ಆ್ಯಪ್ನಗರ

ಸತತ 17ನೇ ಬಾರಿ ವೀರಾಗ್ರಣಿ ಪ್ರಶಸ್ತಿ

ಶಿರಸಿ : ತಾಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿಇಲ್ಲಿಯ ಮಾರಿಕಾಂಬಾ ಸರಕಾರಿ ಪ್ರೌಢಶಾಲೆಯು ಸತತ 17ನೇ ಬಾರಿ ವೀರಾಗ್ರಣಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

Vijaya Karnataka 26 Sep 2019, 5:00 am
ಶಿರಸಿ : ತಾಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿಇಲ್ಲಿಯ ಮಾರಿಕಾಂಬಾ ಸರಕಾರಿ ಪ್ರೌಢಶಾಲೆಯು ಸತತ 17ನೇ ಬಾರಿ ವೀರಾಗ್ರಣಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
Vijaya Karnataka Web 383624SRS3_26


ಅನೀಶ ಹೊನ್ನಿ 800 ಮೀ ಓಟ, ಮಲ್ಲಿಕ್‌ ರೆಹಾನ್‌ ಶೇಖ್‌ ಹ್ಯಾಮರ್‌ ಎಸೆತದಲ್ಲಿಪ್ರಥಮ, ನಿತಿನ್‌ ನಾಯ್ಕ 400ಮೀ ಓಟ, ಭುವನ ಗೌಡ್ರು ಪೋಲ್‌ವಾಲ್ಟ್‌, ಅರುಣ ನಾಯ್ಕ 3000ಮೀ ಓಟ, ಪಕ್ರುದ್ದೀನ ಎಚ್‌. ಹ್ಯಾಮರ ಎಸೆತದಲ್ಲಿದ್ವಿತೀಯ, ಶಶಾಂಕ ದೇವಡಿಗಾ ಯೋಗಾಸನ, ಓಂಕಾರ ನಾಯ್ಕ ಯೋಗಾಸನ, ಅಪೂರ್ವ ಭಂಡಾರಕರ ಯೋಗಾಸನ, ಆದರ್ಶ ಭಟ್ಟ ಚೆಸ್‌, ನವ್ಯ ಭಟ್ಟ ಗುಂಡು ಎಸೆತದಲ್ಲಿಪ್ರಥಮ, ನುಸ್ರತ್‌ ಬಿ.ಕೆ ಗುಂಡು ಎಸೆತ, ಜಾವಲಿನ ಎಸೆತ, ಸುವರ್ಣ ಶೇಟ್‌ 100 ಮೀ ಹರ್ಡಲ್ಸನಲ್ಲಿದ್ವೀತಿಯ, ಬಾಲಕರ 4*100 ಮೀ ರೀಲೆ ಪ್ರಥಮ, ಬಾಲಕರ ಕಬ್ಬಡ್ಡಿ, ಬಾಲಕಿಯರ ಥ್ರೋಬಾಲ್‌, ಬಾಲಕಿಯರ ಖೋ ಖೋ ದ್ವೀತಿಯ ಸ್ಥಾನ ಪಡೆದಿದೆ.

ತಾಲೂಕು ಮಟ್ಟದ 8ನೇ ತರಗತಿ 14 ವರ್ಷದೊಳಗಿನ ಕ್ರೀಡಾಕೂಟದಲ್ಲಿಪೂಜನ್‌ ಬೋರ್ಕರ್‌ 100 ಮೀ ಓಟ, ಪ್ರದೀಪ ಶೆಟ್ಟಿ -400 ಮೀ ಓಟ, ಚಂದನ ಚಕ್ರ ಎಸೆತ, ಅಖಿಲ್‌ ಹೆಗಡೆ ಶಟಲ್‌ ಬ್ಯಾಡ್ಮಿಂಟನ್‌, ಟೇಬಲ್‌ ಟೆನ್ನಿಸ್‌, ಪೂರ್ಣಿಮಾ ಹಿರೂರ 600 ಮೀ ಓಟ, ಅಶ್ವಿನಿ ಕಾಶಿಬಾಯಿ 400 ಮೀ ಓಟ, ಹರ್ಷಿತಾ ಪೂಜಾರಿ ಎತ್ತರ ಜಿಗಿತ, ರೇಷ್ಮಾ ದೇವಡಿಗ ಚಕ್ರ ಎಸೆತದಲ್ಲಿಪ್ರಥಮ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳಿಗೆ ಎ.ಪಿ. ಶ್ರೀನಿವಾಸ, ಉದಯ ಶಿರಹಟ್ಟಿ ಮತ್ತು ಯಮುನಾ ನಾಯಕ ತರಬೇತಿ ನೀಡಿದ್ದರು. ವಿದ್ಯಾರ್ಥಿಗಳ ಸಾಧನೆಗೆ ಉಪಪ್ರಾಂಶುಪಾಲ ನಾಗರಾಜ ನಾಯ್ಕ ಹರ್ಷ ವ್ಯಕ್ತಪಡಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