ಆ್ಯಪ್ನಗರ

ಬ್ರಹ್ಮಶ್ರೀ ನಾರಾಯಣ ಗುರುಗಳ 165ನೇ ಜಯಂತ್ಯುತ್ಸವ

ಮುಂಡಗೋಡ : ''ನಮಗೆ ಸಲ್ಲದ ವಿಷಯವನ್ನು ಹಿಡಿದುಕೊಂಡು ಇತರರೊಂದಿಗೆ ಹೋರಾಟ ಮಾಡುವುದರಲ್ಲಿಅರ್ಥವಿಲ್ಲ. ನಮಗೆ ಬೇಕಾದುದ್ದನ್ನು ನಾವೇ ಮಾಡಿಕೊಳ್ಳಬೇಕು. ನಮಗೆ ಜ್ಞಾನ ಮತ್ತು ಸಾಮರ್ಥ್ಯ ಇದೆ ನಾವು ಬೆಳೆಯಬೇಕು'' ಎಂದು ಸಾಹಿತಿ ಮತ್ತು ನಿವೃತ್ತ ಶಿಕ್ಷಕ ಸುಮುಖಾನಂದ ಜಲವಳ್ಳಿ ಹೇಳಿದರು.

Vijaya Karnataka 15 Sep 2019, 5:00 am
ಮುಂಡಗೋಡ : ''ನಮಗೆ ಸಲ್ಲದ ವಿಷಯವನ್ನು ಹಿಡಿದುಕೊಂಡು ಇತರರೊಂದಿಗೆ ಹೋರಾಟ ಮಾಡುವುದರಲ್ಲಿಅರ್ಥವಿಲ್ಲ. ನಮಗೆ ಬೇಕಾದುದ್ದನ್ನು ನಾವೇ ಮಾಡಿಕೊಳ್ಳಬೇಕು. ನಮಗೆ ಜ್ಞಾನ ಮತ್ತು ಸಾಮರ್ಥ್ಯ ಇದೆ ನಾವು ಬೆಳೆಯಬೇಕು'' ಎಂದು ಸಾಹಿತಿ ಮತ್ತು ನಿವೃತ್ತ ಶಿಕ್ಷಕ ಸುಮುಖಾನಂದ ಜಲವಳ್ಳಿ ಹೇಳಿದರು.
Vijaya Karnataka Web 165th jayantiyutva of brahmashree narayana guru
ಬ್ರಹ್ಮಶ್ರೀ ನಾರಾಯಣ ಗುರುಗಳ 165ನೇ ಜಯಂತ್ಯುತ್ಸವ


