ಎಸ್.ಜಿ.ಕುರ್ಯ ಉಡುಪಿ
ಕೇವಲ ಎರಡನೇ ತರಗತಿ ಕಲಿತ ಯಕ್ಷ ಕಲಾದೇವಿಯ ಅನನ್ಯ ಆರಾಧಕ, ಸಾಧಕನ ಬದುಕು ಮಂಗಳೂರು ವಿವಿಯ ಪದವಿಗೆ ಪಾಠವಾಗಿದೆ.
ಇದು ಉಡುಪಿಯ ಇಂದ್ರಾಳಿಯಲ್ಲಿರುವ ಯಕ್ಷ ಗಾನ ಕೇಂದ್ರದ ಪ್ರಾಚಾರ್ಯ ಸಂಜೀವ ಸುವರ್ಣರ(63) ಹಿರಿಮೆ ಮಾತ್ರವಲ್ಲ ಯಕ್ಷ ಗಾನಕ್ಕೆ ಸಂದ ಗೌರವ.
ಬಡತನದಿಂದಾಗಿ ಹೆಚ್ಚು ಓದಲಾಗದೆ ಹೊಟ್ಟೆಪಾಡಿಗಾಗಿ ನಾನಾ ಕೆಲಸ ಮಾಡಿರುವ ಸಂಜೀವ ಸುವರ್ಣರ ಕುರಿತು ಪತ್ರಿಕೆಯೊಂದರಲ್ಲಿ ಪೃಥ್ವಿರಾಜ ಕವತ್ತಾರ್ ಸರಣಿ ಲೇಖನ ಬರೆದಿದ್ದು ರಾಜ್ಯದ ಕಲಾಸಕ್ತರ ಗಮನ ಸೆಳೆದಿತ್ತು. ಈ ಲೇಖನ ಮಾಲೆಯಲ್ಲಿ ಒಂದಿಷ್ಟು ಬದಲಾವಣೆ ಮಾಡಿ ಮಂಗಳೂರು ವಿವಿಯ ದ್ವಿತೀಯ ಬಿಎ/ಬಿಎಸ್ಡಬ್ಲ್ಯು ಕನ್ನಡ ಪಠ್ಯದಲ್ಲಿ ಪಾಠವಾಗಿದೆ. ಸಂಜೀವರ ಶೀರ್ಷಿಕೆಯ ದೀರ್ಘ ಗದ್ಯ 52 ಪುಟವನ್ನೊಳಗೊಂಡಿದೆ.
ಬಾಲ್ಯದಿಂದ ಹಿಡಿದು ಸಾಧನೆಯ ಹಾದಿ ಅನ್ಯರಿಗೂ ಪ್ರೇರಣೆ ಮಾರ್ಗದರ್ಶಕವಾಗಿದ್ದು, ಪುಸ್ತಕ ರೂಪದಲ್ಲೂ ಹೊರಬರಲಿದೆ. ಬಡಗು ಯಕ್ಷ ಗಾನವನ್ನು ಪರಿಪೂರ್ಣವಾಗಿ ಬಲ್ಲ ಸಂಜೀವ ಸುವರ್ಣ ತೆಂಕು ಯಕ್ಷ ಗಾನವನ್ನು ಅನ್ಯರಿಗೆ ಹೇಳಿಕೊಡಬಲ್ಲಷ್ಟು ನಿಪುಣರು.
