ಕಾರವಾರ : ಶೋಷಿತ ವರ್ಗಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಶಿಕ್ಷ ಣದ ಪಾತ್ರ ಮಹತ್ವದ್ದು. ಆದರೆ ಹಿಂದುಳಿದ, ಅಲ್ಪ ಸಂಖ್ಯಾತ ಮತ್ತು ಪರಿಶಿಷ್ಟ ಜಾತಿ ವರ್ಗಗಳ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷ ಣಿಕ ವಾತಾವರಣವನ್ನು ಕಲ್ಪಿಸುವ ನಿಟ್ಟಿನಲ್ಲಿ ನಿರ್ಮಾಣಗೊಂಡ ಹಾಸ್ಟೆಲ್ಗಳು ತಮ್ಮ ಮೂಲ ಉದ್ದೇಶವನ್ನು ಕಳೆದುಕೊಂಡು ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿವೆ ಎಂಬ ಆರೋಪಗಳು ದಟ್ಟವಾಗಿ ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ವಿಜಯ ಕರ್ನಾಟಕ ಪತ್ರಿಕೆ ಜಿಲ್ಲೆಯಲ್ಲಿ ಹಿಂದುಳಿದ, ಅಲ್ಪ ಸಂಖ್ಯಾತ ಮತ್ತು ಪರಿಶಿಷ್ಟ ಜಾತಿ ಪಂಗಡಗಳ ಹಾಸ್ಟೆಲ್ಗಳ ರಿಯಾಲಿಟಿ ಚೆಕ್ ನಡೆಸಿತು.
ಕಳೆದ ಏಳು ದಿನಗಳಿಂದ ನಡೆದ ಅಭಿಯಾನದಲ್ಲಿ ವಿವಿಧ ವಸತಿ ನಿಲಯಗಳ ಅನೇಕ ನ್ಯೂನತೆಗಳ ಬಗ್ಗೆ ಬೆಳಕು ಚೆಲ್ಲಲಾಯಿತು. ಜೋಯಿಡಾದ ಕುಂಬಾರವಾಡದಲ್ಲಿ 110 ವರ್ಷಗಳಿಗೂ ಹಳೆಯ ಕಟ್ಟಡದಲ್ಲಿ ವಸತಿ ನಿಲಯ ನಡೆಯುತ್ತಿರುವುದೂ ಸೇರಿದಂತೆ, ಕೆಲ ಹಾಸ್ಟೆಲ್ಗಳಲ್ಲಿ ಸ್ಥಳದ ಅಭಾವ, ನೀರಿನ ಕೊರತೆ, ವಾರ್ಡನ್ಗಳೇ ಇಲ್ಲದಿರುವುದು ಮೊದಲಾದ ಸಮಸ್ಯೆಗಳನ್ನು ಸವಿವರವಾಗಿ ಪ್ರಕಟಿಸಲಾಯಿತು.
ಜಿಲ್ಲೆಯ ವಸತಿ ನಿಲಯಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಡೆಸಲಾದ ವಿಕ ಅಭಿಯಾನಕ್ಕೆ ಎಲ್ಲೆಡೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ಹಾಸ್ಟೆಲ್ಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕುರಿತು ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಅವರೊಂದಿಗೆ ಸಂದರ್ಶನ ನಡೆಸಲಾಯಿತು. ಸಂದರ್ಶನದ ಸಾರಾಂಶ ಇಂತಿದೆ.
ಪ್ರಶ್ನೆ: ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 20ಕ್ಕೂ ಹೆಚ್ಚು ಹಾಸ್ಟೆಲ್ಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಸ್ವಂತ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆಯೇ ?
ಉತ್ತರ: ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಬಹುತೇಕ ಹಾಸ್ಟೆಲ್ಗಳಿಗೆ ಜಿಲ್ಲಾಡಳಿತದ ವತಿಯಿಂದ ನಿವೇಶನ ಮಂಜೂರು ಮಾಡಲಾಗಿದೆ. ಇಲಾಖೆಯಿಂದ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಬೇಕಿದೆ.
