ಕಾರವಾರ :ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ಮಂಡಿಸಿದ ರಾಜ್ಯ ಬಜೆಟ್ನಲ್ಲಿ ಉತ್ತರ ಕನ್ನಡದ ಕರಾವಳಿ ಭಾಗಕ್ಕೆ ಯಾವುದೇ ವಿಶೇಷ ಯೋಜನೆಗಳ ಪ್ರಸ್ತಾಪವಾಗದ ಕಾರಣ ಈ ಭಾಗದ ಜನರಿಗೆ ತೀವ್ರ ನಿರಾಸೆ ಉಂಟುಮಾಡಿದೆ.
ಈ ಭಾಗದ ಮೀನುಗಾರಿಕೆ, ಕೃಷಿ , ಪ್ರವಾಸೋದ್ಯಮ ಮತ್ತು ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗೆ ಬಜೆಟ್ನಲ್ಲಿ ಅನುದಾನ ಲಭ್ಯವಾಗಬಹುದೆಂಬ ನಿರೀಕ್ಷೆ ಇತ್ತು. ಆದರೆ ಕರಾವಳಿಯ ಯಾವುದೇ ಕ್ಷೇತ್ರಕ್ಕೆ ಯೋಜನೆಗಳು ಪ್ರಸ್ತಾಪವೇ ಆಗಿಲ್ಲ.
ಮೀನುಗಾರರಿಗೆ ನಿರಾಸೆ :
ರೈತರ ಸಾಲ ಮನ್ನಾದಂತೆಯೇ ಮೀನುಗಾರರ ಸಾಲವನ್ನೂ ಮನ್ನಾ ಮಾಡಬೇಕೆಂದು ಮೀನುಗಾರರು ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೆ ಮೀನುಗಾರರ ಆಗ್ರವನ್ನು ಸರಕಾರ ನಿರ್ಲಕ್ಷ್ಯ ಮಾಡಿದೆ. ಮೀನುಗಾರಿಕೆ ದೋಣಿಗಳಿಗೆ ನೀಡಲಾಗುವ ಸೀಮೆ ಎಣ್ಣೆ ಸಬ್ಸಿಡಿ ಹೆಚ್ಚಳ ಮಾಡುವ ನಿರೀಕ್ಷೆ ಹುಸಿಯಾಗಿದೆ. ಅಲ್ಲದೇ ಮೀನು ಸಂಗ್ರಹಕ್ಕೆ ಕೋಲ್ಡ್ ಸ್ಟೋರೇಜ್ಗಳ ನಿರ್ಮಾಣದ ಬಗ್ಗೆಯೂ ಬಜೆಟ್ನಲ್ಲಿ ಪ್ರಸ್ತಾಪವಾಗಿಲ್ಲ. ಇದರಿಂದ ಪ್ರಸಕ್ತ ಬಜೆಟ್ ನಿರಾಸೆ ಉಂಟುಮಾಡಿದೆ ಮೀನುಗಾರ ಮುಖಂಡರು ಹೇಳಿದ್ದಾರೆ .
ಉದ್ಯೋಗ ಹೆಚ್ಚಳಕ್ಕೆ ಕ್ರಮವಿಲ್ಲ :
ಕರಾವಳಿ ಭಾಗದ ಕಾರವಾರ ಮೊದಲಾದ ತಾಲೂಕುಗಳಿಂದ ಯುವ ಜನತೆ ಉದ್ಯೋಗ ಅರಸಿ ಹೊರ ರಾಜ್ಯಗಳಿಗೆ ವಲಸೆ ಹೋಗುವಂತಾಗಿದೆ. ಈ ಹಿನ್ನೆಲೆಯಲ್ಲಿ ಉದ್ಯೋಗ ಸೃಷ್ಟಿಗೆ ವಿಶೇಷ ಯೋಜನೆ ರೂಪಿಸಬೇಕು. ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಆದರೆ ಬಜೆಟ್ನಲ್ಲಿ ಕರಾವಳಿ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಯಾವುದೇ ಯೋಜನೆ ಹಮ್ಮಿಕೊಂಡಿಲ್ಲ.
