ಶಿರಸಿ : ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಸಲದ ಚುನಾವಣೆಯಲ್ಲಿ ನೋಟಾ ಮತ ಚಲಾವಣೆ ದೊಡ್ಡ ಪ್ರಮಾಣದಲ್ಲಿ ಆಗುತ್ತದೆ ಎಂಬ ಅಭಿಪ್ರಾಯಗಳು ವ್ಯಾಪಕವಾಗಿದ್ದವು. ಆದರೆ ಹಾಗಾಗಿಲ್ಲ ಎಂಬ ಅನಿಸಿಕೆ ಈಗ ವ್ಯಕ್ತವಾಗುತ್ತಿದೆ.
ಮತ ಎಣಿಕೆಯ ನಂತರದಲ್ಲಿ ಬಹಿರಂಗವಾದಂತೆ ಈ ಬಾರಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಹದಿನಾರು ಸಾವಿರಕ್ಕೂ ಹೆಚ್ಚು ಮಂದಿ ನೋಟಾ ಮತ ಚಲಾವಣೆ ಮಾಡಿದ್ದಾರೆ. ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲೂ ಇದು ಕಂಡುಬರುತ್ತಿದೆ. ಆದರೂ ಈ ಪ್ರಮಾಣ ನಿರೀಕ್ಷೆಯಷ್ಟು ಇಲ್ಲ, ಇನ್ನೂ ಹೆಚ್ಚಾಗುತ್ತದೆ ಎನ್ನುವ ನಿರೀಕ್ಷೆಗೆ ಬೇರೆ ಬೇರೆ ಕಾರಣಗಳು ಇದ್ದವು ಎಂದು ಕೆಲವರು ಹೇಳುತ್ತಾರೆ.
ಕಾಂಗ್ರೆಸ್ ವಲಯದಲ್ಲಿ... : ಈ ಬಾರಿ ಕಾಂಗ್ರೆಸ್ ನ ಕಟ್ಟಾ ಮತದಾರರು ಅಭಿಮಾನಿಗಳು ಯಾರಿಗೆ ಮತ ಚಲಾಯಿಸಬೇಕು ಎಂಬ ಗೊಂದಲದಲ್ಲಿ ಸಿಲುಕಿದ್ದರು ಎಂಬುದು ಗಮನಾರ್ಹವಾಗಿದೆ. ಯಾಕೆಂದರೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇರಲಿಲ್ಲ.
ರಾಜ್ಯ ಮಟ್ಟದಲ್ಲಿ ಆಗಿರುವ ತೀರ್ಮಾನದ ಪ್ರಕಾರ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಕಣದಲ್ಲಿದ್ದರು. ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಟ್ಟಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿಯ ಬದಲಾಗಿ ಜೆಡಿಎಸ್ ಅಭ್ಯರ್ಥಿ ಸ್ಪರ್ಧೆಗೆ ಇಳಿದಿದ್ದರು.
ಈ ಸೀಟು ಹಂಚಿಕೆ ಜಿಲ್ಲಾ ಮಟ್ಟದಲ್ಲಿ ಯಾವುದೇ ಸಮಾಲೋಚನೆ ನಡೆಸದೆ ಆಗಿದ್ದರಿಂದ ಸ್ಥಳೀಯ ಕಾಂಗ್ರೆಸ್ ವಲಯದಲ್ಲಿ ತೀವ್ರ ನಿರಾಸೆ ಚುನಾವಣಾ ಪ್ರಚಾರದ ವೇಳೆಯಲ್ಲಿ ವ್ಯಕ್ತವಾಗತೊಡಗಿತು. ಚುನಾವಣೆಗೆ ವರ್ಷಗಟ್ಟಲೆ ಹಿಂದಿನಿಂದಲೇ ತಯಾರಿ ಮಾಡಿಕೊಂಡಿದ್ದರೂ ಕಾಂಗ್ರೆಸ್ ಪಕ್ಷ ದ ಅಭ್ಯರ್ಥಿಯೇ ಇಲ್ಲ ಎನ್ನುವಂತಾಗಿದ್ದು ಇದಕ್ಕೆಲ್ಲ ಕಾರಣವಾಗಿತ್ತು.
