ಆ್ಯಪ್ನಗರ

ಮುರುಡೇಶ್ವರ: ಕಡಲ ತೀರದಲ್ಲಿ ಅಲೆಗಳಲ್ಲಿ ಕೊಚ್ಚಿ ಹೋಗುತ್ತಿದ್ದವರ ರಕ್ಷಣೆ; ಒಬ್ಬ ನಾಪತ್ತ್ತೆ

ಲೈಫ್‌ ಗಾರ್ಡ್‌ ಸಿಬ್ಬಂದಿಯಾದ ಜಯರಾಮ ಹರಿಕಂತ್ರ ಚಂದ್ರಶೇಖರ ದೇವಾಡಿಗ ಹಾಗೂ ಪ್ರವಾಸಿ ಮಿತ್ರ ಮಂಜುನಾಥ ಶೇಟ್ ಅವರು ತಮ್ಮ ಪ್ರಾಣದ ಹಂಗನ್ನು ತೊರೆದು ಪ್ರವಾಸಿಗರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

Vijaya Karnataka Web 17 Mar 2019, 7:11 pm
ಕಾರವಾರ: ಇಲ್ಲಿನ ಮುರಡೇಶ್ವರ ಕಡಲ ತೀರದಲ್ಲಿ ಅಲೆಗಳ ರಭಸಕ್ಕೆ ಕೊಚ್ಚಿಹೋಗುತ್ತಿದ್ದ ನಾಲ್ವರು ಪ್ರವಾಸಿಗರನ್ನು ಲೈಫ್ ಗಾರ್ಡ್ ಗಳು ರಕ್ಷಿಸಿದ ಘಟನೆ ಭಾನುವಾರ ನಡೆದಿದೆ.
Vijaya Karnataka Web ನಾಪತ್ತೆ
ನಾಪತ್ತೆ


ಇನ್ನೊಬ್ಬ ಪ್ರವಾಸಿ ಕಣ್ಮರೆಯಾಗಿದ್ದು ಆತನಿಗಾಗಿ ಶೋಧ ಕಾರ್ಯ ನಡೆದಿದೆ.
ಚಾಮರಾಜನಗರದಿಂದ ಪ್ರವಾಸಕ್ಕೆ ಬಂದಿದ್ದ ಐದು ಜನರ ತಂಡ ಕಡಲಿನ ನೀರಿಗೆ ಇಳಿದಾಗ ಬಾರಿ ಅಲೆಗಳಿಗೆ ಕೊಚ್ಚಿಕೊಂಡು ಹೋಗುತ್ತಿದ್ದರು.

ಈ ವೇಳೆ ಲೈಫ್‌ ಗಾರ್ಡ್‌ ಸಿಬ್ಬಂದಿಯಾದ ಜಯರಾಮ ಹರಿಕಂತ್ರ ಚಂದ್ರಶೇಖರ ದೇವಾಡಿಗ ಹಾಗೂ ಪ್ರವಾಸಿ ಮಿತ್ರ ಮಂಜುನಾಥ ಶೇಟ್ ಅವರು ತಮ್ಮ ಪ್ರಾಣದ ಹಂಗನ್ನು ತೊರೆದು ಪ್ರವಾಸಿಗರಾದ ಯೋಗೇಶ್ ಸುರೇಶ ನಾಯ್ಕ ಸಿದ್ದರಾಜು ನಾಗರಾಜ ಶೆಟ್ಟಿ ರವೀಶ್‌ ಎಚ್. ಆಯ್ ಇವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿವಣ್ಣ ಮಡಿವಾಳ ಎಂಬುವವರು ಕಣ್ಮರೆಯಾದ ಪ್ರವಾಸಿ.

ಈ ವಿಷಯದ ಕುರಿತು ಮುರುಡೇಶ್ವರದ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