ಉಪ್ಪು ನೀರಿನ ಸಮಸ್ಯೆ :
ಕರಾವಳಿ ಭಾಗದಲ್ಲಿ ನದಿ, ಹಳ್ಳಗಳ ಮೂಲಕ ಉಪ್ಪು ನೀರು ಕೃಷಿ ಭೂಮಿಗೆ ನುಗ್ಗುವ ಸಮಸ್ಯೆ ಹೆಚ್ಚಿದೆ. ಸಣ್ಣ ನೀರಾವರಿ ಇಲಾಖೆಗೆ ಅನುದಾನ ಒದಗಿಸುವ ಮೂಲಕ ಉಪ್ಪು ನೀರು ತಡೆಯಲು ತಡೆಗೋಡೆ ನಿರ್ಮಿಸಬೇಕಿದೆ. ಉಪ್ಪು ನೀರಿನ ಸಮಸ್ಯೆಯಿಂದ ನೂರಾರು ಎಕರೆ ಕೃಷಿ ಭೂಮಿ ಬಂಜರಾಗುತ್ತಿರುವ ಹಿನ್ನೆಲೆಯಲ್ಲಿ ಶಾಶ್ವತ ಪರಿಹಾರ ಒದಗಿಸುವ ನಿರೀಕ್ಷೆ ರೈತರಿಗಿತ್ತು. ಆದರೆ ಪ್ರಸಕ್ತ ಬಜೆಟ್ನಲ್ಲಿ ಉಪ್ಪು ನೀರಿನ ಸಮಸ್ಯೆ ಪರಿಹಾರಕ್ಕೆ ಯಾವುದೇ ಅನುದಾನ ಒದಗಿಸದೆ ಕರಾವಳಿಯ ರೈತರಿಗೆ ನಿರಾಸೆ ಉಂಟುಮಾಡಲಾಗಿದೆ.
ಆರೋಗ್ಯ ಕ್ಷೇತ್ರದಲ್ಲಿ ಜಿಲ್ಲೆಯ ಕರಾವಳಿ ಭಾಗ ಹಿಂದಿದೆ. ಕಾರವಾರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವಾಗಿದ್ದರೂ ಪೂರ್ಣ ಪ್ರಮಾಣದಲ್ಲಿ ಸಜ್ಜುಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನಿರೀಕ್ಷೆ ಇತ್ತು. ಆದರೆ ಈ ಕುರಿತು ಯಾವುದೇ ಪ್ರಸ್ತಾಪ ಆಗಿಲ್ಲ. ಇನ್ನು ಗೇರು ಅಭಿವೃದ್ಧಿಗೆ ಹೆಚ್ಚಿನ ಒತ್ತು ಸಿಗುವ ನಿರೀಕ್ಷೆಯೂ ಹುಸಿಯಾಗಿದೆ ಎಂಬ ಆರೋಪ ರೈತ ವಲಯದಲ್ಲಿ ಕೇಳಿ ಬಂದಿದೆ.
ದಕ್ಕಿದ್ದೇನು ? :
ಇಸ್ರೇಲ್ ಮಾದರಿಯ ನೀರಾವರಿ ಯೋಜನೆಗೆ ಒಟ್ಟು 150 ಕೋಟಿ. ರೂ. ನೀಡಲಾಗಿದ್ದು ಇದರಲ್ಲಿ ಜಿಲ್ಲೆಯ ಪಾಲು ಕೂಡ ಇದೆ. ಒಳನಾಡು ಮೀನುಗಾರಿಕೆಗೆ ಯೋಜನೆ ರೂಪಿಸಲಾಗಿದ್ದು ಮೀನುಗಾರರಿಗೆ ಲಾಭವಾಗು ನಿರೀಕ್ಷೆ ಇದೆ.
ಈ ಭಾಗದ ಮೀನುಗಾರಿಕೆ, ಕೃಷಿ , ಪ್ರವಾಸೋದ್ಯಮ ಮತ್ತು ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗೆ ಬಜೆಟ್ನಲ್ಲಿ ಅನುದಾನ ಲಭ್ಯವಾಗಬಹುದೆಂಬ ನಿರೀಕ್ಷೆ ಇತ್ತು. ಆದರೆ ಕರಾವಳಿಯ ಯಾವುದೇ ಕ್ಷೇತ್ರಕ್ಕೆ ಯೋಜನೆಗಳು ಪ್ರಸ್ತಾಪವೇ ಆಗಿಲ್ಲ.
ಮೀನುಗಾರರಿಗೆ ನಿರಾಸೆ :
ರೈತರ ಸಾಲ ಮನ್ನಾದಂತೆಯೇ ಮೀನುಗಾರರ ಸಾಲವನ್ನೂ ಮನ್ನಾ ಮಾಡಬೇಕೆಂದು ಮೀನುಗಾರರು ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೆ ಮೀನುಗಾರರ ಆಗ್ರವನ್ನು ಸರಕಾರ ನಿರ್ಲಕ್ಷ್ಯ ಮಾಡಿದೆ. ಮೀನುಗಾರಿಕೆ ದೋಣಿಗಳಿಗೆ ನೀಡಲಾಗುವ ಸೀಮೆ ಎಣ್ಣೆ ಸಬ್ಸಿಡಿ ಹೆಚ್ಚಳ ಮಾಡುವ ನಿರೀಕ್ಷೆ ಹುಸಿಯಾಗಿದೆ. ಅಲ್ಲದೇ ಮೀನು ಸಂಗ್ರಹಕ್ಕೆ ಕೋಲ್ಡ್ ಸ್ಟೋರೇಜ್ಗಳ ನಿರ್ಮಾಣದ ಬಗ್ಗೆಯೂ ಬಜೆಟ್ನಲ್ಲಿ ಪ್ರಸ್ತಾಪವಾಗಿಲ್ಲ. ಇದರಿಂದ ಪ್ರಸಕ್ತ ಬಜೆಟ್ ನಿರಾಸೆ ಉಂಟುಮಾಡಿದೆ ಮೀನುಗಾರ ಮುಖಂಡರು ಹೇಳಿದ್ದಾರೆ .