ಗುಂಡಿಬೈಲು ನಾರಾಯಣ ಶೆಟ್ಟಿ ಮೊದಲ ಗುರುವಾದರೆ ವೀರಭದ್ರ ನಾಯ್ಕ, ಡಾ. ಶಿವರಾಮ ಕಾರಂತ ಸಹಿತ ಹಲವರಿಂದ ಯಕ್ಷ ಗಾನ ಕಲಿತಿದ್ದಾರೆ. ಬಿ.ವಿ. ಕಾರಂತರ ಜತೆಗೂ ರಂಗದ ಕೆಲಸ ಮಾಡಿದ್ದಾರೆ. ಮಕ್ಕಳು, ಪ್ರಾಣಿಪಕ್ಷಿ, ಸಸ್ಯಗಳ ಬಗ್ಗೆ ಅಪಾರ ಕರುಣೆಯುಳ್ಳ ಸಂಜೀವ ಸುವರ್ಣರು ಗೆಜ್ಜೆ ಕಟ್ಟಿ ಬನಿಯನ್ ತೊಟ್ಟು ಯಕ್ಷ ಹೆಜ್ಜೆ ಇಟ್ಟರೆ ತಮ್ಮ ವಯಸ್ಸು ಮರೆತು ತರುಣರೂ ನಾಚುವಂತೆ ಕುಣಿಯುತ್ತಾರೆ.
ಮಣಿಪಾಲದ ವೈದ್ಯರಿಂದ ಹಿಡಿದು ಪುಟ್ಟ ಮಕ್ಕಳಿಗೂ ಉಚಿತವಾಗಿ ನಿರಂತರ ಯಕ್ಷ ಗಾನ ಹೇಳಿಕೊಡುತ್ತಾರೆ. ಯಕ್ಷ ಗಾನ ಕೇಂದ್ರದ ಮೂಲಕ ಗುರುಕುಲ ಶಿಕ್ಷ ಣ ಮುಂದುವರಿಸುತ್ತಿದ್ದಾರೆ. ಯಕ್ಷ ಗಾನದ ಗಂಧ ಗಾಳಿ ಇಲ್ಲದ ಉತ್ತರ ಕರ್ನಾಟಕ ಸಹಿತ ಆಸಕ್ತ 50ಕ್ಕೂ ಅಧಿಕ ಮಕ್ಕಳಿಗೆ ಯಕ್ಷ ಗಾನದ ಎರಡು ಹೊತ್ತಿನ ತರಬೇತಿ ಜತೆಗೆ ಶಾಲಾ ಶಿಕ್ಷ ಣ, ವಾಸ್ತವ್ಯ, ಊಟ ತಿಂಡಿಯ ವ್ಯವಸ್ಥೆಗೂ ಅಮ್ಮನಂತೆ ಮುತುವರ್ಜಿ ವಹಿಸುತ್ತಾರೆ.
ವೃತ್ತಿ ರಂಗಭೂಮಿಗೆ ಪರ್ಯಾಯವಾಗಿ ಹವ್ಯಾಸಿ ಸಾಂಪ್ರದಾಯಿಕ ಕಲಾವಿದರನ್ನು ರೂಪಿಸಿದ್ದಾರೆ. ಎನ್ಎಸ್ಡಿ ವಿದ್ಯಾರ್ಥಿಗಳು ರಂಗ ಅನುಭವಕ್ಕಾಗಿ ಉಡುಪಿಗೆ ಬಂದು ಸಂಜೀವಣ್ಣರಿಂದ ಯಕ್ಷ ಗಾನ ಕಲಿತಿದ್ದಾರೆ.
ಜರ್ಮನಿಯ ಕ್ಯಾಥರಿನ್ ಮತ್ತು ಫ್ರಾನ್ಸ್ನ ಅನಿತಾ ಹೆರ್ ಉಡುಪಿಗೆ ಬಂದು ಯಕ್ಷ ಗಾನ ಕಲಿತ ಅಚ್ಚುಮೆಚ್ಚಿನ ಶಿಷ್ಯೆಯರು. ಮದ್ದಳೆ, ವೇಷಭೂಷಣದ ಬಗ್ಗೆ ಕರಾರುವಕ್ಕಾಗಿ ಬಲ್ಲರ ಸಂಜೀವ ಸುವರ್ಣರು 50 ದೇಶಗಳಲ್ಲಿ ಯಕ್ಷ ಧಿಗಿಣ ಹಾಕಿ ತುಳುನಾಡ ಮಣ್ಣ ಕಲೆಯನ್ನು ಪಸರಿಸಿದ್ದಾರೆ.