ಪ್ರ: ಹಿರಿಯ ಅಧಿಕಾರಿಗಳು ಹಾಸ್ಟೆಲ್ಗಳಿಗೆ ನಿಗದಿತ ಅವಧಿಗೆ ಒಮ್ಮೆ ಭೇಟಿ ನೀಡುವಂತಾದರೆ ಅಲ್ಲಿನ ಸಿಬ್ಬಂದಿ ಹಾಸ್ಟೆಲ್ ನಿರ್ವಹಣೆಯ ನಿಟ್ಟಿನಲ್ಲಿ ಹೆಚ್ಚು ಜಾಗೃತಿ ವಹಿಸಬಹುದಲ್ಲವೇ ? ಅಧಿಕಾರಿಗಳ ಪ್ರವಾಸ ವೇಳಾಪಟ್ಟಿಯಲ್ಲಿ ಹಾಸ್ಟೆಲ್ ಭೇಟಿ ನಮೂದಾಗುತ್ತಿದೆಯೇ ?
ಉತ್ತರ: ನಿಗದಿತ ಅವಧಿಗೊಮ್ಮೆ ಭೇಟಿ ನೀಡುವುದಕ್ಕಿಂತ ಅಚ್ಚರಿಯ ಭೇಟಿ ನೀಡುವುದು ಹೆಚ್ಚು ಪರಿಣಾಮಕಾರಿಯಾಗುತ್ತದೆ. ಕಳೆದ ವರ್ಷ ಈ ರೀತಿ ಭೇಟಿ ನೀಡಿ ಕಾರವಾರದ ಎರಡು ಹಾಸ್ಟೆಲ್ಗಳ ಅಸಮರ್ಪಕ ನಿರ್ವಹಣೆಯನ್ನು ಪತ್ತೆ ಹಚ್ಚಲು ಸಾಧ್ಯವಾಯಿತು. ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲಾಯಿತು. ಅಲ್ಲದೇ ಈ ರೀತಿ ಅಚ್ಚರಿಯ ಭೇಟಿ ನೀಡುವುದರಿಂದ ಸಿಬ್ಬಂದಿ ಸದಾ ಕಾಲ ಜಾಗೃತರಾಗಿರುತ್ತಾರೆ.
ಪ್ರ: ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳಿಗೆ ಪೂರೈಸುವ ಸಾಮಗ್ರಿಗಳನ್ನು ರಾಜ್ಯ ಮಟ್ಟದಲ್ಲಿ ಟೆಂಡರ್ ಕರೆಯಲಾಗುತ್ತದೆ. ಇದರಿಂದ ಮಕ್ಕಳಿಗೆ ಸೌಲಭ್ಯಗಳು ದೊರೆಯುವುದು ವಿಪರೀತ ವಿಳಂಬವಾಗುತ್ತದೆ. ಜಿಲ್ಲಾ ಮಟ್ಟದಲ್ಲಿಯೇ ಟೆಂಡರ್ ಕರೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆಯೇ ?
ಉತ್ತರ: ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ನಿರ್ವಹಣೆಯನ್ನು ಕ್ರೈಸ್ ಸಂಸ್ಥೆ ನೋಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತಕ್ಕೆ ಸಮರ್ಪಕ ಮಾಹಿತಿ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳ ನೇಮಕ ಮಾಡುವಂತೆ ಇಲಾಖೆಗೆ ಈಗಾಗಲೇ ಎರಡು ಬಾರಿ ಪ್ರಸ್ತಾವನೆ ಸಲ್ಲಿಸಲಾಗಿದೆ.
ಪ್ರ: ಜೋಯಿಡಾದ ಕುಂಬಾರವಾಡದಲ್ಲಿ ನೂರಾರು ವರ್ಷ ಹಳೆಯ ಕಟ್ಟಡದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ಹಾಸ್ಟೆಲ್ ನಡೆಯುತ್ತಿದೆ. ವಿದ್ಯಾರ್ಥಿಗಳು ಆತಂಕದಲ್ಲೇ ವಾಸಮಾಡುವಂತಾಗಿದೆ. ಈ ಕುರಿತು ಏನು ಕ್ರಮ ಕೈಗೊಳ್ಳುತ್ತೀರಿ ?
