ಆ್ಯಪ್ನಗರ

ಹಾಲು ಸಂಘಗಳಿಗೆ 50 ಸಾವಿರ ರೂ.ಷೇರು ಹಣ

ಶಿರಸಿ : ಹಾಲು ಉತ್ಪಾದಕ ಸಂಘಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಧಾರವಾಡ ಹಾಲು ಒಕ್ಕೂಟದ ವ್ಯಾಪ್ತಿಯ 25 ವರ್ಷ ಪೂರೈಸಿದ ಹಾಲು ಸಂಘಗಳಿಗೆ ಪ್ರತ್ಯೇಕ ಸ್ವತ್ತಾಗಿ 50 ಸಾವಿರ ರೂ. ಷೇರು ಹಣವನ್ನು ಉಡುಗೊರೆ ರೂಪದಲ್ಲಿ ನೀಡುವ ಉದ್ದೇಶವಿದೆ ಎಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ತಿಳಿಸಿದರು.

Vijaya Karnataka 24 Jun 2019, 5:00 am
ಶಿರಸಿ : ಹಾಲು ಉತ್ಪಾದಕ ಸಂಘಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಧಾರವಾಡ ಹಾಲು ಒಕ್ಕೂಟದ ವ್ಯಾಪ್ತಿಯ 25 ವರ್ಷ ಪೂರೈಸಿದ ಹಾಲು ಸಂಘಗಳಿಗೆ ಪ್ರತ್ಯೇಕ ಸ್ವತ್ತಾಗಿ 50 ಸಾವಿರ ರೂ. ಷೇರು ಹಣವನ್ನು ಉಡುಗೊರೆ ರೂಪದಲ್ಲಿ ನೀಡುವ ಉದ್ದೇಶವಿದೆ ಎಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ತಿಳಿಸಿದರು.
Vijaya Karnataka Web 50000 shares for milk associations
ಹಾಲು ಸಂಘಗಳಿಗೆ 50 ಸಾವಿರ ರೂ.ಷೇರು ಹಣ


ತಾಲೂಕಿನ ಅಗಸಾಲ ಬೊಮ್ಮನಳ್ಳಿಯಲ್ಲಿ ಹಾಲು ಉತ್ಪಾದಕರ ಸಂಘದ ಬೆಳ್ಳಿ ಹಬ್ಬವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ಸುಮಾರು 45 ಸಾವಿರ ಸದಸ್ಯರು ನಿತ್ಯ ಎರಡು ಹೊತ್ತು ಒಕ್ಕೂಟಕ್ಕೆ ಹಾಲು ನೀಡುತ್ತಿದ್ದು, ಸ್ಥಳೀಯವಾಗಿ ಗುಣಮಟ್ಟದ ಹಾಲನ್ನು ಸಂಘಗಳು ಸಂಗ್ರಹಿಸುತ್ತಿವೆ ಎಂದರು.

ದೇಶದಲ್ಲಿ ಸುಮಾರು 28 ಕಂಪನಿಗಳು ವಾಣಿಜ್ಯ ಉದ್ದೇಶದಿಂದ ಹಾಲಿನ ಉತ್ಪನ್ನಗಳ ವ್ಯಾಪಾರದಲ್ಲಿ ತೊಡಗಿ ಲಾಭ ಮಾಡಿಕೊಳ್ಳುತ್ತಿವೆ. ಆದರೆ ಕೆಎಂಎಫ್‌ನಂತಹ ಸಹಕಾರಿ ಹಾಲು ಒಕ್ಕೂಟಗಳು ಸಹಕಾರಿ ತತ್ವದಲ್ಲಿ ಮುನ್ನಡೆಯುತ್ತಿವೆ. ಲಾಭದ ಉದ್ದೇಶವಿಲ್ಲದೇ ರೈತಸ್ನೇಹಿಯಾಗಿ ಹೈನುಗಾರರ ಹಿತ ಕಾಯುತ್ತಿವೆ. ಈ ವ್ಯವಸ್ಥೆ ಇನ್ನೂ ಹೆಚ್ಚಿನ ಹಳ್ಳಿಗಳಿಗೆ ತಲುಪಬೇಕು, ಹಾಲಿನ ಗುಣಮಟ್ಟ ಹೆಚ್ಚಬೇಕು. ಹೀಗಾದರಷ್ಟೇ ನಾವು ಜಗತ್ತಿನ ಮಾರುಕಟ್ಟೆ ಪ್ರವೇಶಿಸಲು ಸಾಧ್ಯವಾಗಿ ಹಾಲು ಉತ್ಪಾದಕರಿಗೆ ಹೆಚ್ಚಿನ ದರ ಕೊಡಿಸಲು ಸಾಧÜ್ಯವಾಗುತ್ತದೆ ಎಂದರು.