ಯಕ್ಷ ಕಲಾ ಸಾಧಕ ಸಂಜೀವ ಸುವರ್ಣರಿಗೆ ಅಭಿನಂದನೆ ಮತ್ತು ಪ್ರಶಸ್ತಿ ಪ್ರದಾನ 'ಕರುಣ ಸಂಜೀವ' ಕಾರ್ಯಕ್ರಮ ಜು.15ರಂದು ಅಜ್ಜರಕಾಡು ಪುರಭವನದಲ್ಲಿ ನಡೆಯಲಿದೆ. ನಾನಾ ಆಯಾಮಗಳಲ್ಲಿ ಸಂಜೀವ ಸುವರ್ಣರ ಸಾಧನೆಯನ್ನು ಅಳೆದು ಸುರಿದು ತೂಗುವ ಮಾದರಿ ವ್ಯಕ್ತಿತ್ವವನ್ನು ಪರಿಚಯಿಸುವ ಕೆಲಸವಾಗಲಿದೆ.
ಮುಖಭಾವದಲ್ಲಿ ಸಿಟ್ಟು ಕಟ್ಟುನಿಟ್ಟು ಇದ್ದಂತೆ ಕಂಡರೂ ಶಿಸ್ತಿನ ಮನುಷ್ಯ. ಕರುಣ ಸಂಜೀವ ತರುಣ ಸಂಜೀವರೂ ಹೌದು. ಮಕ್ಕಳು, ಪ್ರಾಣಿಪಕ್ಷಿ, ಸಸ್ಯಗಳ ಬಗೆಗಿರುವ ಕಾಳಜಿ ಕಲಾವಿದರಿಗೆ ಮಾದರಿ. -ಶೈಲೇಶ್ ನಾಯ್ಕ…, ಗುರುಗಳು, ಯಕ್ಷ ಗಾನ ಕೇಂದ್ರ ಇಂದ್ರಾಳಿ ಉಡುಪಿ
ಕೇವಲ ಎರಡನೇ ತರಗತಿ ಕಲಿತ ಯಕ್ಷ ಕಲಾದೇವಿಯ ಅನನ್ಯ ಆರಾಧಕ, ಸಾಧಕನ ಬದುಕು ಮಂಗಳೂರು ವಿವಿಯ ಪದವಿಗೆ ಪಾಠವಾಗಿದೆ.
ಇದು ಉಡುಪಿಯ ಇಂದ್ರಾಳಿಯಲ್ಲಿರುವ ಯಕ್ಷ ಗಾನ ಕೇಂದ್ರದ ಪ್ರಾಚಾರ್ಯ ಸಂಜೀವ ಸುವರ್ಣರ(63) ಹಿರಿಮೆ ಮಾತ್ರವಲ್ಲ ಯಕ್ಷ ಗಾನಕ್ಕೆ ಸಂದ ಗೌರವ.
ಬಡತನದಿಂದಾಗಿ ಹೆಚ್ಚು ಓದಲಾಗದೆ ಹೊಟ್ಟೆಪಾಡಿಗಾಗಿ ನಾನಾ ಕೆಲಸ ಮಾಡಿರುವ ಸಂಜೀವ ಸುವರ್ಣರ ಕುರಿತು ಪತ್ರಿಕೆಯೊಂದರಲ್ಲಿ ಪೃಥ್ವಿರಾಜ ಕವತ್ತಾರ್ ಸರಣಿ ಲೇಖನ ಬರೆದಿದ್ದು ರಾಜ್ಯದ ಕಲಾಸಕ್ತರ ಗಮನ ಸೆಳೆದಿತ್ತು. ಈ ಲೇಖನ ಮಾಲೆಯಲ್ಲಿ ಒಂದಿಷ್ಟು ಬದಲಾವಣೆ ಮಾಡಿ ಮಂಗಳೂರು ವಿವಿಯ ದ್ವಿತೀಯ ಬಿಎ/ಬಿಎಸ್ಡಬ್ಲ್ಯು ಕನ್ನಡ ಪಠ್ಯದಲ್ಲಿ ಪಾಠವಾಗಿದೆ. ಸಂಜೀವರ ಶೀರ್ಷಿಕೆಯ ದೀರ್ಘ ಗದ್ಯ 52 ಪುಟವನ್ನೊಳಗೊಂಡಿದೆ.