ಉತ್ತರ: ಈ ಹಾಸ್ಟೆಲ್ ಬಗ್ಗೆ ಗಮನದಲ್ಲಿ ಇರಲಿಲ್ಲ. ಈ ಕುರಿತು ವರದಿ ಮೂಲಕ ಮಾಹಿತಿ ನೀಡಿರುವುದಕ್ಕೆ ಧನ್ಯವಾದ. ಜಿಲ್ಲಾಡಳಿತದ ಅನುದಾನಲ್ಲಿ ಈ ಹಾಸ್ಟೆಲ್ ದುರಸ್ತಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು.
ಪ್ರ: ಕೆಲ ಹಾಸ್ಟೆಲ್ಗಳಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ. ನೀರು ಪೂರೈಕೆಗೆ ಏನು ಕ್ರಮ ವಹಿಸಲಾಗುತ್ತದೆ ?
ಉತ್ತರ : ತೆರೆದ ಬಾವಿಗಳಿದ್ದಲ್ಲಿ ಬಾವಿಗಳ ಆಳ ಹೆಚ್ಚಳ ಅಥವಾ ಇನ್ಯಾವುದೇ ಸೂಕ್ತ ಕಾಮಗಾರಿ ನಡೆಸುವ ಮೂಲಕ ನೀರು ಪೂರೈಕೆಗೆ ಕ್ರಮ ವಹಿಸಲಾಗುತ್ತದೆ. ಉಳಿದಂತೆ ಆಯಾ ವಸತಿ ನಿಲಯಗಳಿಗೆ ನೀರು ಪೂರೈಕೆಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಶೀಘ್ರ ಕ್ರಮ ವಹಿಸಲಾಗುತ್ತದೆ.
ಜಿಲ್ಲೆಯ ಕೆಲವು ಹಾಸ್ಟೆಲ್ಗಳಲ್ಲಿ ಇರುವ ಸಮಸ್ಯೆಗಳ ಬಗ್ಗೆ ವಿಜಯ ಕರ್ನಾಟಕ ಬೆಳಕು ಚೆಲ್ಲಿದೆ. ಪತ್ರಿಕೆಯಿಂದ ಉತ್ತಮ ಪ್ರಯತ್ನ ಆಗಿದೆ. ವರದಿಯನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ. ವರದಿ ಪ್ರಕಟಿಸಿದ ಬಗ್ಗೆ ಪತ್ರಿಕೆಗೆ ಧನ್ಯವಾದ ಎಂದು ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಹೇಳಿದರು.
ಕಳೆದ ಏಳು ದಿನಗಳಿಂದ ನಡೆದ ಅಭಿಯಾನದಲ್ಲಿ ವಿವಿಧ ವಸತಿ ನಿಲಯಗಳ ಅನೇಕ ನ್ಯೂನತೆಗಳ ಬಗ್ಗೆ ಬೆಳಕು ಚೆಲ್ಲಲಾಯಿತು. ಜೋಯಿಡಾದ ಕುಂಬಾರವಾಡದಲ್ಲಿ 110 ವರ್ಷಗಳಿಗೂ ಹಳೆಯ ಕಟ್ಟಡದಲ್ಲಿ ವಸತಿ ನಿಲಯ ನಡೆಯುತ್ತಿರುವುದೂ ಸೇರಿದಂತೆ, ಕೆಲ ಹಾಸ್ಟೆಲ್ಗಳಲ್ಲಿ ಸ್ಥಳದ ಅಭಾವ, ನೀರಿನ ಕೊರತೆ, ವಾರ್ಡನ್ಗಳೇ ಇಲ್ಲದಿರುವುದು ಮೊದಲಾದ ಸಮಸ್ಯೆಗಳನ್ನು ಸವಿವರವಾಗಿ ಪ್ರಕಟಿಸಲಾಯಿತು.
