ಶಿರಸಿ: ಮಾರಕ ಕೊರೊನಾ ರೋಗ ನಿರ್ಮೂಲನೆಗೊಳಿಸಲು ರಾಜ್ಯ ಸರಕಾರವು ನಾನಾ ಕ್ರಮ ಕೈಗೊಂಡಿದೆ. ಅದಕ್ಕೆ ಪೂರಕವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೆನರಾ ಡಿಸಿಸಿ ಬ್ಯಾಂಕಿನಿಂದ, ಬ್ಯಾಂಕಿನ ಸಿಬ್ಬಂದಿಗಳಿಂದ ಹಾಗೂ ಜಿಲ್ಲೆಯಲ್ಲಿಕಾರ್ಯನಿರ್ವಹಿಸುತ್ತಿರುವ ಸಹಕಾರ ಸಂಘ ಸಂಸ್ಥೆಗಳಿಂದ ಡಿಡಿ, ನೆಫ್ಟ… ಮೂಲಕ ಅಂತೂ 1.09 ಕೋಟಿ ರೂ.ಗಳನ್ನು ದೇಣಿಗೆ ರೂಪದಲ್ಲಿನೀಡಲಾಗುತ್ತಿದೆ. ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಘೋಟ್ನೇಕರ ಪ್ರಕಟಣೆಯಲ್ಲಿಈ ವಿಷಯ ತಿಳಿಸಿದ್ದಾರೆ. ಬ್ಯಾಂಕು ಈ ಸಂದರ್ಭದಲ್ಲಿಸರಕಾರದ ಜತೆ ಕೈಜೋಡಿಸುತ್ತಿದೆ. ರೈತ ಬಾಂಧವರು ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಹಕಾರ ಸಂಘಗಳು ರೈತರಿಗೆ ಅವಶ್ಯಕತೆ ಇರುವ ಮಾಸ್ಕಗಳನ್ನು ಪೂರೈಸಲು ಮುಂದಾಗಬೇಕು ಎಂದಿದ್ದಾರೆ.
ಸಹಕಾರಿ ಸಂಸ್ಥೆಗಳಿಂದ 1.09 ಕೋಟಿ ದೇಣಿಗೆ
ಶಿರಸಿ: ಮಾರಕ ಕೊರೊನಾ ರೋಗ ನಿರ್ಮೂಲನೆಗೊಳಿಸಲು ರಾಜ್ಯ ಸರಕಾರವು ನಾನಾ ಕ್ರಮ ಕೈಗೊಂಡಿದೆ. ಅದಕ್ಕೆ ಪೂರಕವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೆನರಾ ಡಿಸಿಸಿ ಬ್ಯಾಂಕಿನಿಂದ, ಬ್ಯಾಂಕಿನ ಸಿಬ್ಬಂದಿಗಳಿಂದ ಹಾಗೂ ಜಿಲ್ಲೆಯಲ್ಲಿಕಾರ್ಯನಿರ್ವಹಿಸುತ್ತಿರುವ ಸಹಕಾರ ಸಂಘ ಸಂಸ್ಥೆಗಳಿಂದ ಡಿಡಿ, ನೆಫ್ಟ… ಮೂಲಕ ಅಂತೂ 1.09 ಕೋಟಿ ರೂ.ಗಳನ್ನು ದೇಣಿಗೆ ರೂಪದಲ್ಲಿನೀಡಲಾಗುತ್ತಿದೆ. ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಘೋಟ್ನೇಕರ ಪ್ರಕಟಣೆಯಲ್ಲಿಈ ವಿಷಯ ತಿಳಿಸಿದ್ದಾರೆ. ಬ್ಯಾಂಕು ಈ ಸಂದರ್ಭದಲ್ಲಿಸರಕಾರದ ಜತೆ ಕೈಜೋಡಿಸುತ್ತಿದೆ. ರೈತ ಬಾಂಧವರು ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಹಕಾರ ಸಂಘಗಳು ರೈತರಿಗೆ ಅವಶ್ಯಕತೆ ಇರುವ ಮಾಸ್ಕಗಳನ್ನು ಪೂರೈಸಲು ಮುಂದಾಗಬೇಕು ಎಂದಿದ್ದಾರೆ.
Vijaya Karnataka 23 Apr 2020, 5:00 am