಟ್ಟಿ ಅಧ್ಯಕ್ಷ ತೆ ವಹಿಸಿ ಶುಭ ಹಾರೈಸಿದರು. ಉಡುಪಿ ಸಾಯಿರಾಧಾ ಗ್ರೂಫ್ಸ್ನ ಮನೋಹರ ಶೆಟ್ಟಿ ಅವರು ಸಾಯಿರಾಧಾ ಫೌಂಡೇಶನ್ ವತಿಯಿಂದ ಯಕ್ಷ ಧ್ರುವ ಫೌಂಡೇಶನ್ ಯಕ್ಷ ಗಾನ ಕಲಾವಿದರಿಗಾಗಿ ನಿರ್ಮಿಸಿಕೊಡಲಿರುವ ಮನೆಗಳ ಪೈಕಿ ಒಂದು ಮನೆಯನ್ನು 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿಕೊಡುವುದಾಗಿ ಘೋಷಿಸಿದರು.
ಉದ್ಯಮಿ ಹಾಗೂ ಸಮಾಜ ಸೇವಕ ಸುರೇಶ್ ಶೆಟ್ಟಿ ಗುರ್ಮೆ, ಪಿಂಪ್ರಿ ಚಿಂಚ್ವಾಡ ಬಂಟರ ಸಂಘದ ಪೂರ್ವಾಧ್ಯಕ್ಷ ಎರ್ಮಾಳು ಸೀತಾರಾಮ ಶೆಟ್ಟಿ ಪುಚ್ಚೊಟ್ಟುಬೀಡು, ಅವರಾಲು ಕಂಕಣಗುತ್ತು ಯಜಮಾನರಾದ ಕೃಷ್ಣ ಶೆಟ್ಟಿ, ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ಅನುವಂಶಿಕ ಮೊಕ್ತೇಸರರಾದ ರತ್ನಾಕರರಾಜ್ ಅರಸು ಕಿನ್ಯಕ್ಕ ಬಲ್ಲಾಳರು, ಪಡುಬಿದ್ರಿ ಶ್ರೀ ವನದುರ್ಗಾ ಟ್ರಸ್ಟ್ ಅಧ್ಯಕ್ಷ ಗುರಿಕಾರ ಶ್ರೀಪತಿ ಕೊರ್ನಾಯ, ಪಡುಬಿದ್ರಿ ವಿಹಿಂಪದ ಅಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ಶ್ರೀ ವೆಂಕಟರಮಣ ದೇವಳದ ಆಡಳಿತ ಮೊಕ್ತೇಸರ ಪ್ರಶಾಂತ್ ಶೆಣೈ, ಕೋಶಾಧಿಕಾರಿ ಸುದೇಶ್ ಕುಮಾರ್ ರೈ, ಪಡುಬಿದ್ರಿ ಘಟಕದ ಗೌರವಾಧ್ಯಕ್ಷ ಪ್ರೇಮನಾಥ ಶೆಟ್ಟಿ, ಅಧ್ಯಕ್ಷ ಜಯ ಎಸ್. ಶೆಟ್ಟಿ ಪದ್ರ, ಸಂಚಾಲಕ ನವೀನ್ ಎನ್. ಶೆಟ್ಟಿ, ಕಾರ್ಯದರ್ಶಿ ಪ್ರಕಾಶ್ ರಾವ್ ಪಿ.ಎನ್., ಕೋಶಾಧಿಕಾರಿ ಶೈಲೇಂದ್ರ ಉಪಾಧ್ಯಾಯ, ಕೊಲಕಾಡಿ ವೇ.ಮೂ. ವಾದಿರಾಜ ಉಪಾಧ್ಯಾಯ, ಎಂ.ಬಿ. ಕರ್ಕೇರ, ಫೌಂಡೇಶನ್ನ ಪಡುಬಿದ್ರಿ ಘಟಕದ ಮಹಾಪೋಷಕ ದುರ್ಗಾಪ್ರಕಾಶ್ ರಾವ್, ಮಾತಾ ಡೆವಲಪರ್ಸ್ನ ಸಂತೋಷ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ಮಂಗಳೂರು ಯಕ್ಷ ಧ್ರುವ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ಫೌಂಡೇಶನ್ ಉದ್ದೇಶ ಸಫಲತೆಗೆ ಸಂಘಟನೆ ಅತ್ಯವಶ್ಯಕ. ಈ ಹಿನ್ನೆಲೆಯಲ್ಲಿ ಯಕ್ಷ ಗಾನ ಕಲಾವಿದರಿಗೆ ಸಹಾಯಹಸ್ತ ಚಾಚುವ ನಿಟ್ಟಿನಲ್ಲಿ ಫೌಂಡೇಶನ್ ಸ್ಥಾಪಿಸಲಾಗಿದೆ. ಎಲ್ಲರ ಸಹಕಾರದ ಅಗತ್ಯವಿದೆ ಎಂದರು.
ಗೌರವಾರ್ಪಣೆ: ಯಕ್ಷ ಗಾನ ಕ್ಷೇತ್ರದಲ್ಲಿ ನೇಪತ್ಯ ಕಲಾವಿದರಾದ ಕುಟ್ಟಿ ಅಮೀನ್ ಪಡುಬಿದ್ರಿ, ನಾಗರಾಜ ಭಟ್ ಪಡುಬಿದ್ರಿ, ದೇವರಾಜ ರಾವ್ ಹಾಗೂ ದಿ. ಜಗದೀಶ ಆಚಾರ್ಯ ಪರವಾಗಿ ಪತ್ನಿ ಹೇಮಲತಾ ಅವರನ್ನು ಫೌಂಡೇಶನ್ ವತಿಯಿಂದ ಸನ್ಮಾನಿಸಲಾಯಿತು. ಅಶಕ್ತ ಕಲಾವಿದರಿಗೆ ಸಹಾಯಧನ ವಿತರಿಸಲಾಯಿತು.
ಘಟಕದಿಂದ ಕೊಡುಗೆ: ಪಡುಬಿದ್ರಿ ಘಟಕದ ವತಿಯಿಂದ ಯಕ್ಷ ಧ್ರುವ ಫೌಂಡೇಶನ್ಗೆ 2 ಲಕ್ಷ ರೂ. ದೇಣಿಗೆ ಹಸ್ತಾಂತರಿಸಲಾಯಿತು.
ಅಧ್ಯಕ್ಷ ಜಯ ಎಸ್. ಶೆಟ್ಟಿ ಪದ್ರ ಸ್ವಾಗತಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರ್ವಹಿಸಿದರು. ಫೌಂಡೇಶನ್ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಪ್ರಕಾಶ್ ರಾವ್ ವಂದಿಸಿದರು.
ಸಭಾ ಕಾರ್ಯಕ್ರಮಕ್ಕೆ ಮುನ್ನ ಕದ್ರಿ ನವನೀತ ಶೆಟ್ಟಿ ನಿರೂಪಣೆಯಲ್ಲಿ ಪ್ರಸಿದ್ಧ ಯಕ್ಷ ದಿಗ್ಗಜರ ಕೂಡುವಿಕೆಯಿಂದ ಯಕ್ಷ -ಗಾನ-ನಾಟ್ಯ-ವೈಭವ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ 'ಹಿರಣ್ಯಮಣಿ ಕಲ್ಯಾಣ' ಯಕ್ಷ ಗಾನ ಬಯಲಾಟ ನಡೆಯಿತು.