ಯಾರಿಗೂ ಮತವಿಲ್ಲ.. : ಕಾಂಗ್ರೆಸ್ಸಿಗರಿಗೆ ಬೇರೆ ಪಕ್ಷ ಕ್ಕೆ ಮತ ಹಾಕುವ ಅನಿವಾರ್ಯತೆ ಉಂಟಾಗಿದ್ದರೂ ಪಕ್ಷ ದ ಕಟ್ಟಾ ಕಾರ್ಯಕರ್ತರಿಗೆ ಮತದಾರರಿಗೆ ಅದಕ್ಕೆ ಮನಸ್ಸಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಇಂಥವರು ಮೈತ್ರಿಕೂಟದ ಅಭ್ಯರ್ಥಿಗೆ ಮತ ಹಾಕುವುದಕ್ಕೆ ಸಿದ್ಧರಿರಲಿಲ್ಲ. ಇನ್ನೊಂದೆಡೆ ಕಟ್ಟಾ ಎದುರಾಳಿ ಬಿಜೆಪಿ ಅಭ್ಯರ್ಥಿಗೆ ಮತ ಚಲಾವಣೆ ಮಾಡುವುದಂತೂ ಸಾಧ್ಯವೇ ಇಲ್ಲ. ಅಂದರೆ ಯಾರಿಗೂ ಮತ ಚುನಾವಣೆ ಇಲ್ಲ ಎಂಬ ಇಕ್ಕಟ್ಟಿನಲ್ಲಿ ಅನೇಕ ಕಾಂಗ್ರೆಸ್ಸಿಗರು ಇದ್ದಾರೆ ಎನ್ನುವ ಮಾತುಗಳು ಪಕ್ಷ ದ ವಲಯದಿಂದಲೇ ಕೇಳಿ ಬಂದಿದ್ದವು.
ನೋಟಾ ದತ್ತ ಗಮನ... : ಹೀಗೆ ಗೊಂದಲ, ನಿರಾಸೆಯಲ್ಲಿ ಇರುವಂತಹ ಕಾಂಗ್ರೆಸ್ನ ಕಟ್ಟಾ ಮತದಾರರು ನೋಟಾ ಮತ ಚುನಾವಣೆಯತ್ತ ಗಮನಹರಿಸಿದ್ದಾರೆ ಎಂದು ಪಕ್ಷ ದ ಕೆಲ ಮುಖಂಡರು ಕಾರ್ಯಕರ್ತರು ಚುನಾವಣೆಗೆ ಮುಂಚೆ ಹೇಳತೊಡಗಿದ್ದರು. ಆದರೆ ಈ ಬಗ್ಗೆ ನಿರ್ಧಿಷ್ಟ ಸ್ವರೂಪದ ಚರ್ಚೆ, ನಿರ್ಧಾರ ಏನೂ ಆಗಿರಲಿಲ್ಲ ಎಂಬುದು ಗಮನಾರ್ಹವಾಗಿದೆ.
ಇವೆಲ್ಲದರ ಮಧ್ಯೆಯೇ ಲೋಕಸಭಾ ಚುನಾವಣೆಯೂ ನಡೆದಿದ್ದು ತಿಂಗಳ ಅವಧಿಯ ನಂತರ ಫಲಿತಾಂಶ ಪ್ರಕಟವಾಗಿದೆ. ಮತ ಎಣಿಕೆಯ ನಂತರದ ಅಂಕಿ ಸಂಖ್ಯೆಗಳನ್ನು ಗಮನಿಸಿದಾಗ ಸಾಕಷ್ಟು ಪ್ರಮಾಣದಲ್ಲಿ ನೋಟಾ ಮತ ಚಲಾವಣೆ ಆಗಿದೆ. ಆದರೂ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಆಗುವ ಸಾಧ್ಯತೆಗಳು ಬಿದ್ದವು ಎಂದು ಕೆಲವರು ಹೇಳುತ್ತಾರೆ.