ಬಾಲ್ಯದಿಂದ ಹಿಡಿದು ಸಾಧನೆಯ ಹಾದಿ ಅನ್ಯರಿಗೂ ಪ್ರೇರಣೆ ಮಾರ್ಗದರ್ಶಕವಾಗಿದ್ದು, ಪುಸ್ತಕ ರೂಪದಲ್ಲೂ ಹೊರಬರಲಿದೆ. ಬಡಗು ಯಕ್ಷ ಗಾನವನ್ನು ಪರಿಪೂರ್ಣವಾಗಿ ಬಲ್ಲ ಸಂಜೀವ ಸುವರ್ಣ ತೆಂಕು ಯಕ್ಷ ಗಾನವನ್ನು ಅನ್ಯರಿಗೆ ಹೇಳಿಕೊಡಬಲ್ಲಷ್ಟು ನಿಪುಣರು.
ಗುಂಡಿಬೈಲು ನಾರಾಯಣ ಶೆಟ್ಟಿ ಮೊದಲ ಗುರುವಾದರೆ ವೀರಭದ್ರ ನಾಯ್ಕ, ಡಾ. ಶಿವರಾಮ ಕಾರಂತ ಸಹಿತ ಹಲವರಿಂದ ಯಕ್ಷ ಗಾನ ಕಲಿತಿದ್ದಾರೆ. ಬಿ.ವಿ. ಕಾರಂತರ ಜತೆಗೂ ರಂಗದ ಕೆಲಸ ಮಾಡಿದ್ದಾರೆ. ಮಕ್ಕಳು, ಪ್ರಾಣಿಪಕ್ಷಿ, ಸಸ್ಯಗಳ ಬಗ್ಗೆ ಅಪಾರ ಕರುಣೆಯುಳ್ಳ ಸಂಜೀವ ಸುವರ್ಣರು ಗೆಜ್ಜೆ ಕಟ್ಟಿ ಬನಿಯನ್ ತೊಟ್ಟು ಯಕ್ಷ ಹೆಜ್ಜೆ ಇಟ್ಟರೆ ತಮ್ಮ ವಯಸ್ಸು ಮರೆತು ತರುಣರೂ ನಾಚುವಂತೆ ಕುಣಿಯುತ್ತಾರೆ.
ಮಣಿಪಾಲದ ವೈದ್ಯರಿಂದ ಹಿಡಿದು ಪುಟ್ಟ ಮಕ್ಕಳಿಗೂ ಉಚಿತವಾಗಿ ನಿರಂತರ ಯಕ್ಷ ಗಾನ ಹೇಳಿಕೊಡುತ್ತಾರೆ. ಯಕ್ಷ ಗಾನ ಕೇಂದ್ರದ ಮೂಲಕ ಗುರುಕುಲ ಶಿಕ್ಷ ಣ ಮುಂದುವರಿಸುತ್ತಿದ್ದಾರೆ. ಯಕ್ಷ ಗಾನದ ಗಂಧ ಗಾಳಿ ಇಲ್ಲದ ಉತ್ತರ ಕರ್ನಾಟಕ ಸಹಿತ ಆಸಕ್ತ 50ಕ್ಕೂ ಅಧಿಕ ಮಕ್ಕಳಿಗೆ ಯಕ್ಷ ಗಾನದ ಎರಡು ಹೊತ್ತಿನ ತರಬೇತಿ ಜತೆಗೆ ಶಾಲಾ ಶಿಕ್ಷ ಣ, ವಾಸ್ತವ್ಯ, ಊಟ ತಿಂಡಿಯ ವ್ಯವಸ್ಥೆಗೂ ಅಮ್ಮನಂತೆ ಮುತುವರ್ಜಿ ವಹಿಸುತ್ತಾರೆ.
