ಜೊಯಿಡಾ: ತಾಲೂಕಿನ ನಾಗೋಡಾ ಗ್ರಾಮದ ಹತ್ತಿರ ಇರುವ ಖಾಸಗಿ ಜಮೀನಿನಲ್ಲಿ ಬೆಳೆದಿದ್ದ 3 ಶ್ರೀಗಂಧದ ಮರಗಳನ್ನು ಕಳ್ಳರು ಕತ್ತರಿಸಿ ಒಯ್ದಿದ್ದಾರೆ. ಅದರ ಕದ್ದೊಯ್ದ ಗಂಧದ ಕಟ್ಟಿಗೆಯ ಅಂದಾಜು ಮೊತ್ತ ಸುಮಾರು 2,00,000 ರೂ. ಎಂದು ಅಂದಾಜಿಸಲಾಗಿದೆ. ಜೊಯಿಡಾ ಸಿಪಿಐ ರಮೇಶ ಹೂಗಾರ, ಜೊಯಿಡಾ ವಲಯ ಅರಣ್ಯಾಧಿಕಾರಿ ಮಹಿಮ್ ಜನ್ನು ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಸಿಲನೆ ನಡೆಸಿದ್ದಾರೆ. ಜೊಯಿಡಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
3 ಶ್ರೀಗಂಧ ಮರ ಕಳವು
ಜೊಯಿಡಾ: ತಾಲೂಕಿನ ನಾಗೋಡಾ ಗ್ರಾಮದ ಹತ್ತಿರ ಇರುವ ಖಾಸಗಿ ಜಮೀನಿನಲ್ಲಿ ಬೆಳೆದಿದ್ದ 3 ಶ್ರೀಗಂಧದ ಮರಗಳನ್ನು ಕಳ್ಳರು ಕತ್ತರಿಸಿ ಒಯ್ದಿದ್ದಾರೆ. ಅದರ ಕದ್ದೊಯ್ದ ಗಂಧದ ಕಟ್ಟಿಗೆಯ ಅಂದಾಜು ಮೊತ್ತ ಸುಮಾರು 2,00,000 ರೂ. ಎಂದು ಅಂದಾಜಿಸಲಾಗಿದೆ. ಜೊಯಿಡಾ ಸಿಪಿಐ ರಮೇಶ ಹೂಗಾರ, ಜೊಯಿಡಾ ವಲಯ ಅರಣ್ಯಾಧಿಕಾರಿ ಮಹಿಮ್ ಜನ್ನು ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಸಿಲನೆ ನಡೆಸಿದ್ದಾರೆ. ಜೊಯಿಡಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
Vijaya Karnataka 27 Jul 2019, 5:00 am