ಆ್ಯಪ್ನಗರ

‘ದೇಶಪಾಂಡೆ ಕುರಿತ ಅಸ್ನೋಟಿಕರ್‌ ಹೇಳಿಕೆ ಖಂಡನೀಯ’

ಸಿದ್ದಾಪುರ : ಸಚಿವ ಆರ್‌.ವಿ.ದೇಶಪಾಂಡೆ ಅವರಿಗೆ ವಯಸ್ಸಾಯಿತು, ಇನ್ನು ಮುಂದೆ ಬೇರೆಯವರಿಗೆ ಅವಕಾಶ ನೀಡಬೇಕೆಂದು ಹೇಳುವ ನೈತಿಕತೆ ಆನಂದ ಅಸ್ನೋಟಿಕರ್‌ ಅವರಿಗೆ ಇಲ್ಲ ಎಂದು ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೆ.ಜಿ.ನಾಗರಾಜ ಖಂಡಿಸಿದರು.

Vijaya Karnataka 18 Jan 2019, 5:00 am
ಸಿದ್ದಾಪುರ : ಸಚಿವ ಆರ್‌.ವಿ.ದೇಶಪಾಂಡೆ ಅವರಿಗೆ ವಯಸ್ಸಾಯಿತು, ಇನ್ನು ಮುಂದೆ ಬೇರೆಯವರಿಗೆ ಅವಕಾಶ ನೀಡಬೇಕೆಂದು ಹೇಳುವ ನೈತಿಕತೆ ಆನಂದ ಅಸ್ನೋಟಿಕರ್‌ ಅವರಿಗೆ ಇಲ್ಲ ಎಂದು ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೆ.ಜಿ.ನಾಗರಾಜ ಖಂಡಿಸಿದರು.
Vijaya Karnataka Web
‘ದೇಶಪಾಂಡೆ ಕುರಿತ ಅಸ್ನೋಟಿಕರ್‌ ಹೇಳಿಕೆ ಖಂಡನೀಯ’


ಅವರು ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶಪಾಂಡೆಯವರು 45ಕ್ಕೂ ಹೆಚ್ಚು ವರ್ಷಗಳಿಂದ ರಾಜಕೀಯ ಜೀವನದಲ್ಲಿದ್ದು, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಹಾಗೆ ಹೇಳುವುದಕ್ಕೆ ಇವರು ಯಾರು? ಕಾಂಗ್ರೆಸ್‌ ಪಕ್ಷ ದವರೇ? ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಮಾಜಿ ಸಚಿವ ಆನಂದ ಅಸ್ನೋಟಿಕರ್‌ ಅವರು ತಮ್ಮ ಘನತೆಗೆ ತಕ್ಕಂತೆ ಮಾತನಾಡುವುದನ್ನು ಕಲಿಯಬೇಕು ಹಾಗೂ ದೇಶಪಾಂಡೆ ಅವರು ರಾಜ್ಯದ ಪ್ರಭಾವಿ ಸಚಿವರಾಗಿ ರಾಷ್ಟ್ರ ಮಟ್ಟದಲ್ಲಿಯೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡ ಎಸ್‌.ಬಿ.ಗೌಡ ಕಲ್ಲೂರು ಮಾತನಾಡಿ, ಆನಂದ ಆಸ್ನೋಟಿಕರ್‌ ಅವರನ್ನು ಶಾಸಕರನ್ನಾಗಿ ಮಾಡಿದವರೇ ಆರ್‌.ವಿ.ದೇಶಪಾಂಡೆ ಅವರು. ಅಲ್ಲದೇ ಅವರ ತಾಯಿಯನ್ನು ಎಂಎಲ್‌ಸಿ ಮಾಡಿದ್ದು ದೇಶಪಾಂಡೆ ಅವತೃ ಎನ್ನುವುದನ್ನು ಮರೆತಿದ್ದಾರೆ. ದೇಶಪಾಂಡೆಯವರಿಂದ ಹಲವು ರೀತಿಯ ಲಾಭ ಪಡೆದುಕೊಂಡು ಈಗ ಅವರಿಗೆ ವಯಸ್ಸಾಯಿತು, ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಿಸಬೇಕು ಎಂದು ಹೇಳುತ್ತಾರೆ. ಅವರಿಗೆ ವಯಸ್ಸಾದರೂ ಜಿಲ್ಲೆಯ ಅಭಿವೃದ್ಧಿ ಕುರಿತು ಚಿಂತನೆ ಮಾಡುವ ವ್ಯಕ್ತಿ. ಪ್ರತಿಪಕ್ಷ ದವರು ದೇಶಪಾಂಡೆ ಅವರ ವಿರುದ್ಧ ಮಾತನಾಡುವುದಿಲ್ಲ. ಅವರಲ್ಲಿ ಯಾವುದಾದರೂ ಕೊರತೆ ಇದ್ದರೆ ಹೇಳಲಿ ಅಥವಾ ಈ ರೀತಿ ಅಭಿವೃದ್ಧಿ ಮಾಡಬೇಕೆಂದು ಹೇಳಲಿ ಅದನ್ನು ನಾವು ಸ್ವಾಗತಿಸುತ್ತೇವೆ. ಇಲ್ಲ ಸಲ್ಲದ ಹೇಳಿಕೆ ನೀಡವುದು ಬೇಡ ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡ ಆರ್‌.ಎಂ.ಹೆಗಡೆ ಬಾಳೇಸರ, ನಾಗಪತಿ ನಾಯ್ಕ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