ವೃತ್ತಿ ರಂಗಭೂಮಿಗೆ ಪರ್ಯಾಯವಾಗಿ ಹವ್ಯಾಸಿ ಸಾಂಪ್ರದಾಯಿಕ ಕಲಾವಿದರನ್ನು ರೂಪಿಸಿದ್ದಾರೆ. ಎನ್ಎಸ್ಡಿ ವಿದ್ಯಾರ್ಥಿಗಳು ರಂಗ ಅನುಭವಕ್ಕಾಗಿ ಉಡುಪಿಗೆ ಬಂದು ಸಂಜೀವಣ್ಣರಿಂದ ಯಕ್ಷ ಗಾನ ಕಲಿತಿದ್ದಾರೆ.
ಜರ್ಮನಿಯ ಕ್ಯಾಥರಿನ್ ಮತ್ತು ಫ್ರಾನ್ಸ್ನ ಅನಿತಾ ಹೆರ್ ಉಡುಪಿಗೆ ಬಂದು ಯಕ್ಷ ಗಾನ ಕಲಿತ ಅಚ್ಚುಮೆಚ್ಚಿನ ಶಿಷ್ಯೆಯರು. ಮದ್ದಳೆ, ವೇಷಭೂಷಣದ ಬಗ್ಗೆ ಕರಾರುವಕ್ಕಾಗಿ ಬಲ್ಲರ ಸಂಜೀವ ಸುವರ್ಣರು 50 ದೇಶಗಳಲ್ಲಿ ಯಕ್ಷ ಧಿಗಿಣ ಹಾಕಿ ತುಳುನಾಡ ಮಣ್ಣ ಕಲೆಯನ್ನು ಪಸರಿಸಿದ್ದಾರೆ.
ಯಕ್ಷ ಕಲಾ ಸಾಧಕ ಸಂಜೀವ ಸುವರ್ಣರಿಗೆ ಅಭಿನಂದನೆ ಮತ್ತು ಪ್ರಶಸ್ತಿ ಪ್ರದಾನ 'ಕರುಣ ಸಂಜೀವ' ಕಾರ್ಯಕ್ರಮ ಜು.15ರಂದು ಅಜ್ಜರಕಾಡು ಪುರಭವನದಲ್ಲಿ ನಡೆಯಲಿದೆ. ನಾನಾ ಆಯಾಮಗಳಲ್ಲಿ ಸಂಜೀವ ಸುವರ್ಣರ ಸಾಧನೆಯನ್ನು ಅಳೆದು ಸುರಿದು ತೂಗುವ ಮಾದರಿ ವ್ಯಕ್ತಿತ್ವವನ್ನು ಪರಿಚಯಿಸುವ ಕೆಲಸವಾಗಲಿದೆ.
ಮುಖಭಾವದಲ್ಲಿ ಸಿಟ್ಟು ಕಟ್ಟುನಿಟ್ಟು ಇದ್ದಂತೆ ಕಂಡರೂ ಶಿಸ್ತಿನ ಮನುಷ್ಯ. ಕರುಣ ಸಂಜೀವ ತರುಣ ಸಂಜೀವರೂ ಹೌದು. ಮಕ್ಕಳು, ಪ್ರಾಣಿಪಕ್ಷಿ, ಸಸ್ಯಗಳ ಬಗೆಗಿರುವ ಕಾಳಜಿ ಕಲಾವಿದರಿಗೆ ಮಾದರಿ. -ಶೈಲೇಶ್ ನಾಯ್ಕ…, ಗುರುಗಳು, ಯಕ್ಷ ಗಾನ ಕೇಂದ್ರ ಇಂದ್ರಾಳಿ ಉಡುಪಿ