ಉದ್ಯೋಗ ಹೆಚ್ಚಳಕ್ಕೆ ಕ್ರಮವಿಲ್ಲ :
ಕರಾವಳಿ ಭಾಗದ ಕಾರವಾರ ಮೊದಲಾದ ತಾಲೂಕುಗಳಿಂದ ಯುವ ಜನತೆ ಉದ್ಯೋಗ ಅರಸಿ ಹೊರ ರಾಜ್ಯಗಳಿಗೆ ವಲಸೆ ಹೋಗುವಂತಾಗಿದೆ. ಈ ಹಿನ್ನೆಲೆಯಲ್ಲಿ ಉದ್ಯೋಗ ಸೃಷ್ಟಿಗೆ ವಿಶೇಷ ಯೋಜನೆ ರೂಪಿಸಬೇಕು. ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಆದರೆ ಬಜೆಟ್ನಲ್ಲಿ ಕರಾವಳಿ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಯಾವುದೇ ಯೋಜನೆ ಹಮ್ಮಿಕೊಂಡಿಲ್ಲ.
ಉಪ್ಪು ನೀರಿನ ಸಮಸ್ಯೆ :
ಕರಾವಳಿ ಭಾಗದಲ್ಲಿ ನದಿ, ಹಳ್ಳಗಳ ಮೂಲಕ ಉಪ್ಪು ನೀರು ಕೃಷಿ ಭೂಮಿಗೆ ನುಗ್ಗುವ ಸಮಸ್ಯೆ ಹೆಚ್ಚಿದೆ. ಸಣ್ಣ ನೀರಾವರಿ ಇಲಾಖೆಗೆ ಅನುದಾನ ಒದಗಿಸುವ ಮೂಲಕ ಉಪ್ಪು ನೀರು ತಡೆಯಲು ತಡೆಗೋಡೆ ನಿರ್ಮಿಸಬೇಕಿದೆ. ಉಪ್ಪು ನೀರಿನ ಸಮಸ್ಯೆಯಿಂದ ನೂರಾರು ಎಕರೆ ಕೃಷಿ ಭೂಮಿ ಬಂಜರಾಗುತ್ತಿರುವ ಹಿನ್ನೆಲೆಯಲ್ಲಿ ಶಾಶ್ವತ ಪರಿಹಾರ ಒದಗಿಸುವ ನಿರೀಕ್ಷೆ ರೈತರಿಗಿತ್ತು. ಆದರೆ ಪ್ರಸಕ್ತ ಬಜೆಟ್ನಲ್ಲಿ ಉಪ್ಪು ನೀರಿನ ಸಮಸ್ಯೆ ಪರಿಹಾರಕ್ಕೆ ಯಾವುದೇ ಅನುದಾನ ಒದಗಿಸದೆ ಕರಾವಳಿಯ ರೈತರಿಗೆ ನಿರಾಸೆ ಉಂಟುಮಾಡಲಾಗಿದೆ.
ಆರೋಗ್ಯ ಕ್ಷೇತ್ರದಲ್ಲಿ ಜಿಲ್ಲೆಯ ಕರಾವಳಿ ಭಾಗ ಹಿಂದಿದೆ. ಕಾರವಾರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವಾಗಿದ್ದರೂ ಪೂರ್ಣ ಪ್ರಮಾಣದಲ್ಲಿ ಸಜ್ಜುಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನಿರೀಕ್ಷೆ ಇತ್ತು. ಆದರೆ ಈ ಕುರಿತು ಯಾವುದೇ ಪ್ರಸ್ತಾಪ ಆಗಿಲ್ಲ. ಇನ್ನು ಗೇರು ಅಭಿವೃದ್ಧಿಗೆ ಹೆಚ್ಚಿನ ಒತ್ತು ಸಿಗುವ ನಿರೀಕ್ಷೆಯೂ ಹುಸಿಯಾಗಿದೆ ಎಂಬ ಆರೋಪ ರೈತ ವಲಯದಲ್ಲಿ ಕೇಳಿ ಬಂದಿದೆ.
ದಕ್ಕಿದ್ದೇನು ? :
ಇಸ್ರೇಲ್ ಮಾದರಿಯ ನೀರಾವರಿ ಯೋಜನೆಗೆ ಒಟ್ಟು 150 ಕೋಟಿ. ರೂ. ನೀಡಲಾಗಿದ್ದು ಇದರಲ್ಲಿ ಜಿಲ್ಲೆಯ ಪಾಲು ಕೂಡ ಇದೆ. ಒಳನಾಡು ಮೀನುಗಾರಿಕೆಗೆ ಯೋಜನೆ ರೂಪಿಸಲಾಗಿದ್ದು ಮೀನುಗಾರರಿಗೆ ಲಾಭವಾಗು ನಿರೀಕ್ಷೆ ಇದೆ.