ನೋಟಾ ಚಲಾವಣೆ ವ್ಯರ್ಥ.. : ಯಾವೊಬ್ಬ ಅಭ್ಯರ್ಥಿಯೂ ಸಮರ್ಥನಲ್ಲ ಎಂಬ ಎಂಬ ಕಾರಣಕ್ಕೆ ಅದನ್ನು ದಾಖಲಿಸಲು ನೋಟಾ ಮತ ಚಲಾವಣೆ ಮಾಡಬಹುದು ಎನ್ನುವ ಜಾಗೃತಿ ಮತದಾರರ ವಲಯದಲ್ಲಿ ಸಾಕಷ್ಟು ಮೂಡಿದೆ ಎಂಬ ಅಭಿಪ್ರಾಯಗಳಿವೆ. ಆದರೂ ಇದಕ್ಕೆ ತದ್ವಿರುದ್ಧವಾದ ಪ್ರತಿಪಾದನೆಯೂ ಕೇಳಿ ಬರುತ್ತದೆ. ಯಾಕೆಂದರೆ ನೋಟ ಮೋಸ ಚುನಾವಣೆ ಮಾಡುವುದರಿಂದ ಪ್ರಯೋಜನ ಏನೂ ಇಲ್ಲ. ಅದು ವ್ಯರ್ಥ ಪ್ರಯತ್ನ ಎಂಬ ಪ್ರತಿಪಾದನೆ ಮಾಡುವವರು ಸಾಕಷ್ಟು ಮಂದಿ ಇದ್ದಾರೆ.
......
ಯಾವ ವಿಧಾನಸಭಾ ಕ್ಷೇತ್ರದಲ್ಲಿ ಎಷ್ಟು...?
ಈ ಬಾರಿ ಕುಮಟಾ ಮತ್ತು ಭಟ್ಕಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್ಚಿನ ನೋಟಾ ಮತಗಳು ಚಲಾವಣೆ ಆಗಿದೆ.
ಕುಮಟಾ -2408
ಭಟ್ಕಳ- 2298
ಕಾರವಾರ -2031
ಶಿರಸಿ- 2193,
ಯಲ್ಲಾಪುರ- 1029
ಹಳಿಯಾಳ -1628
ಖಾನಾಪುರ -2012
ಕಿತ್ತೂರು -1800 ಹೀಗೆ ಒಟ್ಟು 16 ಸಾವಿರಕ್ಕೂ ಹೆಚ್ಚು ನೋಟಾ ಮತ ಚುನಾವಣೆ ಆಗಿದೆ.
.....
ಮತ ಎಣಿಕೆಯ ನಂತರದಲ್ಲಿ ಬಹಿರಂಗವಾದಂತೆ ಈ ಬಾರಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಹದಿನಾರು ಸಾವಿರಕ್ಕೂ ಹೆಚ್ಚು ಮಂದಿ ನೋಟಾ ಮತ ಚಲಾವಣೆ ಮಾಡಿದ್ದಾರೆ. ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲೂ ಇದು ಕಂಡುಬರುತ್ತಿದೆ. ಆದರೂ ಈ ಪ್ರಮಾಣ ನಿರೀಕ್ಷೆಯಷ್ಟು ಇಲ್ಲ, ಇನ್ನೂ ಹೆಚ್ಚಾಗುತ್ತದೆ ಎನ್ನುವ ನಿರೀಕ್ಷೆಗೆ ಬೇರೆ ಬೇರೆ ಕಾರಣಗಳು ಇದ್ದವು ಎಂದು ಕೆಲವರು ಹೇಳುತ್ತಾರೆ.
ಕಾಂಗ್ರೆಸ್ ವಲಯದಲ್ಲಿ... : ಈ ಬಾರಿ ಕಾಂಗ್ರೆಸ್ ನ ಕಟ್ಟಾ ಮತದಾರರು ಅಭಿಮಾನಿಗಳು ಯಾರಿಗೆ ಮತ ಚಲಾಯಿಸಬೇಕು ಎಂಬ ಗೊಂದಲದಲ್ಲಿ ಸಿಲುಕಿದ್ದರು ಎಂಬುದು ಗಮನಾರ್ಹವಾಗಿದೆ. ಯಾಕೆಂದರೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇರಲಿಲ್ಲ.