ಜಿಲ್ಲೆಯ ವಸತಿ ನಿಲಯಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಡೆಸಲಾದ ವಿಕ ಅಭಿಯಾನಕ್ಕೆ ಎಲ್ಲೆಡೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ಹಾಸ್ಟೆಲ್ಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕುರಿತು ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಅವರೊಂದಿಗೆ ಸಂದರ್ಶನ ನಡೆಸಲಾಯಿತು. ಸಂದರ್ಶನದ ಸಾರಾಂಶ ಇಂತಿದೆ.
ಪ್ರಶ್ನೆ: ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 20ಕ್ಕೂ ಹೆಚ್ಚು ಹಾಸ್ಟೆಲ್ಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಸ್ವಂತ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆಯೇ ?
ಉತ್ತರ: ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಬಹುತೇಕ ಹಾಸ್ಟೆಲ್ಗಳಿಗೆ ಜಿಲ್ಲಾಡಳಿತದ ವತಿಯಿಂದ ನಿವೇಶನ ಮಂಜೂರು ಮಾಡಲಾಗಿದೆ. ಇಲಾಖೆಯಿಂದ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಬೇಕಿದೆ.
ಪ್ರ: ಹಿರಿಯ ಅಧಿಕಾರಿಗಳು ಹಾಸ್ಟೆಲ್ಗಳಿಗೆ ನಿಗದಿತ ಅವಧಿಗೆ ಒಮ್ಮೆ ಭೇಟಿ ನೀಡುವಂತಾದರೆ ಅಲ್ಲಿನ ಸಿಬ್ಬಂದಿ ಹಾಸ್ಟೆಲ್ ನಿರ್ವಹಣೆಯ ನಿಟ್ಟಿನಲ್ಲಿ ಹೆಚ್ಚು ಜಾಗೃತಿ ವಹಿಸಬಹುದಲ್ಲವೇ ? ಅಧಿಕಾರಿಗಳ ಪ್ರವಾಸ ವೇಳಾಪಟ್ಟಿಯಲ್ಲಿ ಹಾಸ್ಟೆಲ್ ಭೇಟಿ ನಮೂದಾಗುತ್ತಿದೆಯೇ ?
ಉತ್ತರ: ನಿಗದಿತ ಅವಧಿಗೊಮ್ಮೆ ಭೇಟಿ ನೀಡುವುದಕ್ಕಿಂತ ಅಚ್ಚರಿಯ ಭೇಟಿ ನೀಡುವುದು ಹೆಚ್ಚು ಪರಿಣಾಮಕಾರಿಯಾಗುತ್ತದೆ. ಕಳೆದ ವರ್ಷ ಈ ರೀತಿ ಭೇಟಿ ನೀಡಿ ಕಾರವಾರದ ಎರಡು ಹಾಸ್ಟೆಲ್ಗಳ ಅಸಮರ್ಪಕ ನಿರ್ವಹಣೆಯನ್ನು ಪತ್ತೆ ಹಚ್ಚಲು ಸಾಧ್ಯವಾಯಿತು. ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲಾಯಿತು. ಅಲ್ಲದೇ ಈ ರೀತಿ ಅಚ್ಚರಿಯ ಭೇಟಿ ನೀಡುವುದರಿಂದ ಸಿಬ್ಬಂದಿ ಸದಾ ಕಾಲ ಜಾಗೃತರಾಗಿರುತ್ತಾರೆ.
ಪ್ರ: ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳಿಗೆ ಪೂರೈಸುವ ಸಾಮಗ್ರಿಗಳನ್ನು ರಾಜ್ಯ ಮಟ್ಟದಲ್ಲಿ ಟೆಂಡರ್ ಕರೆಯಲಾಗುತ್ತದೆ. ಇದರಿಂದ ಮಕ್ಕಳಿಗೆ ಸೌಲಭ್ಯಗಳು ದೊರೆಯುವುದು ವಿಪರೀತ ವಿಳಂಬವಾಗುತ್ತದೆ. ಜಿಲ್ಲಾ ಮಟ್ಟದಲ್ಲಿಯೇ ಟೆಂಡರ್ ಕರೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆಯೇ ?
