ಅಲ್ಟ್ರಾಸೌಂಡ್ ಯಂತ್ರ ನಿರ್ವಹಣೆಗೆ ತುರ್ತುಕ್ರಮ ಕೈಗೊಳ್ಳಿ
ಅಂಕೋಲಾ : ಇಲ್ಲಿಯ ಸಾರ್ವಜನಿಕ ಆಸ್ಪತ್ರೆಗೆ ಪ್ರಸೂತಿ ತಜ್ಞೆಯನ್ನು ಸೇವೆಗೆ ಬಳಸಿಕೊಳ್ಳಲು ಅಗತ್ಯ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ತಾಪಂ ಅಧ್ಯಕ್ಷೆ ಸುಜಾತಾ ಗಾಂವಕರ ಸೂಚಿಸಿದರು.
ಅಂಕೋಲಾ : ಇಲ್ಲಿಯ ಸಾರ್ವಜನಿಕ ಆಸ್ಪತ್ರೆಗೆ ಪ್ರಸೂತಿ ತಜ್ಞೆಯನ್ನು ಸೇವೆಗೆ ಬಳಸಿಕೊಳ್ಳಲು ಅಗತ್ಯ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ತಾಪಂ ಅಧ್ಯಕ್ಷೆ ಸುಜಾತಾ ಗಾಂವಕರ ಸೂಚಿಸಿದರು.
ಶುಕ್ರವಾರ ಇಲ್ಲಿಯ ತಾಪಂ ಸಭಾಭವನದಲ್ಲಿ ನಡೆದ ಕೆಡಿಪಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ 17 ಲಕ್ಷ ರೂ. ವೆಚ್ಚದ ನೂತನ ಅಲ್ಟ್ರಾಸೌಂಡ್ ಯಂತ್ರವನ್ನು ನಿರ್ವಹಣೆ ಮಾಡುವವರಿಲ್ಲದೇ ಧೂಳು ಹಿಡಿಯುತ್ತಿರುವ ಕುರಿತು ವಿಕ ಪತ್ರಿಕೆಯಲ್ಲಿ ವರದಿಯಾಗುವದರ ಮೂಲಕ ನಮ್ಮ ಗಮನಕ್ಕೆ ಬಂದಿದೆ. ಸರಕಾರವು ಆರೋಗ್ಯಯುತ ಭ್ರೂಣ ಬೆಳವಣಿಗೆæಯ ತಪಾಸಣೆಗಾಗಿ ಅಲ್ಟ್ರಾಸೌಂಡ್ ಯಂತ್ರ ನೀಡಿದರು ಸಹ ಇದನ್ನು ನಿರ್ವಹಿಸಿಬೇಕಾದ ಪ್ರಸೂತಿ ತಜ್ಞೆಯಾಗಲಿ ಅಥವಾ ರೋಡಿಯೊಜಿಲಿಸ್ಟ್ ಯಾಕೆ ಕರ್ತವ್ಯಕ್ಕೆ ಒಪ್ಪುತ್ತಿಲ್ಲಾ ಎಂದು ತಾಲೂಕಾ ಆರೋಗ್ಯ ಶಿಕ್ಷ ಣಾಧಿಕಾರಿ ಜ್ಯೋತಿ ನಾಯ್ಕರನ್ನು ಪ್ರಶ್ನಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ಜ್ಯೋತಿ ನಾಯ್ಕ, ಈ ಬಗ್ಗೆ ಡಿಎಚ್ಒ ಅವರೊಂದಿಗೆ ಸಮಾಲೋಚನೆ ನಡೆಸಿ ಕ್ರಮ ಕೈಗೊಳ್ಳಲಾಗುವದು. ಅಲ್ಟ್ರಾಸೌಂಡ್ ಯಂತ್ರವನ್ನು ಸದ್ಬಳಕೆ ಮಾಡಿಕೊಳ್ಳಲು ಆರೋಗ್ಯ ಇಲಾಖೆ ಬದ್ಧವಾಗಿದೆ ಎಂದರು.
ತಹಸೀಲ್ದಾರ್ ವಿ.ಜೆ.ಲಾಂಜೇಕರ, ವಾಯುವ್ಯ ಸಾರಿಗೆ ಸಂಸ್ಥೆಯ ಜಿ.ಎಂ.ಶೆಟ್ಟಿ, ತಾಪಂ ಅಧ್ಯಕ್ಷೆ ತುಳಸಿ ಸುಕ್ರು ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಎಂ.ಶೆಟ್ಟಿ, ತಾಪಂ ಕಾರ್ಯ ನಿರ್ವಹಣಾಧಿಕಾರಿ ವಿ.ಎಂ.ಮಹಾಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
----
ಡಿಎಚ್ಒ ನೋಟಿಸ್ಗೆ ಟೀಕೆ
ಅಂಕೋಲಾದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇರುವ ಅಲ್ಟ್ರಾಸೌಂಡ್ ಯಂತ್ರ ಬಳಕೆಯಾಗದ ಬಗ್ಗೆ ವಿಕದಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಕೆಂಡಮಂಡಲವಾದ ಡಿಎಚ್ಒ ಡಾ.ಅಶೋಕಕುಮಾರ ಅವರು ಅಂಕೋಲಾ ಸರಕಾರಿ ಆಸ್ಪತ್ರೆಯ ಆಡಳಿತಾಧಿಕಾರಿಗಳಿಗೆ ನೋಟಿಸ್ ನೀಡಿ, ಯಂತ್ರವು ನಿಮ್ಮ ಉಪಯೋಗಕ್ಕೆ ಬೇಡದಿದ್ದರೇ, ಬೇರೆ ಆಸ್ಪತ್ರೆಗೆ ಬಳಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುವದು. ಈ ಯಂತ್ರದ ಅಗತ್ಯತೆ ಇದೆಯೇ ಎಂದು ಪರಾಮರ್ಶಿಸಿ ವರದಿ ನೀಡಿ ಎಂದು ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಡಿಎಚ್ಒ ಅವರು ಇಲ್ಲಿ ಪ್ರಸೂತಿ ತಜ್ಞೆ ನೇಮಿಸುವುದನ್ನು ಬಿಟ್ಟು, ಆಸ್ಪತ್ರೆ ಆಡಳಿತಾಧಿಕಾರಿ ತಪ್ಪೆನ್ನುವಂತೆ ವರ್ತಿಸಿರುವದು ಟೀಕೆಗೆ ಕಾರಣವಾಗಿದೆ.