ರಾಜ್ಯ ಮಟ್ಟದಲ್ಲಿ ಆಗಿರುವ ತೀರ್ಮಾನದ ಪ್ರಕಾರ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಕಣದಲ್ಲಿದ್ದರು. ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಟ್ಟಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿಯ ಬದಲಾಗಿ ಜೆಡಿಎಸ್ ಅಭ್ಯರ್ಥಿ ಸ್ಪರ್ಧೆಗೆ ಇಳಿದಿದ್ದರು.
ಈ ಸೀಟು ಹಂಚಿಕೆ ಜಿಲ್ಲಾ ಮಟ್ಟದಲ್ಲಿ ಯಾವುದೇ ಸಮಾಲೋಚನೆ ನಡೆಸದೆ ಆಗಿದ್ದರಿಂದ ಸ್ಥಳೀಯ ಕಾಂಗ್ರೆಸ್ ವಲಯದಲ್ಲಿ ತೀವ್ರ ನಿರಾಸೆ ಚುನಾವಣಾ ಪ್ರಚಾರದ ವೇಳೆಯಲ್ಲಿ ವ್ಯಕ್ತವಾಗತೊಡಗಿತು. ಚುನಾವಣೆಗೆ ವರ್ಷಗಟ್ಟಲೆ ಹಿಂದಿನಿಂದಲೇ ತಯಾರಿ ಮಾಡಿಕೊಂಡಿದ್ದರೂ ಕಾಂಗ್ರೆಸ್ ಪಕ್ಷ ದ ಅಭ್ಯರ್ಥಿಯೇ ಇಲ್ಲ ಎನ್ನುವಂತಾಗಿದ್ದು ಇದಕ್ಕೆಲ್ಲ ಕಾರಣವಾಗಿತ್ತು.
ಯಾರಿಗೂ ಮತವಿಲ್ಲ.. : ಕಾಂಗ್ರೆಸ್ಸಿಗರಿಗೆ ಬೇರೆ ಪಕ್ಷ ಕ್ಕೆ ಮತ ಹಾಕುವ ಅನಿವಾರ್ಯತೆ ಉಂಟಾಗಿದ್ದರೂ ಪಕ್ಷ ದ ಕಟ್ಟಾ ಕಾರ್ಯಕರ್ತರಿಗೆ ಮತದಾರರಿಗೆ ಅದಕ್ಕೆ ಮನಸ್ಸಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಇಂಥವರು ಮೈತ್ರಿಕೂಟದ ಅಭ್ಯರ್ಥಿಗೆ ಮತ ಹಾಕುವುದಕ್ಕೆ ಸಿದ್ಧರಿರಲಿಲ್ಲ. ಇನ್ನೊಂದೆಡೆ ಕಟ್ಟಾ ಎದುರಾಳಿ ಬಿಜೆಪಿ ಅಭ್ಯರ್ಥಿಗೆ ಮತ ಚಲಾವಣೆ ಮಾಡುವುದಂತೂ ಸಾಧ್ಯವೇ ಇಲ್ಲ. ಅಂದರೆ ಯಾರಿಗೂ ಮತ ಚುನಾವಣೆ ಇಲ್ಲ ಎಂಬ ಇಕ್ಕಟ್ಟಿನಲ್ಲಿ ಅನೇಕ ಕಾಂಗ್ರೆಸ್ಸಿಗರು ಇದ್ದಾರೆ ಎನ್ನುವ ಮಾತುಗಳು ಪಕ್ಷ ದ ವಲಯದಿಂದಲೇ ಕೇಳಿ ಬಂದಿದ್ದವು.
