ಆ್ಯಪ್ನಗರ

ಪ್ರಾಯೋಗಿಕವಾಗಿ ಸಂಚರಿಸಿದ ರೈಲು

ದಾಂಡೇಲಿ: ರೈಲ್ವೆ ಸುರಕ್ಷತಾ ವಿಭಾಗದವರು ಗುರುವಾರ ಅಳ್ನಾವರದಿಂದ ಅಂಬೇವಾಡಿವರೆಗೆ ರೈಲು ಸಂಚಾರವನ್ನು ಪ್ರಾಯೋಗಿಕವಾಗಿ ನಡೆಸಿದರು.ರೈಲ್ವೆ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಒಳಗೊಂಡ ರೈಲು ಅಳ್ನಾವರದಿಂದ ಹೊರಟು ರೈಲ್ವೆ ಹಳಿ, ಸಿಗ್ನಲ್‌ಗಳ ಪರೀಕ್ಷೆ ನಡೆಸಿ ಅಂಬೇವಾಡಿ ರೈಲು ನಿಲ್ದಾಣಕ್ಕೆ ಆಗಮಿಸಿತು.

Vijaya Karnataka 20 Oct 2019, 5:00 am
ದಾಂಡೇಲಿ: ರೈಲ್ವೆ ಸುರಕ್ಷತಾ ವಿಭಾಗದವರು ಗುರುವಾರ ಅಳ್ನಾವರದಿಂದ ಅಂಬೇವಾಡಿವರೆಗೆ ರೈಲು ಸಂಚಾರವನ್ನು ಪ್ರಾಯೋಗಿಕವಾಗಿ ನಡೆಸಿದರು.ರೈಲ್ವೆ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಒಳಗೊಂಡ ರೈಲು ಅಳ್ನಾವರದಿಂದ ಹೊರಟು ರೈಲ್ವೆ ಹಳಿ, ಸಿಗ್ನಲ್‌ಗಳ ಪರೀಕ್ಷೆ ನಡೆಸಿ ಅಂಬೇವಾಡಿ ರೈಲು ನಿಲ್ದಾಣಕ್ಕೆ ಆಗಮಿಸಿತು.
Vijaya Karnataka Web
ಪ್ರಾಯೋಗಿಕವಾಗಿ ಸಂಚರಿಸಿದ ರೈಲು


ಅಳ್ನಾವರದಿಂದ ಅಂಬೇವಾಡಿವರೆಗಿನ 26 ಕಿ.ಮೀ. ಅಂತರದ ಈ ರೈಲು ಸಂಚಾರದ ಪ್ರಯೋಗ ಯಶಸ್ವಿಯಾಗಿದ್ದು, ಮುಂದಿನ 15 ದಿನಗಳಲ್ಲಿಅಳ್ನಾವರ-ದಾಂಡೇಲಿ ಪ್ರಯಾಣಿಕರ ರೈಲು ಸಂಚಾರ ಆರಂಭಗೊಳ್ಳುವ ಸಾಧ್ಯತೆ ಇದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನಿಡಿದ್ದಾರೆ.

ಪ್ರಾಯೋಗಿಕವಾಗಿ ಓಡಿಸಿದ ರೈಲಿನಲ್ಲಿಪ್ರಯಾಣ ನಡೆಸಿದ ಹುಬ್ಬಳ್ಳಿಯ ಡಿವಿಜನಲ್‌ ರೀಜನಲ್‌ ಮ್ಯಾನೇಜರ್‌ ರಾಜೇಶ ಮೋಹನ, ಡಿವಿಜನ್‌ ಮ್ಯಾನೇಜರ್‌ ಸುನೀಲ, ಡೆಪ್ಯುಟಿ ಕಮರ್ಷಿಯಲ್‌ ಮ್ಯಾನೇಜರ್‌ ಮಂಜುನಾಥ ಹಾಗೂ ಸ್ಥಳಿಯ ಸ್ಟೇಷನ್‌ ಅಧೀಕ್ಷಕ ಸುಧೀರಕುಮಾರ ಉಪಸ್ಥಿತರಿದ್ದರು.

ಈ ಪ್ರಾಯೋಗಿಕ ರೈಲು ಸಂಚಾರ ದಾಂಡೇಲಿ ಜನರಿಗೆ ರೈಲು ಸಂಚಾರ ಆರಂಭವಾಗುವ ಭರವಸೆ ಮೂಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