ತಾಲೂಕಿನ ನ್ಯಾಸರ್ಗಿ ಗ್ರಾಮದಲ್ಲಿಬ್ರಹ್ಮಶ್ರೀ ನಾರಾಯಣ ಗುರುಗಳ 165ನೇ ಜಯಂತ್ಯುತ್ಸವದಲ್ಲಿಅವರು ಉಪನ್ಯಾಸ ನೀಡಿದರು. 19ನೇ ಶತಮಾನದಲ್ಲಿನಾರಾಯಣ ಗುರುಗಳ ಅವತಾರವಾಯಿತು. ಶೈಕ್ಷಣಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ರಂಗಗಳಲ್ಲಿಕ್ರಾಂತಿ ಮಾಡಿದ್ದಾರೆ. ನಾರಾಯಣ ಗುರುಗಳು ಮೊದಲು ನಾವು ವಿದ್ಯಾವಂತರಾಗಬೇಕು. ಬೇರೆಯವರು ನಮ್ಮನ್ನು ಉದ್ಧಾರ ಮಾಡುವುದಿಲ್ಲ. ನಮ್ಮ ಉದ್ಧಾರ ನಮ್ಮ ಕೈಯಲ್ಲಿಯೇ ಇರುವುದು. ಅವರು ದೇವಾಲಯಗಳನ್ನು ಕಟ್ಟಿದ್ದಾರೆ. ದೇವಾಲಯಗಳಲ್ಲಿಕನ್ನಡಿ ಮಾತ್ರ ಇದೆ. ಶಿಕ್ಷಣಕ್ಕೆ ಬಹಳ ಮಹತ್ವವನ್ನು ಕೊಟ್ಟರು. ಮದ್ಯ ವಿಷ ಮಾರಬೇಡಿ, ಸೇವನೆ ಮಾಡಬೇಡಿ. ಮದ್ಯ ಸೇವನೆಯಿಂದ ಮಾನವ ಪಶುವಾಗುತ್ತಾನೆ. ವಿವೇಚನಾ ಶಕ್ತಿ ಹಾಳಾಗುತ್ತದೆ ಎಂದು ಸಾರಿದ್ದಾರೆ. ಸಾತ್ವಿಕ ಜೀವನ ಮಾರ್ಗವನ್ನು ಅನುಸರಿಸಿ ಇತರರ ಆದರಕ್ಕೆ ಪಾತ್ರರಾಗಿ ಶುದ್ಧ ಜೀವನ ಅನುಸರಿಬೇಕು ಎಂದಿದ್ದಾರೆ. ದೇವರು ಒಬ್ಬನೇ ಎಂಬ ಸಂದೇಶವನ್ನು ಸಾರಿದ್ದಾರೆ. ಸಂದೇಶವನ್ನು ಅನುಸರಿಸಿ ಸಮಾಜಮುಖಿಯಾಗಿ ಮುಂದುವರಿಯಬೇಕು ಎಂದು ಅವರು ಹೇಳಿದರು.

ಶಿರಸಿ ಅರಣ್ಯ ಸಂಚಾರಿ ದಳ ಡಿಎಫ್‌.ಒ. ಯು.ಡಿ.ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮನುಷ್ಯನ ರಕ್ತ ಒಂದೇ. ಒಂದೇ ಧರ್ಮ ಎಲ್ಲರಲ್ಲೂಪರಮಾತ್ಮ ಇರುತ್ತಾನೆ ಎಂದರು. ತಹಸೀಲ್ದಾರ್‌ ಶ್ರೀಧರ ಮುಂದಲಮನಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ 19ನೇ ಶತಮಾನದಲ್ಲಿನಾರಾಯಣ ಗುರುಗಳು ಮತ್ತು 10ನೇ ಶತಮಾನದಲ್ಲಿಪಂಪ ಮತ್ತು 12ನೇ ಶತಮಾನದಲ್ಲಿಬಸವಣ್ಣನಂತಹ ಮಹಾತ್ಮರು ಈ ಭೂಮಿ ಮೇಲೆ ಕ್ರಾಂತಿಯನ್ನು ಮಾಡಿದ್ದಾರೆ ಎಂದರು. ಟ್ರಸ್ಟನ ಅಧ್ಯಕ್ಷ ಸಿ.ಕೆ.ಅಶೋಕ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ವೇಳೆ ಎ.ಸಿ.ಎಫ್‌. ಎಸ್‌.ಎಂ.ವಾಲಿ, ಪ.ಪಂ.ಅಧ್ಯಕ್ಷ ಸಂಗನಬಸಯ್ಯ, ಪ.ಪಂ.ಸದಸ್ಯ ಅಶೋಕ ಚಲವಾದಿ, ಓಂ ಗ್ಯಾಸ್‌ ಮಾಲೀಕರಾದ ಬಸವರಾಜ ಓಶಿಮಠ, ನಾಮಧಾರಿ ಈಡಿಗ ಬಿಲ್ಲವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಾಗರಾಜ ನಾಯ್ಕ, ಕುಮಾರ ಕೃಷ್ಣನ್‌, ಪಿ.ಜಿ.ಪುರುಷನ್‌ ಇದ್ದರು. ಉಷಾ ವಾಸುದೇವನ್‌ ಮತ್ತು ಜಮುನಾ ಸತ್ಯನ್‌ ಪ್ರಾರ್ಥಿಸಿದರು. ಎನ್‌.ಎಸ್‌. ಸುರೇಶ ಸ್ವಾಗತಿಸಿದರು. ದಯಾನಂದ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