ನೋಟಾ ದತ್ತ ಗಮನ... : ಹೀಗೆ ಗೊಂದಲ, ನಿರಾಸೆಯಲ್ಲಿ ಇರುವಂತಹ ಕಾಂಗ್ರೆಸ್ನ ಕಟ್ಟಾ ಮತದಾರರು ನೋಟಾ ಮತ ಚುನಾವಣೆಯತ್ತ ಗಮನಹರಿಸಿದ್ದಾರೆ ಎಂದು ಪಕ್ಷ ದ ಕೆಲ ಮುಖಂಡರು ಕಾರ್ಯಕರ್ತರು ಚುನಾವಣೆಗೆ ಮುಂಚೆ ಹೇಳತೊಡಗಿದ್ದರು. ಆದರೆ ಈ ಬಗ್ಗೆ ನಿರ್ಧಿಷ್ಟ ಸ್ವರೂಪದ ಚರ್ಚೆ, ನಿರ್ಧಾರ ಏನೂ ಆಗಿರಲಿಲ್ಲ ಎಂಬುದು ಗಮನಾರ್ಹವಾಗಿದೆ.
ಇವೆಲ್ಲದರ ಮಧ್ಯೆಯೇ ಲೋಕಸಭಾ ಚುನಾವಣೆಯೂ ನಡೆದಿದ್ದು ತಿಂಗಳ ಅವಧಿಯ ನಂತರ ಫಲಿತಾಂಶ ಪ್ರಕಟವಾಗಿದೆ. ಮತ ಎಣಿಕೆಯ ನಂತರದ ಅಂಕಿ ಸಂಖ್ಯೆಗಳನ್ನು ಗಮನಿಸಿದಾಗ ಸಾಕಷ್ಟು ಪ್ರಮಾಣದಲ್ಲಿ ನೋಟಾ ಮತ ಚಲಾವಣೆ ಆಗಿದೆ. ಆದರೂ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಆಗುವ ಸಾಧ್ಯತೆಗಳು ಬಿದ್ದವು ಎಂದು ಕೆಲವರು ಹೇಳುತ್ತಾರೆ.
ನೋಟಾ ಚಲಾವಣೆ ವ್ಯರ್ಥ.. : ಯಾವೊಬ್ಬ ಅಭ್ಯರ್ಥಿಯೂ ಸಮರ್ಥನಲ್ಲ ಎಂಬ ಎಂಬ ಕಾರಣಕ್ಕೆ ಅದನ್ನು ದಾಖಲಿಸಲು ನೋಟಾ ಮತ ಚಲಾವಣೆ ಮಾಡಬಹುದು ಎನ್ನುವ ಜಾಗೃತಿ ಮತದಾರರ ವಲಯದಲ್ಲಿ ಸಾಕಷ್ಟು ಮೂಡಿದೆ ಎಂಬ ಅಭಿಪ್ರಾಯಗಳಿವೆ. ಆದರೂ ಇದಕ್ಕೆ ತದ್ವಿರುದ್ಧವಾದ ಪ್ರತಿಪಾದನೆಯೂ ಕೇಳಿ ಬರುತ್ತದೆ. ಯಾಕೆಂದರೆ ನೋಟ ಮೋಸ ಚುನಾವಣೆ ಮಾಡುವುದರಿಂದ ಪ್ರಯೋಜನ ಏನೂ ಇಲ್ಲ. ಅದು ವ್ಯರ್ಥ ಪ್ರಯತ್ನ ಎಂಬ ಪ್ರತಿಪಾದನೆ ಮಾಡುವವರು ಸಾಕಷ್ಟು ಮಂದಿ ಇದ್ದಾರೆ.
......
ಯಾವ ವಿಧಾನಸಭಾ ಕ್ಷೇತ್ರದಲ್ಲಿ ಎಷ್ಟು...?
ಈ ಬಾರಿ ಕುಮಟಾ ಮತ್ತು ಭಟ್ಕಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್ಚಿನ ನೋಟಾ ಮತಗಳು ಚಲಾವಣೆ ಆಗಿದೆ.
ಕುಮಟಾ -2408
ಭಟ್ಕಳ- 2298
ಕಾರವಾರ -2031
ಶಿರಸಿ- 2193,
ಯಲ್ಲಾಪುರ- 1029
ಹಳಿಯಾಳ -1628
ಖಾನಾಪುರ -2012
ಕಿತ್ತೂರು -1800 ಹೀಗೆ ಒಟ್ಟು 16 ಸಾವಿರಕ್ಕೂ ಹೆಚ್ಚು ನೋಟಾ ಮತ ಚುನಾವಣೆ ಆಗಿದೆ.
.....