ಉತ್ತರ: ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ನಿರ್ವಹಣೆಯನ್ನು ಕ್ರೈಸ್ ಸಂಸ್ಥೆ ನೋಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತಕ್ಕೆ ಸಮರ್ಪಕ ಮಾಹಿತಿ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳ ನೇಮಕ ಮಾಡುವಂತೆ ಇಲಾಖೆಗೆ ಈಗಾಗಲೇ ಎರಡು ಬಾರಿ ಪ್ರಸ್ತಾವನೆ ಸಲ್ಲಿಸಲಾಗಿದೆ.
ಪ್ರ: ಜೋಯಿಡಾದ ಕುಂಬಾರವಾಡದಲ್ಲಿ ನೂರಾರು ವರ್ಷ ಹಳೆಯ ಕಟ್ಟಡದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ಹಾಸ್ಟೆಲ್ ನಡೆಯುತ್ತಿದೆ. ವಿದ್ಯಾರ್ಥಿಗಳು ಆತಂಕದಲ್ಲೇ ವಾಸಮಾಡುವಂತಾಗಿದೆ. ಈ ಕುರಿತು ಏನು ಕ್ರಮ ಕೈಗೊಳ್ಳುತ್ತೀರಿ ?
ಉತ್ತರ: ಈ ಹಾಸ್ಟೆಲ್ ಬಗ್ಗೆ ಗಮನದಲ್ಲಿ ಇರಲಿಲ್ಲ. ಈ ಕುರಿತು ವರದಿ ಮೂಲಕ ಮಾಹಿತಿ ನೀಡಿರುವುದಕ್ಕೆ ಧನ್ಯವಾದ. ಜಿಲ್ಲಾಡಳಿತದ ಅನುದಾನಲ್ಲಿ ಈ ಹಾಸ್ಟೆಲ್ ದುರಸ್ತಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು.
ಪ್ರ: ಕೆಲ ಹಾಸ್ಟೆಲ್ಗಳಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ. ನೀರು ಪೂರೈಕೆಗೆ ಏನು ಕ್ರಮ ವಹಿಸಲಾಗುತ್ತದೆ ?
ಉತ್ತರ : ತೆರೆದ ಬಾವಿಗಳಿದ್ದಲ್ಲಿ ಬಾವಿಗಳ ಆಳ ಹೆಚ್ಚಳ ಅಥವಾ ಇನ್ಯಾವುದೇ ಸೂಕ್ತ ಕಾಮಗಾರಿ ನಡೆಸುವ ಮೂಲಕ ನೀರು ಪೂರೈಕೆಗೆ ಕ್ರಮ ವಹಿಸಲಾಗುತ್ತದೆ. ಉಳಿದಂತೆ ಆಯಾ ವಸತಿ ನಿಲಯಗಳಿಗೆ ನೀರು ಪೂರೈಕೆಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಶೀಘ್ರ ಕ್ರಮ ವಹಿಸಲಾಗುತ್ತದೆ.
ಜಿಲ್ಲೆಯ ಕೆಲವು ಹಾಸ್ಟೆಲ್ಗಳಲ್ಲಿ ಇರುವ ಸಮಸ್ಯೆಗಳ ಬಗ್ಗೆ ವಿಜಯ ಕರ್ನಾಟಕ ಬೆಳಕು ಚೆಲ್ಲಿದೆ. ಪತ್ರಿಕೆಯಿಂದ ಉತ್ತಮ ಪ್ರಯತ್ನ ಆಗಿದೆ. ವರದಿಯನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ. ವರದಿ ಪ್ರಕಟಿಸಿದ ಬಗ್ಗೆ ಪತ್ರಿಕೆಗೆ ಧನ್ಯವಾದ ಎಂದು ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಹೇಳಿದರು.