ದಾಂಡೇಲಿ: ರೈಲ್ವೆ ಸುರಕ್ಷತಾ ವಿಭಾಗದವರು ಗುರುವಾರ ಅಳ್ನಾವರದಿಂದ ಅಂಬೇವಾಡಿವರೆಗೆ ರೈಲು ಸಂಚಾರವನ್ನು ಪ್ರಾಯೋಗಿಕವಾಗಿ ನಡೆಸಿದರು.ರೈಲ್ವೆ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಒಳಗೊಂಡ ರೈಲು ಅಳ್ನಾವರದಿಂದ ಹೊರಟು ರೈಲ್ವೆ ಹಳಿ, ಸಿಗ್ನಲ್ಗಳ ಪರೀಕ್ಷೆ ನಡೆಸಿ ಅಂಬೇವಾಡಿ ರೈಲು ನಿಲ್ದಾಣಕ್ಕೆ ಆಗಮಿಸಿತು.
ಅಳ್ನಾವರದಿಂದ ಅಂಬೇವಾಡಿವರೆಗಿನ 26 ಕಿ.ಮೀ. ಅಂತರದ ಈ ರೈಲು ಸಂಚಾರದ ಪ್ರಯೋಗ ಯಶಸ್ವಿಯಾಗಿದ್ದು, ಮುಂದಿನ 15 ದಿನಗಳಲ್ಲಿಅಳ್ನಾವರ-ದಾಂಡೇಲಿ ಪ್ರಯಾಣಿಕರ ರೈಲು ಸಂಚಾರ ಆರಂಭಗೊಳ್ಳುವ ಸಾಧ್ಯತೆ ಇದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನಿಡಿದ್ದಾರೆ.
ಪ್ರಾಯೋಗಿಕವಾಗಿ ಓಡಿಸಿದ ರೈಲಿನಲ್ಲಿಪ್ರಯಾಣ ನಡೆಸಿದ ಹುಬ್ಬಳ್ಳಿಯ ಡಿವಿಜನಲ್ ರೀಜನಲ್ ಮ್ಯಾನೇಜರ್ ರಾಜೇಶ ಮೋಹನ, ಡಿವಿಜನ್ ಮ್ಯಾನೇಜರ್ ಸುನೀಲ, ಡೆಪ್ಯುಟಿ ಕಮರ್ಷಿಯಲ್ ಮ್ಯಾನೇಜರ್ ಮಂಜುನಾಥ ಹಾಗೂ ಸ್ಥಳಿಯ ಸ್ಟೇಷನ್ ಅಧೀಕ್ಷಕ ಸುಧೀರಕುಮಾರ ಉಪಸ್ಥಿತರಿದ್ದರು.
ಈ ಪ್ರಾಯೋಗಿಕ ರೈಲು ಸಂಚಾರ ದಾಂಡೇಲಿ ಜನರಿಗೆ ರೈಲು ಸಂಚಾರ ಆರಂಭವಾಗುವ ಭರವಸೆ ಮೂಡಿಸಿದೆ.
ಅಳ್ನಾವರದಿಂದ ಅಂಬೇವಾಡಿವರೆಗಿನ 26 ಕಿ.ಮೀ. ಅಂತರದ ಈ ರೈಲು ಸಂಚಾರದ ಪ್ರಯೋಗ ಯಶಸ್ವಿಯಾಗಿದ್ದು, ಮುಂದಿನ 15 ದಿನಗಳಲ್ಲಿಅಳ್ನಾವರ-ದಾಂಡೇಲಿ ಪ್ರಯಾಣಿಕರ ರೈಲು ಸಂಚಾರ ಆರಂಭಗೊಳ್ಳುವ ಸಾಧ್ಯತೆ ಇದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನಿಡಿದ್ದಾರೆ.
ಪ್ರಾಯೋಗಿಕವಾಗಿ ಓಡಿಸಿದ ರೈಲಿನಲ್ಲಿಪ್ರಯಾಣ ನಡೆಸಿದ ಹುಬ್ಬಳ್ಳಿಯ ಡಿವಿಜನಲ್ ರೀಜನಲ್ ಮ್ಯಾನೇಜರ್ ರಾಜೇಶ ಮೋಹನ, ಡಿವಿಜನ್ ಮ್ಯಾನೇಜರ್ ಸುನೀಲ, ಡೆಪ್ಯುಟಿ ಕಮರ್ಷಿಯಲ್ ಮ್ಯಾನೇಜರ್ ಮಂಜುನಾಥ ಹಾಗೂ ಸ್ಥಳಿಯ ಸ್ಟೇಷನ್ ಅಧೀಕ್ಷಕ ಸುಧೀರಕುಮಾರ ಉಪಸ್ಥಿತರಿದ್ದರು.
ಈ ಪ್ರಾಯೋಗಿಕ ರೈಲು ಸಂಚಾರ ದಾಂಡೇಲಿ ಜನರಿಗೆ ರೈಲು ಸಂಚಾರ ಆರಂಭವಾಗುವ ಭರವಸೆ ಮೂಡಿಸಿದೆ.