ಆ್ಯಪ್ನಗರ

ಗ್ರಾಮೀಣ ಪ್ರತಿಭೆಗೆ ಒಲಿದ 225ನೇ ರಾರ‍ಯಂಕ್‌

ಕಾರವಾರ : ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ 2019ನೇ ಸಾಲಿನ ಪರೀಕ್ಷೆಯಲ್ಲಿಉತ್ತರ ಕನ್ನಡದ ಅಂಕೋಲಾ ತಾಲೂಕಿನ ವಾಸರಕುದ್ರಿಗೆಯ ಹೇಮಾ ಶಾಂತಾರಾಮ ನಾಯಕ 225 ನೇ ರಾರ‍ಯಂಕ್‌ ಪಡೆದು ಜಿಲ್ಲೆಗೆ ಹೆಮ್ಮೆಯ ಗರಿ ಮೂಡಿಸಿದ್ದಾರೆ.

Vijaya Karnataka 6 Aug 2020, 5:00 am
ಕಾರವಾರ : ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ 2019ನೇ ಸಾಲಿನ ಪರೀಕ್ಷೆಯಲ್ಲಿಉತ್ತರ ಕನ್ನಡದ ಅಂಕೋಲಾ ತಾಲೂಕಿನ ವಾಸರಕುದ್ರಿಗೆಯ ಹೇಮಾ ಶಾಂತಾರಾಮ ನಾಯಕ 225 ನೇ ರಾರ‍ಯಂಕ್‌ ಪಡೆದು ಜಿಲ್ಲೆಗೆ ಹೆಮ್ಮೆಯ ಗರಿ ಮೂಡಿಸಿದ್ದಾರೆ.
Vijaya Karnataka Web 0535364 GURUDATT 6_24
ಹೇಮಾ ನಾಯಕ ತನ್ನ ಕುಟುಂಬದೊಂದಿಗೆ.


ತಾಲೂಕಿನ ತೆಂಕಣಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಪ್ರಾಥಮಿಕ, ಜೈಹಿಂದ್‌ ಪ್ರೌಢಶಾಲೆಯಲ್ಲಿಪ್ರೌಢ, ಜಿ.ಸಿ.ಕಾಲೇಜಿನಲ್ಲಿಪದವಿ ಪೂರ್ವ ಶಿಕ್ಷಣ ಪಡೆದಿದ್ದಾರೆ.

ಹೇಮಾ ಕನ್ನಡ ಮಾಧ್ಯಮದಲ್ಲಿಶಿಕ್ಷಣ ಪೂರೈಸಿದ, ಅಪ್ಪಟ ಗ್ರಾಮೀಣ ಪ್ರತಿಭೆಯಾಗಿದ್ದಾರೆ. ವಾಸರಕುದ್ರಿಗೆ ಗ್ರಾಮದ ಸರಕಾರಿ ಪ್ರೌಢಶಾಲಾ ನಿವೃತ್ತ ಶಿಕ್ಷಕ ಶಾಂತಾರಾಮ ಬೀರಣ್ಣ ನಾಯಕ ಮತ್ತು ವಾಸರಕುದ್ರಿಗೆ ಗ್ರಾಪಂ ವ್ಯಾಪ್ತಿಯ ಮೇಲಿನಗುಳಿ ಸರಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿ ರಾಜಮ್ಮ ಎಚ್‌. ನಾಯಕರವರ ಪುತ್ರಿಯಾಗಿದ್ದು, ಚಿಕ್ಕಂದಿನಿಂದಿಲೇ ಸೃಜಲಶೀಲ ವ್ಯಕ್ತಿತ್ವ ಮೈಗೂಡಿಸಿಕೊಂಡ ಪ್ರತಿಭಾವಂತೆ.

'ವಿಜಯ ಕರ್ನಾಟಕ'ದೊಂದಿಗೆ ಅಭಿಪ್ರಾಯ ಹಂಚಿಕೊಂಡ ಹೇಮಾ ನಾಯಕ, ''ಸಾಧನೆಗೆ ಕನ್ನಡ ಅಥವಾ ಇಂಗ್ಲಿಷ್‌ ಮಾಧ್ಯಮದ ತಳಹದಿ ಮುಖ್ಯವಲ್ಲ. ಸಾಧಿಸುವ ಛಲ, ಅಚಲವಾದ ಗುರಿಯೆ ಮುಖ್ಯ ಎಂದು ನನಗನಿಸಿದೆ'' ಎಂದರು.

''ನಾನು ಕಲಿತ ಶಾಲಾ-ಕಾಲೇಜುಗಳಲ್ಲಿಸಂಸ್ಕಾರಯುತ ಶಿಕ್ಷಣ ದೊರೆತಿದೆ. ಆದರೆ ನಮ್ಮ ಜಿಲ್ಲೆಯಲ್ಲಿಇನ್ನು ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಬೆಳೆದು ಗುಣಮಟ್ಟದ-ಮೌಲ್ಯಾಧಾರಿತ ಶಿಕ್ಷಣ ದೊರೆಯವಂತಾಗಬೇಕು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿಇಲ್ಲಿಯ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡುತ್ತಾರೆ. ಮುಂದಿನ ಶಿಕ್ಷಣಕ್ಕಾಗಿ ಬೇರೆ ಬೇರೆ ಜಿಲ್ಲೆಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಇಲ್ಲಿಯ ನೆಲದಲ್ಲಿಯೂ ಸಹ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಬೇಕು. ಇತಂಹ ಸೌಲಭ್ಯ ಈ ಜಿಲ್ಲೆಯಲ್ಲಿದ್ದರೆ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳು ಹೊರ ಹೊಮ್ಮಲು ಸಾಧ್ಯ'' ಎಂದು ವಿವರಿಸಿದರು.

''ನಾನು ಬಿಎಸ್ಸಿ ಓದುತ್ತಿರುವಾಗಲೇ ಅಂಕೋಲಾದ ಶ್ರೀರಾಮ ಸ್ಟಡಿ ಸರ್ಕಲ್‌ನಲ್ಲಿತರಬೇತಿ ತೆಗೆದುಕೊಳ್ಳುತ್ತಿದೆ. ಆ ತರಬೇತಿಯೇ ನನಗೆ ಪರೀಕ್ಷೆ ಎದುರಿಸಲು ಪ್ರಥಮ ಮೆಟ್ಟಿಲಾಯಿತು. ನಂತರ ಬೆಂಗಳೂರಿನ ಇನ್ಸೈಟ್ಸ್‌ ಐಎಎಸ್‌ ಅಕೆಡೆಮಿಯಲ್ಲಿಸ್ವಲ್ಪ ದಿನ ತರಬೇತಿ ತೆಗೆದುಕೊಂಡಿದ್ದೆ. ವಿಶೇಷವಾಗಿ ಓದಿನಲ್ಲಿತೊಡಗಿಸಿಕೊಂಡೆ ಪರೀಕ್ಷೆ ಎದುರಿಸಿದ್ದೆ'' ಎಂದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