ಹೈನುಗಾರಿಕೆ ಕೃಷಿಗೆ ಪೂರಕ ಉಪಕಸುಬಾಗಿದೆ. ರೈತರು ಹೈನುಗಾರಿಕೆಯಿಂದ ವಿಮುಖರಾಗದೇ ಮುಂದುವರಿದರೆ ನಮ್ಮ ಆರೋಗ್ಯ ಹಾಗೂ ತೋಟದ ಆರೋಗ್ಯ ಎರಡೂ ಉತ್ತಮವಾಗುವುದೆಂದರು.

ಜಿ.ಪಂ.ಸದಸ್ಯ ಜಿ.ಎನ್‌.ಹೆಗಡೆ ಮುರೇಗಾರ ಮಾತನಾಡಿ, ಪಶು ಆಹಾರಕ್ಕೆ ಸರಕಾರ ಹಾಗೂ ಒಕ್ಕೂಟವು ಶೇ.50 ಸಹಾಯಧನ ನೀಡುವಂತಾದರೆ ಮಾತ್ರ ಹೈನುಗಾರಿಕೆ ಉಳಿಯಲು ಸಾಧ್ಯ. ಸಹಾಯ ನೇರವಾಗಿ ನಮಗಲ್ಲದೆ ಪಶುಗಳಿಗೆ ತಲುಪಲು ಸಾಧ್ಯ ಎಂದರು.

ಮಂಗಳೂರು ಒಕ್ಕೂಟದ ನಿವೃತ್ತ ಜಂಟಿ ನಿರ್ದೇಶಕ ಡಿ.ಎಸ್‌.ಹೆಗಡೆ ಅವರು ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ಉತ್ಪಾದಕರ ಪಾತ್ರದ ಬಗ್ಗೆ ಉಪನ್ಯಾಸ ನೀಡಿದರು. ಹಿರಿಯರಾದ ವಿ.ಎನ್‌.ಹೆಗಡೆ ಬೊಮ್ನಳ್ಳಿ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಕೃಷಿಕರು ಪಶುಪಾಲನೆ ಉಪಕಸುಬಾಗಿ ಮುಂದುವರಿಸಿದರೆ ಕೃಷಿಯಲ್ಲಿ ಲಾಭವಿದೆ, ದೂರಗಾಮಿ ಹಿತವಿದೆ ಎಂದರು. ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿದರು.

ಬೆಳ್ಳಿ ಹಬ್ಬದ ಅಂಗವಾಗಿ ಸದಸ್ಯರಿಗೆ ಹಾಲು ಕ್ಯಾನ್‌ ವಿತರಣೆ ಮಾಡಲಾಯಿತು. ಉಪಯುಕ್ತ ಸೇವೆಗಾಗಿ ಹಾಲು ಸಂಘದ ಮಾಜಿ ಅಧ್ಯಕ್ಷ ರು ಹಾಗೂ ಮುಖ್ಯ ಕಾರ್ಯನಿರ್ವಾಹಕರನ್ನು ಸನ್ಮಾನಿಸಲಾಯಿತು. .

ಸಂಘದ ಅಧ್ಯಕ್ಷ ನರಸಿಂಹ ವಿ.ಹೆಗಡೆ ಬೊಮ್ನಳ್ಳಿ ಸ್ವಾಗತಿಸಿದರು. ಚಂದನ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯನಿರ್ವಾಹಕ ಭಾಸ್ಕರ ಹೆಗಡೆ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